AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಭಿನಯ ಶಾರದೆಗೆ ಭಾವಪೂರ್ಣ ಶ್ರದ್ಧಾಂಜಲಿ#avintvcom

1 min read
Featured Video Play Icon

ಅಭಿನಯ ಶಾರದೆಗೆ ಭಾವಪೂರ್ಣ ಶ್ರದ್ಧಾಂಜಲಿ
ಕನ್ನಡ ಚಿತ್ರರಂಗದ ಖ್ಯಾತ ನಟಿ ಜಯಂತಿಯವರಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಬಣಕಲ್ ಇವರ ವತಿಯಿಂದ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ ಕೊಟ್ಟಿಗೆಹಾರದ ಸ್ಪೂರ್ತಿ ಮಿತ್ರಮಂಡಳಿ ಗ್ರಂಥಾಲಯದಲ್ಲಿ ನಡೆಯಿತು.
ತಾಲ್ಲೂಕು ಕನ್ನಡ ಸಾಹಿತ್ಯ ಪರೀಷತ್ತಿನ ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್ ಮಾತನಾಡಿ ಕನ್ನಡ ಚಿತ್ರರಂಗದ ಅಭಿನಯ ಶಾರದೆ ತನ್ನ ಅಭಿನಯದ ಪಯಣವನ್ನು ನಿಲ್ಲಿಸಿರುವುದು ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಠ. ಜಯಂತಿಯವರು ಬಹುಭಾಷ ನಟಿಯಾಗಿದ್ದು ತಮ್ಮ ಅದ್ಭುತ ನಟನೆಯ ಮೂಲಕ ಅನೇಕ ಪಾತ್ರಕ್ಕೆ ಜೀವ ತುಂಬುತಿದ್ದ ಕಲಾವಿದೆ. ಆದ್ದರಿಂದಲೇ ಅನೇಕ ಪ್ರಶಸ್ತಿಗಳ ಜೊತೆಗೆ “ಅಭಿನಯ ಶಾರದೆ”ಯೆಂದು ಜನಮಾನಸದಲ್ಲಿ ಅಮರರಾಗಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಘಟಕದ ಅಧ್ಯಕ್ಷರಾದ ವಸಂತ್ ಹಾರ್ಗೋಡು ಮಾತನಾಡಿ ಜೇನುಗೂಡು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಕನ್ನಡ ಚಿತ್ರರಂಗದಲ್ಲಿ ಅಭಿನಯದ ಮೂಲಕ ಬಹಳಷ್ಟು ಪಾತ್ರಗಳಿಗೆ ಜೀವ ತುಂಬುತಿದ್ದ ನಟಿ. ಎಡಕಲ್ಲು ಗುಡ್ಡದ ಮೇಲೆ, ಮಸಣದ ಹೂಗಳಂತಹ ಸಿನಿಮಾಗಳಲ್ಲಿ ಇವರ ನಟನೆ ಅದ್ಭುತವಾಗಿದ್ದು ನಟನೆಯ ಮೂಲಕ ಜಯಂತಿಯವರು ಎಂದೆಂದಿಗೂ ಅಮರರಾಗಿದ್ದಾರೆ ಎಂದರು.
ಜಯಪಾಲ್ ಬಿನ್ನಡಿ ಮಾತನಾಡಿ ಕನ್ನಡ ಚಿತ್ರರಂಗದಲ್ಲಿ “ಅಮ್ಮ ” ಎಂದೇ ಚಿರಪರಿಚಿತರಾದ ಜಯಂತಿಯವರು ಎಂತಹ ಪಾತ್ರಗಳಿದ್ದರೂ ಆ ಪಾತ್ರಕ್ಕೆ ಜೀವತುಂಬುತಿದ್ದವರು ಇವರ ಅಭಿನಯ ಉದಯೋನ್ಮುಖ ಕಲಾವಿದರಿಗೆ ಮಾದರಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಭಕ್ತೇಶ್. ಸ್ಥಳಿಯರಾದ ಶರತ್. ಕೇಶವ್.ಯಶೋಧ ಮತ್ತು ರೇಖಾ ಉಪಸ್ಥಿತರಿದ್ದರು.

ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೊ ನ್ಯೂಸ್ ಅವಿನ್ ಟಿವಿ

Career | job

Navachaitanya Old Age Home

About Author