.ಲಯನ್ಸ್ ಪದಗ್ರಹಣ….ಕಾರ್ಯಕ್ರಮ ಮೂಡಿಗೆರೆ ಪ್ಲಾಂಟರ್ಸ್ ಕ್ಲಬ್ಬಿನಲ್ಲಿ ನಡೆಯಿತು #avintvcom
1 min read
….ಲಯನ್ಸ್ ಪದಗ್ರಹಣ….
ತಾ|| 31 /07/ 2021 ರಂದು ಮೂಡಿಗೆರೆ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮೂಡಿಗೆರೆ ಪ್ಲಾಂಟರ್ಸ್ ಕ್ಲಬ್ಬಿನಲ್ಲಿ ನಡೆಯಿತು. 2021-22 ನೇ ಸಾಲಿನ ಅಧ್ಯಕ್ಷರಾಗಿ ಲಯನ್ ಬಿ.ಎಲ್.
ರಂಗನಾಥ ಗೌಡ , ಕಾರ್ಯದರ್ಶಿ ಯಾಗಿ ಲಯನ್ M E ಜಯಕುಮಾರ್ ಮಗ್ಗಲಮಕ್ಕಿ.
ಖಜಾಂಚಿಯಾಗಿ ಲಯನ್ ಸಿಪ್ರಿಯನ್ ಲೋಬೋ
ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಎರಡನೇ ಜಿಲ್ಲಾ ಉಪರಾಜ್ಯಪಾಲರಾದ ಲಯನ್ ಡಾ ll ಮೆಲ್ವಿನ್ ಡಿಸೋಜರವರು ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷರು ಹಾಗೂ 2021-22 ಸಾಲಿನ ವಲಯಾಧ್ಯಕ್ಷ ರಾದ ಲಯನ್ ಎಮ್.ಬಿ. ಗೋಪಾಲಗೌಡ ಹಾಗೂ ನಿರ್ಗಮಿತ ಕಾರ್ಯದರ್ಶಿ K. T. ದೇವಪ್ಪ ಗೌಡ ಹಾಗೂ ಖಜಾಂಚಿ U.E. ಪ್ರಭಾಕರ್ ಮತ್ತು ಮೂಡಿಗೆರೆ ಲಯನ್ಸ್ ನ ಪದಾಧಿಕಾರಿಗಳು ಹಾಗೂ ಎಲ್ಲಾ ಲಯನ್ಸ್ ಸದಸ್ಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ಲಯನ್ಸ್ ಸದಸ್ಯರಾದ M. D. ಜಯಪಾಲ್ ರವರಿಗೆ ಸನ್ಮಾನಿಸಲಾಯಿತು.
ಪ್ರತೀ ವರ್ಷ ತಾಲ್ಲೂಕಿನಲ್ಲಿ S S L C ಹಾಗು PUC ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಬಡ ವಿಧ್ಯಾರ್ಥಿ ಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ ಮಾಡುತ್ತಿರುವ ಲಯನ್ B K ಜಗಮೊಹನ್. ಹಾಗೂ ಲಯನ್ Y N ಪದ್ಮನಾಭ್ ಅವರನ್ನು ಸನ್ಮಾನಿಸಲಾಯಿತು. ಚಂದನ ಸುದ್ದಿ ಸಂಪಾದಕರಾದ ಸೋಮಶೇಖರ್ ಹಾಗೂ ಅವರ ಧರ್ಮಪತ್ನಿ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ದರ್ಪಣ ಪತ್ರಿಕೆಯ ಸಂಪಾದಕರಾದ ಗೌಡಹಳ್ಳಿ ಪ್ರಸನ್ನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್ ಇವರನ್ನು ಕೂಡ ಸನ್ಮಾನಿಸಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.