AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ತಾಲ್ಲೂಕು*ಎಚ್ಚರ. ಮಲೆನಾಡಿಗರೆ ದರೊಡೆಕೊರರಿದ್ದಾರೆ*#avintvcom

1 min read
Featured Video Play Icon

ಮೂಡಿಗೆರೆ ತಾಲ್ಲೂಕು

*ಎಚ್ಚರ. ಮಲೆನಾಡಿಗರೆ ದರೊಡೆಕೊರರಿದ್ದಾರೆ*

ದಿನಾಂಕ 18-07-2021 ರಂದು ಮೂಡಿಗೆರೆ ಪೊಲೀಸ್ ಠಾಣಾ PSI ರವಿ ರವರು ರಾತ್ರಿ ಗಸ್ತು ಮಾಡುತ್ತಿರುವಾಗ, ಮುದ್ರೇಮನೆ ಬಸ್ ನಿಲ್ದಾಣ ಹಂಪ್ಸ್ ಬಳಿ ಯಾರೋ 4-5 ಜನರು ವಾಹನ ಅಡ್ಡಗಟ್ಟು ತಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಹೋಗಿ ಸಿಬ್ಬಂದಿ ಸಹಾಯದಿಂದ 4 ಜನರನ್ನು ವಶಕ್ಕೆ ಪಡೆದು ಪರಿಶೀಲಿಸಲಾಗಿ ಒಬ್ಬನ ಬಳಿ ಪಿಸ್ತೂಲ್, ಮತ್ತೊಬ್ಬನ ಬಳಿ ಡ್ರ್ಯಾಗನ್, ಮತ್ತೊಬ್ಬನ ಬಳಿ ಕಾರದ ಹುಡಿ,ಮತ್ತಿಬ್ಬರು ಬಳಿ ಕಬ್ಬಿಣದ ರಾಡು, ಟಾರ್ಚ್ ಇದ್ದು, ಇವರುಗಳ ಬಳಿ ಎರಡು ಮೋಟಾರು ಸೈಕಲ್ ಇದ್ದು KA 51 ಸಿ 1685, KA 18 W 7484 ಇದ್ದು ಸದರಿಯವರುಗಳು ನಿರ್ಜನ ಪ್ರದೇಶದಲ್ಲಿ ರಾತ್ರಿ ಸಮಯದಲ್ಲಿ ಮಾರಕಾಸ್ತ್ರಗಳನ್ನು ತೋರಿಸಿ ಹಣ/ ಬಂಗಾರ ದರೋಡೆ ಮಾಡುವ ಸಂಚಿನ ಬಗ್ಗೆ ಬಂದಿರುವುದಾಗಿ ತಿಳಿಸಿರುತ್ತಾರೆ.

ಈ ಬಗ್ಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಕೇಸ್ ನಂಬರ್.145/2021 ಕಾಯಿದೆ 399,402 ಐಪಿಸಿ ಮತ್ತು 3,25 ಆರ್ಮ್ಸ್ ಆಕ್ಟ್ ರೀತ್ಯಾ ಪ್ರಕರಣ ದಿನಾಂಕ 18-07-2021 ರಂದು ದಾಖಲಾಗಿದೆ.

ಆರೋಪಿತರು
1. ಕುಮಾರ@ ಶಿವು ಬಿನ್ ಶ್ರೀಕಂಠಮೂರ್ತಿ,29 ವರ್ಷ ಲಿಂಗಾಯತ ಜನಾಂಗ ವಾಸ ಬಿ ಹೋಸುರೂ ಮಂಡ್ಯ
2.ಕುಮಾರ ಸ್ವಾಮಿ @ ಹುಲೀವಲ ಚೇತನ ಬಿನ್ ನಂಜುಂಡೇಗೌಡ 23 ವರ್ಷ, ಒಕ್ಕಲಿಗ ಜನಾಂಗ ವಾಸ ಹುಲಿವಲ ಗ್ರಾಮ ಹೊಳೆನರಸೀಪುರ ಹಾಸನ
3.ಅಜಯ @ ಬಾಬು ಮರ್ಲೆ ಬಿನ್ ಸುನಿಲ್ ಸಿಂಗ್ ರಜಪೂತ್ 25 ವರ್ಷ ವಾಸ ಪಿಣ್ಯಾ ಬೆಂಗಳೂರು.
4. ಶಿವ ಕುಮಾರ ಬಿನ್ ರಾಮ ಪುಜಾರಿ 40 ವರ್ಷ ವಾಸ ಕೊಟ್ಟಿಗೆ ಹಾರ ಬಣಕಲ್ ಮೂಡಿಗೆರೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author