*ಸಾರ್ವಜನಿಕರ ಹಣಕ್ಕೆ ಲೆಕ್ಕ ಕೇಳುವರಿಲ್ಲವೆ*#avintvcom
1 min read
*ಸಾರ್ವಜನಿಕರ ಹಣಕ್ಕೆ ಲೆಕ್ಕ ಕೇಳುವರಿಲ್ಲವೆ*
ಬೆಂಗಳೂರು.
ರಾಜ್ಯ ರಾಜಧಾನಿಯ ವಿಧಾನ ಸೌಧದ ಮುಂಭಾಗ ಬಹಳ ವರ್ಷಗಳಿಂದ ಇದ್ದ ಭಾರತದ ಪ್ರಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಪ್ರತಿಮೆಯನ್ನು ಮೆಟ್ರೋ ಕಾಮಗಾರಿಯ ಕಾರಣದಿಂದ ಸ್ಥಳಾಂತರ ಮಾಡಲಾಗಿತ್ತು.
ಇದೀಗ ಮೆಟ್ರೋ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದಿವೆ. ವಿಧಾನಸೌಧದ ಮುಂಭಾಗ ಇದ್ದ ನೆಹರುರವರ ಪ್ರತಿಮೆಯು ಹಿಂದೆ ಇದ್ದ ಸ್ಥಳದಲ್ಲಿ ಈಗ ಪ್ರತಿಷ್ಠಾಪಿಸಲಾಗಿದೆ.
ಆದರೆ ಎಲ್ಲಾ ಕಾರ್ಯಗಳು ಮುಗಿದಿದ್ದರೂ ಸಹ ಇನ್ನೂ ಪ್ರತಿಮೆಗೆ ಮುಚ್ಚಿರುವ ಬಟ್ಟೆಯನ್ನು ತೆಗೆದು ಹಾಕಲಿಲ್ಲ.
ಈ ಬಗ್ಗೆ ಹೆಸರೇಳಲು ಇಚ್ಛಿಸದ ಕೆಲವು ಅಧಿಕಾರಿಗಳು ಹೇಳುವ ಪ್ರಕಾರ ಮತ್ತೆ ಪ್ರತಿಮೆಯ ಉದ್ಘಾಟನಾ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಸ ಬೇಕಂತೆ.
ಮತ್ತೆ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರ ತೆರಿಗೆ ಹಣವು ಇನ್ನೊಂದಿಷ್ಟು ಖರ್ಚುವೆಚ್ಚಗಳು ನಡೆಯಲಿದೆ.
ಈಗಾಗಲೇ ಈ ಹಿಂದೆ ಇದೇ ನೆಹರು ಪ್ರತಿಮೆ ಅನಾವರಣದ ಕಾರ್ಯಕ್ರಮವು ವಿಜ್ರಂಭಣೆಯಿಂದ ಸರ್ಕಾರವು ನಡೆಸಿತ್ತು. ಮತ್ತೊಮ್ಮೆ ಕಾರ್ಯಕ್ರಮ ನಡೆಸುವ ಅವಶ್ಯಕತೆ ಇದೆಯಾ?
ಪ್ರಚಾರ ಗಿಟ್ಟಿಸಿಕೊಳ್ಳಲು
ರಾಜಕಾರಣಿಗಳು ಕಾಯುತ್ತಿದ್ದಾರೆ.
ಸಾರ್ವಜನಿಕರ ತೆರಿಗೆ ಹಣ ದುಂದುವೆಚ್ಚ ಮಾಡದೆ ತಕ್ಷಣ ಪ್ರತಿಮೆಗೆ ಹೊದಿಸಿದ ಬಟ್ಟೆಗಳನ್ನು ಸಂಪೂರ್ಣವಾಗಿ ತೆಗೆದು ಪ್ರತಿಮೆ ಅನಾವರಣ ಮಾಡುವುದು ಒಳ್ಳೆಯದಲ್ಲವೇ?
ಈ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಆಡಳಿತದ ಚುಕ್ಕಾಣಿ ಹಿಡಿದವರಿಗೆ ಬರೆದು ಕಳುಹಿಸಿ.
ಹೆಚ್.ಎಂ ವೆಂಕಟೇಶ್ ಸಾಮಾಜಿಕ ಹೋರಾಟಗಾರರು..
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/career/