AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಅಂಧ ಮಕ್ಕಳ ಶಾಲೆ ಪ್ರಾರಂಭ* #avintvcom

1 min read
Featured Video Play Icon

*ಅಂಧ ಮಕ್ಕಳ ಶಾಲೆ ಪ್ರಾರಂಭ*

 

 

ಕಾಫಿಯ ತವರೂರು ಚಿಕ್ಕಮಗಳೂರಿನ ಕೆಂಪನಹಳ್ಳಿ ಬಡಾವಣೆಯಲ್ಲಿರುವ ರಾಜ್ಯ ಪ್ರಶಸ್ತಿ ಪುರಸ್ಕೃತ ಆಶಾ ಕಿರಣ ಅಂಧ ಮಕ್ಕಳ ಶಾಲೆಯು 1 ರಿಂದ 10 ನೇ ತರಗತಿಗಳನ್ನು  ಹೊಂದಿದ್ದು ಅನುಭವಿ ಶಿಕ್ಷಕ ವೃಂದವಿದೆ ಇಲ್ಲಿ  ರಾಜ್ಯ ಎಲ್ಲಾ ಭಾಗದ ಶೇ.50.ಕ್ಕಿಂತ ಹೆಚ್ಚು ದೃಷ್ಟಿದೋಷವುಳ್ಳ 6 ವರ್ಷಕ್ಕೆ ಮೇಲ್ಪಟ್ಟ 16 ವರ್ಷದೊಳಗಿನ  ಅಂಧಮಕ್ಕಳನ್ನು ಉಚಿತವಾಗಿ  ದಾಖಲಾತಿ ಮಾಡಿಕೊಳ್ಳಲಾಗುವುದು.ಯಾವುದೇ ಶುಲ್ಕ/ದೇಣಿಗೆಗಳು ಇರುವುದಿಲ್ಲ. ಅಂಧ ಬಾಲಕ  /ಬಾಲಕೀಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಇದ್ದು  ಸಾಮಾನ್ಯ ಪಠ್ಯಕ್ರಮದ ಜೊತೆಗೆ ಸಂಗೀತ,ತಾಳವಾದ್ಯ,ಕಂಪ್ಯೂಟರ್,ಕೈಕಸುಬು ಮತ್ತು ಆಟೋಟಗಳ ತರಬೇತಿಯನ್ನು  ನೀಡಲಾಗುವುದು.  ಮಕ್ಕಳಿಗೆ  ವಿದ್ಯಾಭ್ಯಾಸದ ಅವಧಿಯಲ್ಲಿ  ಉಚಿತ ಊಟ,ವಸತಿ,ಸಮವಸ್ತ್ರ,ವೈದ್ಯಕೀಯ  ಶುಶ್ರೂಸೆ,ಪಾಠೋಪಕರಣಗಳು,ಕ್ರೀಡೋಪಕರಣಗಳು ಹಾಗೂ  ಸಂಗೀತೋಪಕರಣಗಳನ್ನು ಒದಗಿಸಲಾಗುವುದು.ಜೊತೆಗೆ  ಅರ್ಹರಿಗೆ  ಬಸ್ ಪಾಸ್,ರೈಲ್ವೆ  ಪಾಸ್ಗಳನ್ನು ಮಾಡಿಸಿಕೊಡಲಾಗುವುದು.ಹಾಗೆಯೇ ಮಕ್ಕಳನ್ನು ನೋಡಲು ಬರುವ ತಂದೆ ತಾಯಿ ಹಾಗೂ ಪೋಷಕರಿಗು ಉಚಿತ ಊಟ ಹಾಗೂ ವಸತಿಯನ್ನು ಕಲ್ಪಿಸಲಾಗಿದೆ.  ಇದುವರೆಗೂ ಶಾಲೆಯಿಂದ ಹೊರಹೋಗಿರುವ ಹಿರಿಯ ವಿದ್ಯಾರ್ಥಿಗಳು ವಿವಿಧ ಸರ್ಕಾರಿ ಹಾಗೂ ಇತರೆ ಖಾಸಗಿ ಇಲಾಖೆಗಳಲ್ಲಿ  ಸೇವೆ ಸಲ್ಲಿಸುತ್ತಾ ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ.  ಈ ಶಾಲೆಯನ್ನು 1990 ರಲ್ಲಿ ಪ್ರಾರಂಬಿಸಿ ಇಂದಿಗೂ ಅತ್ಯುತ್ತಮವಾಗಿಮುನ್ನಡೆಸುತ್ತಿರುವವರು ಸಜ್ಜನರು,ಸಮಾಜ ಸೇವಕರು ಹಾಗೂ ಹೆಸರಾಂತ ಮಕ್ಕಳ ತಜ್ಞರು ಆದ ಡಾ/ ಜೆ.ಪಿ.ಕೃಷ್ಣೇಗೌಡರು ಮತ್ತು ಅವರ ನೇತೃತ್ವದ ಆಡಳಿತ ಮಂಡಳಿ. ಶಾಲೆಗೆ  ಬೆನ್ನೆಲುಬಾಗಿ ಸರ್ಕಾರ ಹಾಗೂ ದಾನಿಗಳ ನೆರವು ಇದೆ.  ಈ ಸಂಬಂದ ಅಂಧಮಕ್ಕಳು ಶಕ್ತಿ ಹೀನರು ಎಂದು ಭಾವಿಸದೆ ತಂದೆತಾಯಿ,ಪೋಷಕರು ಹಾಗೂ ನಾಗರಿಕರು ಈ ಮಕ್ಕಳನ್ನು ನಮ್ಮ ಶಾಲೆಗೆ ದಾಖಲಿಸುವ ಮೂಲಕ ವಿದ್ಯಾವಂತರಾಗಿ ಸಮಾಜದಲ್ಲಿ ಬದುಕು ರೂಪಿಸಿಕೊಳ್ಳಲು ನೆರವಾಗಬೇಕೆಂದು ತಮ್ಮಲ್ಲಿ ಪ್ರೀತಿ ಯಿಂದ ವಿನಂತಿಸಿಕೊಳ್ಳುತ್ತೇನೆ.ಹಾಗೆಯೇ ಶಾಲೆಗೆ  ದಾನಿಗಳಾಗಿ ಬರುವವರಿಗೂ ಪ್ರೀತಿಯ ಸ್ವಾಗತವಿದೆ..ಸಂಪರ್ಕಕ್ಕಾಗಿ :1.ಶ್ರೀ ಹೆಚ್. ಸಿ.ಮಹೇಶ್. ಗೌ”ಕಾರ್ಯದರ್ಶಿ..ಮೊ.9448138436..2.ಶ್ರೀ ಹೆಚ್. ಎಸ್. ಲಕ್ಷ್ಮೇಗೌಡ.ಮುಖ್ಯೋಪಾನ್ಯಾಯರು.ಮೊ.9481650801..3.ಶ್ರೀಮತಿ ಜಿ.ಬಿ.ಸುಧಾ.ವಾರ್ಡನ್.ಮೊ.7259281454.

 

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

Career | job

Navachaitanya Old Age Home

About Author