**ಬಾಂಧವ್ಯ ಜೆಸಿ ಸಪ್ತಾಹ**4ನೇ ದಿನವಾದ ಇಂದು ಆರೋಗ್ಯ ತಪಾಸಣಾ ಶಿಬಿರ
1 min read
**ಬಾಂಧವ್ಯ ಜೆಸಿ ಸಪ್ತಾಹ**4ನೇ ದಿನವಾದ ಇಂದು ಆರೋಗ್ಯ ತಪಾಸಣಾ ಶಿಬಿರ
*ಬಾಂಧವ್ಯ ಜೆಸಿ ಸಪ್ತಾಹ*
2021. ಶನಿವಾರ.
4ನೇ ದಿನವಾದ ಇಂದು ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಜೇಸಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷರಾದ ಚಂದ್ರಶೇಖರ ಕುನ್ನಹಳ್ಳಿ ವಹಿಸಿದರು.
ಸ್ವಾಗತವನ್ನು ನಿಕಟಪೂರ್ವ ಅಧ್ಯಕ್ಷರಾದ ಜೇಸಿ ರವಿಕುಮಾರ ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿ ಜೆಸಿ ಪೂರ್ವ ಅಧ್ಯಕ್ಷರಾದ ಹಳೆಕೋಟೆ ರಮೇಶ್,
ಶ್ರೀ ಮಂಚೆಗೌಡರು ಚಂದನ ವೈನ್ ಮಾಲೀಕರು, ಅಲ್ತಾಫ್ ಬೀಳುಗಳ ಫಿಸ್ ಅಂಡ್ ಅವರ್ನೆಸ್ ಅಧ್ಯಕ್ಷರು,
ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು,
ಜೆಸಿರೆಟ್ ಅಧ್ಯಕ್ಷರಾದ ಸುಧಾ ಚಂದ್ರಶೇಖರ್, ಜೆಸಿರೇಟ್ ಕಾರ್ಯದರ್ಶಿ ಕೃತಿ ಪ್ರದೀಪ್,
ಜೇಸಿ ಸಪ್ತಾಹದ ಮಹಾನಿರ್ದೇಶಕರಾದ ಜೆಸಿ ಹಮೀದ್ ಸಬ್ಬೇನಹಳ್ಳಿ ,
ಈ ದಿನದ ಸಪ್ತಾಹದ ಪ್ರಾಜೆಕ್ಟ್ ಡೈರೆಕ್ಟರ್ K.N . ರವಿ ಕೂವೆ,
ಜೆಸಿ ಕಾರ್ಯದರ್ಶಿ ಜೇಸಿ ಶ್ರೇಷ್ಠಿ ಅವರು ವಂದಿಸಿದರು, ಕಾರ್ಯಕ್ರಮದಲ್ಲಿ ಜೆಸಿ ಜೆಸಿರೇಟ್ ಪೂರ್ವ ಅಧ್ಯಕ್ಷರು, ಜೇಸಿ ಜೆಸಿರೇಟ್ ಸದಸ್ಯರು ಪದಾಧಿಕಾರಿಗಳು ಆಗಮಿಸಿದ್ದರು.
ಕಾರ್ಯಕ್ರಮದ ನಂತರ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು, ಮತ್ತು ಮೂಡಿಗೆರೆ MGM ಆಸ್ಪತ್ರೆಯಲ್ಲಿ ಜೆಸಿ ಸದಸ್ಯರಿಗೆ ಮೂತ್ರಪಿಂಡ ಹಾಗೂ ಮೂತ್ರ ಕೋಶ ತಪಾಸಣೆಯನ್ನು ನಡೆಸಲಾಯಿತು.
4:00 ಗಂಟೆಗೆ ತ್ರಿಪುರ ಗ್ರಾಮದ ಜಾರ್ ಗಲ್ ಸಮುದಾಯಭವನದಲ್ಲಿ ಜೇಸಿ ವತಿಯಿಂದ ಆಟೋಟ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಜೆಸಿ ಸದಸ್ಯರಾದ ತ್ರಿಪುರ ಸುದೀಪ್ ರವರು ಕಾರ್ಯಕ್ರಮದ ಅಯೋಜನೆಯನ್ನು ಮಾಡಿದರು.
ಅಚ್ಚುಕಟ್ಟಾಗಿ ಆಯೋಜನೆ ಮಾಡಿದಂತಹ ಜೆಸಿ ಸದಸ್ಯರಾದ ಸುದೀಪ್, ಸಂಧ್ಯಾಸುದೀಪ್ ,
ರಮ್ಯಾ ಸಂದೇಶ,
ಸಾದಿನಿ ಉದಯ್ ರವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಮೂಡಿಗೆರೆ ಜೆಸಿ ಅಧ್ಯಕ್ಷರಾದ ಚಂದ್ರಶೇಖರ ಅರ್ಪಿಸಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/career/