AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಮಾನುಷವಾಗಿ ಕೈಕಾಲುಗಳನ್ನು ಕತ್ತರಿಸಿ ಮಾರಣಾಂತಿಕ ಹಲ್ಲೆ *ನೈಜಹೋರಾಟಗಾರರ ವೇದಿಕೆ*#avintvcom

1 min read
Featured Video Play Icon

ನೈಜಹೋರಾಟಗಾರರ ವೇದಿಕೆ

*ಅಟ್ಟಹಾಸ*

ಮಾಹಿತಿ ಹಕ್ಕು ಕಾರ್ಯಕರ್ತ ವೆಂಕಟೇಶ್ ಅವರನ್ನು ಅಮಾನುಷವಾಗಿ ಕೈಕಾಲುಗಳನ್ನು ಕತ್ತರಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದ ದುಷ್ಕರ್ಮಿಗಳ ಅಟ್ಟಹಾಸವೆ ಮೇಲುಗೈ ಸಾಧಿಸಿದೆ. ವೆಂಕಟೇಶ್ ಅವರು ಇನ್ನು ನೆನಪು ಮಾತ್ರ ಎಂದು ಹೇಳಲು ವಿಷಾದಿಸುತ್ತೇವೆ.
ಭ್ರಷ್ಟರು, ಭೂಗಳ್ಳರಿಗೆ ಸಿಂಹಸ್ವಪ್ನವಾಗಿದ್ದ ವೆಂಕಟೇಶ್, ಮನುಷ್ಯನ ರಾಕ್ಷಸಿ ಕ್ರೌರ್ಯಕ್ಕೆ ಬಲಿಯಾಗಿರುವುದು ನೋಡಿದರೆ ಅಧಿವೇಶನದ ಸಂದರ್ಭದಲ್ಲಿ ನಮ್ಮ ಮುಖ್ಯಮಂತ್ರಿಗಳ ಹೇಳಿಕೆ ಹತ್ಯೆಗೆ ಕುಮ್ಮಕ್ಕು ನೀಡಿದಂತಿದೆ.
ರಾಜ್ಯದ ಸಂಪನ್ಮೂಲಗಳನ್ನು ಭೂಗಳ್ಳರಿಂದ, ಸಾರ್ವಜನಿಕರ ತೆರಿಗೆ ಹಣವನ್ನು ಭ್ರಷ್ಟರು ಖದೀಮರಿಂದ ರಕ್ಷಿಸುವಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರ ಪಾತ್ರ ಬಹಳ ಮಹತ್ವದ್ದಾಗಿದೆ.
ಅವರನ್ನೇ ಸರ್ವನಾಶ ಮಾಡಿ ಮುಗಿಸುವ ಹಂತಕ್ಕೆ ನಮ್ಮನ್ನಾಳುವ ಜನಪ್ರತಿನಿಧಿಗಳು ಕುಮ್ಮಕ್ಕು ನೀಡುತ್ತಿರುವುದು ಸಂವಿಧಾನಬಾಹಿರ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಭಾವಿಸಬೇಕಾಗುತ್ತದೆ.
ಮೃತ ವೆಂಕಟೇಶ್ ಅವರ ಕುಟುಂಬವರ್ಗಕ್ಕೆ ಭಗವಂತನು ದುಃಖ ಭರಿಸುವ ಶಕ್ತಿ ನೀಡಲಿ ಹಾಗೂ ವೆಂಕಟೇಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.
ಓಂ ಶಾಂತಿ ಓಂ ಶಾಂತಿ ಓಂ ಶಾಂತಿ

ನೈಜ ಹೋರಾಟಗಾರರ ವೇದಿಕೆ
ಹೆಚ್. ಎಂ ವೆಂಕಟೇಶ
ಸಾಮಾಜಿಕ ಹೋರಾಟಗಾರರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author