*ಅಧಿಕಾರ ಇದ್ದು ಅನಾಥನಾದ ಸ್ವಾಮಿ ಕುಮಾರ*#avintvcom
1 min read
*ಅಧಿಕಾರ ಇದ್ದು ಅನಾಥನಾದ ಸ್ವಾಮಿ ಕುಮಾರ*
**ಅತಿವೃಷ್ಟಿ,ಪ್ರವಾಹ ಪೀಡಿತ ತಾಲ್ಲೂಕುಗಳ ಪಟ್ಟಿಗೆ
ಮೂಡಿಗೆರೆ ಮೀಸಲು ಕ್ಷೇತ್ರ**
ಧರಣಿ ಕುಳಿತ ಶಾಸಕ ಎಂ.ಪಿ. ಕುಮಾರ ಸ್ವಾಮಿ.*
ಕರ್ನಾಟಕ ರಾಜ್ಯದಲ್ಲಿ ಈ ಭಾರಿಯ ಮುಂಗಾರು ಮಳೆಗೆ ರಾಜ್ಯದ ಹಲವಾರು ಜಿಲ್ಲೆಗಳು ಅತಿಯಾದ ಮಳೆಯಿಂದಾಗಿ ಅತಿವೃಷ್ಟಿಗೆ ಒಳಗಾಗಿವೆ.
ಈ ಬಾರಿಯೂ ಪ್ರವಾಹವು ಹಲವಾರು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಹಾನಿಯನ್ನು ಉಂಟು ಮಾಡಿದ್ದು, ಸರ್ಕಾರವು ಸಂತ್ರಸ್ತರಿಗೆ ನೆರವನ್ನು ನೀಡಲು ಮುಂದಾಗಿದೆ.
ಅದರಂತೆ 2021ನೇ ಸಾಲಿನಲ್ಲಿ ಹಾನಿಗೊಳಗಾದ ಕರ್ನಾಟಕದ 13 ಜಿಲ್ಲೆಗಳ 61ತಾಲ್ಲೂಕುಗಳನ್ನು ಪಟ್ಟಿಮಾಡಿದ್ದು ಅದರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಾದ ಮೂಡಿಗೆರೆ ತಾಲ್ಲೂಕನ್ನು ಸೇರ್ಪಡೆ ಮಾಡದೆ ಬಿಟ್ಟಿರುವುದು ಮೂಡಿಗೆರೆಯ ಸಂತ್ರಸ್ತರಿಗೆ ಮಾಡಿದ ಅನ್ಯಾಯ ವೆಂದು ಮೂಡಿಗೆರೆ ಮೀಸಲು ಕ್ಷೇತ್ರದ ಜನಪ್ರತಿನಿಧಿ ಎಂ.ಪಿ. ಕುಮಾರ ಸ್ವಾಮಿ ವಿಧಾನ ಸೌಧದ ಗಾಂಧಿ ಪ್ರತಿಮೆಯ ಎದುರು ಇಂದು ಧರಣಿ ಕುಳಿತಿದ್ದಾರೆ.
ರಾಜ್ಯದಲ್ಲಿ ಅತೀ ಹೆಚ್ಚು ಮಳೆಯಾಗುವ ಮಲೆನಾಡಿನ ಭಾಗವಾದ ಮೂಡಿಗೆರೆ ತಾಲ್ಲೂಕಿನಲ್ಲಿ ಪ್ರತಿವರ್ಷದಂತೆ ಈ ಭಾರಿಯು ಮುಂಗಾರು ಮಳೆಗೆ ಹಲವಾರು ಮನೆಗಳು ಕುಸಿದು ಬಿದ್ದಿವೆ, ಅಪಾರ ಪ್ರಮಾಣ ಆಸ್ತಿಯು ಬೆಳೆಯೂ ಹಾನಿಯಾಗಿದ್ದು ಈ ಭಾಗದ ಎಲ್ಲಾ ಕೃಷಿ ಕ್ಷೇತ್ರದ ರೈತರು ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಈ ಎಲ್ಲಾ ವಿದ್ಯಮಾನಗಳ ಅರಿವಿದ್ದು ರಾಜ್ಯ ಸರ್ಕಾರವು ಮೂಡಿಗೆರೆ ತಾಲ್ಲೂಕನ್ನು ಅತಿವೃಷ್ಟಿ ಪ್ರವಾಹ ಪೀಡಿತ ಪ್ರದೇಶವೆಂದು ಪರಿಗಣಿಸಿಲ್ಲವೆಂದು ತಮ್ಮ ಅಳಲನ್ನು ವ್ಯಕ್ತಪಡಿಸಿಸುತ್ತ NDRF, SDRF, ಗೆ ಮೂಡಿಗೆರೆ ಕ್ಷೇತ್ರವನ್ನು ಸೇರಿಸಿ ಹಾಗೂ ಮನೆ, ಜಮೀನು ಮತ್ತು ಬೆಳೆಹಾನಿ ಆದವರಿಗೆ ಪರಿಹಾರ ನೀಡಿ ಮಾನ್ಯ ಮುಖ್ಯ ಮಂತ್ರಿಯವರೇ ಎಂಬ ಪ್ರತಿಭಟನಾ ಫಲಕವನ್ನು ಹಿಡಿದು ವಿಧಾನ ಸೌಧದ ಗಾಂಧಿ ಪ್ರತಿಮೆಯ ಮುಂಭಾಗ ಧರಣಿ ಕುಳಿತು ಪ್ರತಿಭಟಿಸುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಇನ್ನೊಂದು ತಾಲ್ಲೂಕ್ಕಾದ
NR ಪುರ ತಾಲ್ಲೂಕನ್ನು ಪ್ರವಾಹ ಪೀಡಿತ ಪ್ರದೇಶವನ್ನು ಸೇರಿಸಲಾಗಿದೆ.
ಇತ್ತೀಚಿನ ರಾಜ್ಯಸರ್ಕಾರದ ವಿದ್ಯಾಮಾನಗಳನ್ನು ಗಮನಿಸಿ ನೋಡುವುದಾದರೆ,
ಮೂಡಿಗೆರೆ ತಾಲ್ಲೂಕನ್ನು ಉದ್ದೇಶಪೂರಕವಾಗಿ ಕೈಬಿಡಲಾಗಿದೆ ಎಂಬ ಸಂಶಯ ಮೂಡುತ್ತದೆ.
ರಾಷ್ಟ್ರನಾಯಕರು ಇರುವ ಚಿಕ್ಕಮಗಳೂರು ಜಿಲ್ಲೆಯು, ಹಾಗೂ ಮೀಸಲಾತಿ ಕ್ಷೇತ್ರವಾದ ಮೂಡಿಗೆರೆ ತಾಲ್ಲೂಕು ಪ್ರತಿಸಲವೂ ಒಂದಲ್ಲ ಒಂದು ರೀತಿಯಲ್ಲಿ ಕಡೆಗಣಿಸ್ಪಡುತ್ತಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಅದು ಏನೇ ಇರಲಿ ಅಭಿವೃದ್ಧಿಯ ದೃಷ್ಟಿಯಿಂದ ಜನಸಾಮಾನ್ಯರ ಹಿತದೃಷ್ಟಿಯಿಂದ ರಾಜಕೀಯ ವೈಷಮ್ಯಗಳನ್ನು ಬದಿಗೊತ್ತಿ ಜನರಿಗೆ ಸೇವೆ ನೀಡುವುದು ಬಹು ಮುಖ್ಯವಾಗಿದೆ.
ಈ ನಿಟ್ಟಿನಲ್ಲಿ ಮೂಡಿಗೆರೆ ಶಾಸಕ ಎಂ.ಪಿ. ಕುಮಾರ ಸ್ವಾಮಿಯವರ ಪ್ರಜಾಸತ್ತಾತ್ಮಕ ನಡೆಯ ಹೋರಾಟಕ್ಕೆ ರೈತರು ಜನ ಸಾಮಾನ್ಯರು ಕೈಜೋಡಿಸುವುದು ಅಗತ್ಯವಾಗಿದೆ.
ಕೆ. ಪಿ. ಪೂರ್ಣ ಚಂದ್ರತೇಜಸ್ವಿಯವರ ಮಾತಿನಂತೆ ಚಿಕ್ಕಮಗಳೂರು ಜಿಲ್ಲೆಯು ಶಾಪಗ್ರಸ್ತ ಜಿಲ್ಲೆ ಎಂಬ ಕಳಂಕವನ್ನು ದೂರಮಾಡಲು ಎಲ್ಲಾ ನಾಯಕರು ಜಿಲ್ಲೆಯಲ್ಲಿರುವ ಎಲ್ಲಾ ತಾಲ್ಲೂಕುಗಳ ಸಮಸ್ತ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದೆ ಜಿಲ್ಲೆಯ ರಾಜಕೀಯ ನಾಯಕರ ಧ್ಯೇಯವಾಗಬೇಕಿದೆ.
“ಪ್ರಜಾಸತ್ತೆಯ ಪ್ರಬಲ ಅಸ್ತ್ರವಾದ ಪ್ರತಿಭಟನೆಗೆ ಪ್ರತಿಫಲವು ಫಲಿಸಲಿ.”
ಬರಹ ಕೃಪೆ:
ಹೆಸಗಲ್ ವೆಂಕಟೇಶ್.
ವರದಿ: ಮಗ್ಗಲಮಕ್ಕಿ ಗಣೇಶ್.
ಬ್ಯುರೋ ನ್ಯೂಸ್.ಕುಮಾರ**