ರಾಜ್ಯಪಾಲರಾದ ಡಾ. ಥಾವರಚಂದ್ ಗೆಹಲಾಟ್ ಅವರಿಗೆ ಮನವಿ ಸಲ್ಲಿಸಲಾಯಿತು…#avintvcom
1 min read
*ರಾಜ್ಯಪಾಲರಿಗೆ ಮನವಿ*
ಕರ್ನಾಟಕ ಪಶುಸಂಗೋಪನ ಮತ್ತು ಮೀನುಗಾರಿಕಾ ವಿಶ್ವವಿದ್ಯಾಲಯ(KVAFSU), ಬೀದರ್,
ಇದು ಕರ್ನಾಟಕ ರಾಜ್ಯಾದ್ಯಂತ ತನ್ನ ವ್ಯಾಪ್ತಿ ಹೊಂದಿದ್ದು, ಅವಶ್ಯಕತೆ ಇರುವಷ್ಟು ಪ್ರಮಾಣದ ಬೋದಕ ಮತ್ತು ಬೋದಕೇತರ ಸಿಬ್ಬಂದಿ ಇಲ್ಲದಿರುವ ಕಾರಣ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿ ಕುಂಟಿತವಾಗಿದೆ. ಆದಕಾರಣ KVAFSU ವಿಶ್ವವಿದ್ಯಾಲಯಕ್ಕೆ ಸಿಬ್ಬಂದಿಗಳನ್ನು ಆದಷ್ಟು ಬೇಗ ನೇಮಕ ಮಾಡಿಕೊಡಬೇಕೆಂದು ವಿಶ್ವವಿದ್ಯಾಲಯದ ಚಾನ್ಸೆಲ್ಲರು ಸಹ ಆಗಿರುವ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಡಾ. ಥಾವರಚಂದ್ ಗೆಹಲಾಟ್ ಅವರಿಗೆ ಮನವಿ ಸಲ್ಲಿಸಲಾಯಿತು…
ಬೀದರ್ ನಗರದ ನಂದಿಗ್ರಾಮದಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ವಿಶ್ವವಿದ್ಯಾಲಯ, ಬೆಂಗಳೂರಿನ ಹೆಬ್ಬಾಳದಲ್ಲಿ ವಿಭಾಗೀಯ ಕಾರ್ಯಾಲಯ ಹೊಂದಿದೆ.
ಬೆಂಗಳೂರು, ಬೀದರ್, ಶಿವಮೊಗ್ಗ, ಗದಗ್ ಮತ್ತು ಹಾಸನ ನಗರಗಳಲ್ಲಿ ಪಶುವೈದ್ಯಕೀಯ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿದ್ದು, ಬೆಳಗಾವಿ ಜಿಲ್ಲೆಯ ಅಥಣಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಹೊಸ ಕಾಲೇಜುಗಳು ಆರಂಭವಾಗಬೇಕಿದ್ದು ಅಗತ್ಯ ಸಿಬ್ಬಂದಿಗಳ ನೇಮಕಾತಿಗಾಗಿ ಕಾದು ಕೂತಿವೆ.
ಶಿಗ್ಗಾವ್, ತಿಪಟೂರ್, ಶಹಪುರ್, ಹಾಸನ ಮತ್ತು ಗುಂಡ್ಲುಪೇಟೆಗಳಲ್ಲಿ ಐದು ಪಶುಸಂಗೋಪನ ಪಾಲಿಟೆಕ್ನಿಕ್ ಗಳಿದ್ದು, ಬೆಂಗಳೂರು ಸಮೀಪದ ಹೆಬ್ಬಾಳ ಮತ್ತು ಗುಲ್ಬರ್ಗದ ಸಮೀಪದ ಮಹಾಗಾoವ್ ಗಳಲ್ಲಿ ಹೈನುಗಾರಿಕಾ ಕಾಲೇಜುಗಳು ನಡೆಯುತ್ತಿವೆ.
ಮಂಗಳೂರು ನಗರದಲ್ಲಿ ಮೀನುಗಾರಿಕ ಕಾಲೇಜು ನಡೆಯುತ್ತಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಹದಿನೈದು ಸಂಶೋಧನ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.
ಈ ಎಲ್ಲಾ ಶೈಕ್ಷಣಿಕ ಕೇಂದ್ರಗಳಲ್ಲಿಯೂ ಶೇಕಡಾ ನಲವತ್ತರಷ್ಟು ಸಿಬ್ಬಂದಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಉಳಿದ ಶೇಕಡಾ 60 ರಷ್ಟು ಬೋದಕ ಮತ್ತು ಬೋದಕೇತರ ಸಿಬ್ಬಂದಿಗಳ ಕೆಲಸ ಸುಮಾರು ಏಳೆoಟು ವರ್ಷಗಳಿಂದ ಖಾಲಿಯಿದ್ದು ಶೈಕ್ಷಣಿಕ ಅಭಿವೃದ್ಧಿಗೆ ತೀವ್ರ ತೊಂದರೆಯಾಗಿದೆ.
ವಿಶ್ವವಿದ್ಯಾಲಯದ ಚಾನ್ಸೆಲ್ಲರೂ ಆಗಿರುವ ಗೌರವಾನ್ವಿತ ರಾಜ್ಯಪಾಲರು ಮದ್ಯೆ ಪ್ರವೇಶಿಸಿ, ಅಗತ್ಯವಿರುವ ಸಿಬ್ಬಂದಿವರ್ಗದವರನ್ನು ಕೂಡಲೇ ನೇಮಿಸಿಕೊಳ್ಳಲು ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಈ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ನಿರ್ದೇಶಕ ದೀಪಕ್ ದೊಡ್ಡಯ್ಯ ರಾಜ್ಯಪಾಲರನ್ನು ಕೋರಿದರು..
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.