ಅವಿನ್ ಟಿವಿಯ ವಿಶೇಷ **ಗದ್ದುಗೆಯಿಂದ ಗದ್ದೆಗೆ ಬಂದ ಶಾಸಕರು** ವರದಿ.ಮಗ್ಗಲಮಕ್ಕಿಗಣೇಶ್.ತಪ್ಪದೆವೀಕ್ಷಿಸಿ
1 min read
*ಸಾಪ್ರದಾಯಿಕ ಸಸಿ ನಾಟಿ*
ಚಿಕ್ಕಮಗಳೂರು ತಾಲ್ಲೂಕು ಅವತಿ ಹೋಬಳಿ, ಕಣತಿ ಅಂಚೆ, ಐದಳ್ಳಿ ಗ್ರಾಮದ ವಾಸಿಯಾದ ಶ್ರೀಯುತ ಹಾಲಯ್ಯ ರವರ ಗದ್ದೆಯಲ್ಲಿ 35 ವರ್ಷದಿಂದ ಬತ್ತದ ಬೆಳೆಯನ್ನ ಬೆಳೆಯುತ್ತಿದ್ದು, ಈ ಗದ್ದೆಯಲ್ಲಿ ಹಳ್ಳಿಯ ಸಾಂಪ್ರದಾಯಿಕವಾಗಿ ಗದ್ದೆಗಳನ್ನ ನಾಟಿ ಮಾಡಲಾಯಿತು, ಈ ಸಂದರ್ಭದಲ್ಲಿ ಮಹಿಳೆಯರು ಸಸಿಗಳನ್ನ ನಾಟಿ ಮಾಡುವ ಮೂಲಕ, ಹಿರಿಯರು ದನಗಳಲ್ಲಿ ಉಳುಮೆ ಮಾಡುವ ಮೂಲಕ ಯುವಕರು ಎಲ್ಲರಿಗು ಸಹಾಯ ಮಾಡುವ ಮೂಲಕ ಸಾಂಪ್ರದಾಯಿಕ ಗದ್ದೆ ನಾಟಿಗೆ ಸಾಕ್ಷಿಯಾಯಿತು. ಮದ್ಯಾಹ್ನ ಊಟವಾಗಿ ಗದ್ದೆಯಲ್ಲಿ ಎಲ್ಲರು ಒಟ್ಟಾಗಿ ಕುಳಿತುಕೊಂಡು ಹಳ್ಳಿ ಸೊಗಡಿನ ಕಡುಬು, ಕಳಲೆ, ಒಣಮೀನು ಸಾಂಬರ್ ನಲ್ಲಿ ಭೋಜನ ಮಾಡಲಾಯಿತು. ಇದನ್ನ ವೀಕ್ಷಿಸಲು ಮಕ್ಕಳು, ಮಹಿಳೆಯರು, ಸಾರ್ವಜನಿಕರು, ಆಗಮಿಸಿ ಹಳ್ಳಿ ಸಂಪ್ರದಾಯದ ಗದ್ದೆ ನಾಟಿಗೆ ಎಲ್ಲರು ಸಾಕ್ಷಿಯಾದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.