ಶಾಸಕ ಎಂ.ಪಿ. ಕುಮಾರ ಸ್ವಾಮಿಯ ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ: #avintvcom
1 min read
ಶಾಸಕ ಎಂ.ಪಿ. ಕುಮಾರ ಸ್ವಾಮಿಯ ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ: ಅತಿವೃಷ್ಟಿ ಪ್ರದೇಶಗಳ ಪಟ್ಟಿಗೆ ಮೂಡಿಗೆರೆ ತಾಲ್ಲೂಕು ಸೇರ್ಪಡೆ.
ಕರ್ನಾಟಕ ರಾಜ್ಯದಲ್ಲಿ ಈ ಭಾರಿಯ ಮುಂಗಾರು ಮಳೆಗೆ ರಾಜ್ಯದ ಹಲವಾರು ಜಿಲ್ಲೆಗಳು ಅತಿಯಾದ ಮಳೆಯಿಂದಾಗಿ ಅತಿವೃಷ್ಟಿಗೆ ಒಳಗಾಗಿದ್ದ ಪರಿಣಾಮವಾಗಿ,
ಈ ಬಾರಿಯೂ ಪ್ರವಾಹವು ಹಲವಾರು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಹಾನಿಯನ್ನು ಉಂಟು ಮಾಡಿದ್ದು, ಜನ ಜೀವನವು ಸಂಕಷ್ಟಕ್ಕೆ ಸಿಲುಕಿತ್ತು.
ಇದನ್ನು ಗಮನಿಸಿದ ರಾಜ್ಯ ಸರ್ಕಾರವು ಸಂತ್ರಸ್ತರಿಗೆ ನೆರವನ್ನು ನೀಡಲು ಮುಂದಾಗಿತ್ತು.
ಅದರಂತೆ 2021ನೇ ಸಾಲಿನಲ್ಲಿ ಹಾನಿಗೊಳಗಾದ ಕರ್ನಾಟಕದ 13 ಜಿಲ್ಲೆಗಳ 61ತಾಲ್ಲೂಕುಗಳನ್ನು ಪಟ್ಟಿಮಾಡಿದ್ದು ಅದರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಾದ ಮೂಡಿಗೆರೆ ತಾಲ್ಲೂಕನ್ನು ಸೇರ್ಪಡೆ ಮಾಡದೆ ಹಾಗೆಯೇ ಬಿಟ್ಟಿತ್ತು.
ಇದನ್ನು ಗಮನಿಸಿದ ಮೂಡಿಗೆರೆ ಮೀಸಲು ಕ್ಷೇತ್ರದ ಜನ ಪ್ರತಿನಿಧಿಯಾದ
ಎಂ.ಪಿ.ಕುಮಾರ ಸ್ವಾಮಿಯು ಈ ತಾರತಮ್ಯವನ್ನು ವಿರೋಧಿಸಿ ಮೂಡಿಗೆರೆ ತಾಲ್ಲೂಕನ್ನು ಅತಿವೃಷ್ಟಿ ಪ್ರದೇಶಗಳ ಪಟ್ಟಿಗೆ ಸೇರಿಸದೆ ಬಿಟ್ಟಿರುವುದು ಮೂಡಿಗೆರೆಯ ಸಂತ್ರಸ್ತರಿಗೆ ಮಾಡಿದ ಅನ್ಯಾಯವೆಂದು ವಿಧಾನ ಸೌಧದ ಗಾಂಧಿ ಪ್ರತಿಮೆಯ ಎದುರು ಧರಣಿ ಕುಳಿತಿದ್ದರು.
ರಾಜ್ಯದಲ್ಲಿ ಅತೀ ಹೆಚ್ಚು ಮಳೆಯಾಗುವ ಮಲೆನಾಡಿನ ಭಾಗವಾದ ಮೂಡಿಗೆರೆ ತಾಲ್ಲೂಕಿನಲ್ಲಿ ಪ್ರತಿವರ್ಷದಂತೆ ಈ ಭಾರಿಯು ಮುಂಗಾರು ಮಳೆಗೆ ಹಲವಾರು ಮನೆಗಳು ಕುಸಿದು ಬಿದ್ದಿವೆ, ಅಪಾರ ಪ್ರಮಾಣದ ಆಸ್ತಿಯು ಬೆಳೆಯೂ ಹಾನಿಯಾಗಿದ್ದು ಈ ಭಾಗದ ಎಲ್ಲಾ ಕೃಷಿ ಕ್ಷೇತ್ರದ ರೈತರು, ಜನರು ಸಂಕಷ್ಟಕ್ಕೀಡಾಗಿದ್ದಾರೆಂದು ರೈತರ ಮತ್ತು ಸಂತ್ರಸ್ತರ ಪರವಾಗಿ ಪ್ರತಿಭಟಿಸಿದ್ದರು.
ಮೂಡಿಗೆರೆ ತಾಲ್ಲೂಕನ್ನು ಅತಿವೃಷ್ಟಿ ಪ್ರವಾಹ ಪೀಡಿತ ಪ್ರದೇಶವೆಂದು ಪರಿಗಣಿಸಬೇಕೆಂದು ಹೋರಾಟವನ್ನು ಮಾಡಿದ ಪ್ರತಿಫಲವಾಗಿ NDRF, SDRF,ಗೆ ಮೂಡಿಗೆರೆ ಕ್ಷೇತ್ರವನ್ನು ಸೇರಿಸಲಾಗಿದೆ.
ಮನೆ, ಜಮೀನು ಮತ್ತು ಬೆಳೆಹಾನಿ ಆದವರಿಗೆ ಪರಿಹಾರ ನೀಡಿ ಮಾನ್ಯ ಮುಖ್ಯ ಮಂತ್ರಿಯವರೇ ಎಂಬ ಪ್ರತಿಭಟನಾ ಕೂಗು ರಾಜ್ಯ ಸರ್ಕಾರವನ್ನು ತಲುಪಿ ಮೂಡಿಗೆರೆಯ ಜನತೆಗೆ ನ್ಯಾಯ ಸಿಕ್ಕಿದೆ.
ಶಾಸಕ ಎಂ.ಪಿ ಕುಮಾರ ಸ್ವಾಮಿಯವರ ಇಂತಹ ನಡೆಗಳು ಮುಂಬರುವ ಎಲ್ಲಾ ದಿನಗಳಲ್ಲಿ ರೈತರು, ಶ್ರೀ ಸಾಮಾನ್ಯರು ಮೂಡಿಗೆರೆಯ ಸಮಸ್ತ ಜನತೆಯ ಪರವಾಗಿರಲೆಂದು ಆಶಿಸುತ್ತೇವೆ.
“ಪ್ರತಿಭಟನೆಯು ಪ್ರಜಾಪ್ರಭುತ್ವದ ಬಹುದೊಡ್ಡ ಅಸ್ತ್ರ.”
ಬರಹ ಕೃಪೆ:
ಹೆಸಗಲ್ ವೆಂಕಟೇಶ್.
ವರದಿ: ಮಗ್ಗಲಮಕ್ಕಿ ಗಣೇಶ್.
ಬ್ಯುರೋ ನ್ಯೂಸ್.