“ನಮ್ಮ ನಡೆ ಭೂಮಿ ಕಡೆ” ಮೂಡಿಗೆರೆಯಲ್ಲಿ ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ.#avintvcom
1 min read
“ನಮ್ಮ ನಡೆ ಭೂಮಿ ಕಡೆ” ಮೂಡಿಗೆರೆಯಲ್ಲಿ ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ.
ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿ ವ್ಯಾಪ್ತಿಗೆ ಬರುವ ಬೆಳಗೂಡು ಗ್ರಾಮದ ಸುಮಾರು 17ಕುಟುಂಬಗಳ ಭೂಮಿಯನ್ನು ಅರಣ್ಯ ಇಲಾಖೆಯು ತನ್ನ ವಶಕ್ಕೆ ಪಡೆದುಕೊಳ್ಳುವ ಮೂಲಕ ದಲಿತರ ಬದುಕನ್ನು ಕಸಿದುಕೊಂಡಿದೆ ಎಂದು ಬೆಳಗೂಡು ಗ್ರಾಮಸ್ಥರು, ಮೂಡಿಗೆರೆಯ ವಿವಿಧ ಪಕ್ಷಗಳು ಹಾಗೂ ಜನಪರ ಸಂಘಟನೆಗಳು ಸೋಮವಾರ ಅರಣ್ಯ ಇಲಾಖೆಯ ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದರು..
ಬೆಳಗೂಡು ಭೂವಂಚಿತ ಪರಿಶಿಷ್ಟ ಜಾತಿ ಮಂಜೂರುದಾರರ ವೇದಿಕೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಇದರ ಜೊತೆಗೆ ಬಹುಜನ ಸಮಾಜ ಪಕ್ಷ ಮೂಡಿಗೆರೆ,ಸಿ ಪಿ ಐ, ಹಾಗೂ ಚಲವಾದಿ ಮಹಾ ಸಭಾ ಸಂಘಟನೆಗಳ ಸಾಥ್ ಪಡೆದುಕೊಂಡು ಬೃಹತ್ ಪ್ರತಿಭಟನೆ ನಡೆಸಲಾಯಿತು ಈ ಒಂದು ಪ್ರತಿಭಟನೆ ಉದ್ದೇಶಿಸಿ ಸಿ ಪಿ ಐ ನ ರಾಜ್ಯ ಕಾರ್ಯದರ್ಶಿ ಬಿ ರುದ್ರಯ್ಯ, ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕಿರ್ ಹುಸೇನ್,ಬಿ ಎಸ್ ಪಿ ಯ ಜಿಲ್ಲಾ ಸಂಯೋಜಕರು ಯು ಬಿ ಮಂಜಯ್ಯ, ಕಾಂಗ್ರೆಸ್ ನ ಮುಖಂಡ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಂ ಎಸ್ ಅನಂತ್ ,ಬಿ ಎಸ್ ಪಿ ತಾಲ್ಲೂಕು ಅಧ್ಯಕ್ಷ ಎಲ್ ಬಿ ರಮೇಶ್,ಚಲವಾದಿ ಸಂಘ ದ ಕಾರ್ಯದರ್ಶಿ ಮಂಜುನಾಥ್,ಮಾತನಾಡಿದರು.
ಪ್ರತಿಭಟನಾ ನಿರತ ಪ್ರತಿಭಟನಕಾರನ್ನು ಕುರಿತು ಮಾತನಾಡಿದ ವಲಯ ಅರಣ್ಯ ಸಂರಕ್ಷಣಾ ಅಧಿಕಾರಿ ನಿರ್ಮಲಾ ರವರು, ಒಂದಷ್ಟು ದಿನಗಳ ಸಮಯ ನೀಡಿ ನಿಮ್ಮ ಸಮಸ್ಯೆಗೆ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ಕೈಗೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದರು
ಅನಂತರ ಮನವಿ ಪತ್ರ ನೀಡಿ ಪ್ರತಿಭಟನೆಯನ್ನು ಮುಕ್ತಾಯಗೊಳಿಸಲಾಯಿತು ಈ ಸಂದರ್ಭದಲ್ಲಿ ಬಿ ಎಸ್ ಪಿ ಜಿಲ್ಲಾ ಕಾರ್ಯದರ್ಶಿ ಬಕ್ಕಿ ಮಂಜುನಾಥ್,ಶಿವಪ್ರಸಾದ್, ಪ.ಜಾತಿ ಪ ಪಂಗಡ ಹಿತ ರಕ್ಷಣಾ ಒಕ್ಕೂಟ ದ ಕಾರ್ಯದರ್ಶಿ ರಾಮಯ್ಯ ಕಾಂಗ್ರೆಸ್ ಯುವ ಮುಖಂಡ ಸುರೇಂದ್ರ, ಲಕ್ಷ್ಮಣ್,ಕಿರಣ್,ಭಾನು,ಲೋಕೇಶ್,ನಾಗೇಶ್,ಜೈಪಾಲ್,ಸುಧೀರ್,ಶಂಕರ್,ಮುಂತಾದವರು ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.