AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಹೇಮಾವತಿ ನದಿ ಎಂಬ ಹೆಮ್ಮೆಯ ಬೆರಗು* ನದಿಗಳ ಪಾತ್ರ ಬಹುಮುಖ್ಯವಾದುದು.#avintvcom

1 min read
Featured Video Play Icon

ಹೇಮಾವತಿ ನದಿ ಎಂಬ ಹೆಮ್ಮೆಯ ಬೆರಗು

ಪೃಕೃತಿಯ ಮೆರುಗನ್ನು ಹೆಚ್ಚಿಸುವಲ್ಲಿ ನದಿಗಳ ಪಾತ್ರ ಬಹುಮುಖ್ಯವಾದುದು.
ಅದರಲ್ಲೂ ಪ್ರಕೃತಿಯ ತವರಾಗಿರುವ ಮಲೆನಾಡಿನ ಸೌಂದರ್ಯಕೆ ಕಿರೀಟದಂತಿರುವ ಮೂಡಿಗೆರೆಯ ಜೀವನದಿಯಾಗಿರುವ “ಹೇಮಾವತಿ”ಯ ಹುಟ್ಟು ನಮ್ಮ ಮಲೆನಾಡ ನಿಸರ್ಗದ ಒಡಲಿನಲ್ಲಿ ಆಗಿರುವುದೆ ನಮಗೆಲ್ಲ ಹೆಮ್ಮೆಯ ಸಂಗತಿ.
ನಾಗರೀಕತೆ ಬೆಳೆದಂತೆ ಈ ಜಗತ್ತು ನಗರೀಕರಣದತ್ತ ವೇಗವಾಗಿ ಸಾಗುತ್ತಿರುವುದರ ಜೊತೆಗೆ ದಿನೇ ದಿನೇ ಜನಸಂಖ್ಯಾ ಸ್ಫೋಟದ ಪರಿಣಾಮವಾಗಿ ಭೂಮಿಯು ಮಾಲಿನ್ಯವಾಗುತ್ತಿದ್ದು, ಭೂಮಿಯ ಮೇಲಿನ ಗಾಳಿ ನೀರು, ಪರಿಸರ ಸಂಪೂರ್ಣವಾಗಿ ವಿನಾಶವಾಗುತ್ತಿರುವುದು ಮಾನವಕುಲಕ್ಕೆ ಕಂಠಕವೇ ಸರಿ.

ಹೇಮಾವತಿ ನದಿಯ ಕುರಿತಾಗಿ ಹೇಳುವುದಾದರೆ ಈ ನದಿಯು ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ಜಾವಳಿ ಗ್ರಾಮದಲ್ಲಿ ಉಗಮವಾಗಿ ಸತತವಾಗಿ ಹಾಸನ, ಕೊಡಗು, ಚಿಕ್ಕಮಗಳೂರು ತುಮಕೂರು, ಮಂಡ್ಯ, ಮತ್ತು ಮೈಸೂರು ಈ ಆರು ಜಿಲ್ಲೆಗಳಿಗೆ ತನ್ನ ಪ್ರತಿಫಲವನ್ನು ನೀಡುತ್ತಿರುವ ಕಾವೇರಿ ನದಿಯ ದೊಡ್ಡ ಉಪನದಿಯಾಗಿ ಜನರ ಜೀವನದಿಯಾಗಿ ಹರಿಯುತ್ತಿದೆ.
ನಂದು ಕುಲ ನಿಂದು ಕುಲ.
ನಂಗು ನಿಂಗು ಬೇಕು ಜಲ.
ಜಲವೇ ತಾನೇ ಜೀವ ಫಲ.
ಜಲದತಾಯಿದ್ಯಾವ ಕುಲ.
ಜಲ ಜಲ ಜಲ ಜಲ
ಜಗದ ಜಲದಿಗೆ ಇಲ್ಲವೋ ವ್ಯಾಕುಲ. ಎಂಬ ಹಂಸಲೇಖಕರು ಗೀಚಿದ ಇತ್ತೀಚಿಗೆ ಬಿಡುಗಡೆಯಾದ ಜಲದ ಮಹತ್ವವನ್ನು ಹೇಳುವ ಹಾಡೊಂದರ ಸಾಲುಗಳು ಇವು.

ಈ ನಿಟ್ಟಿನಲ್ಲಿ ಹೇಮಾವತಿಯ ಅರ್ಥವೇನೆಂದು ತಿಳಿಯುವುದಾದರೆ ಹೇಮಾವೆಂದರೆ -ಚಿನ್ನ, ವತಿ ಎಂದರೆ -ಹುಟ್ಟು ಎಂಬುದೆ ಆಗಿದೆ.
ನಮ್ಮೂರ ಜೀವನದಿಯ ಹೇಮಾವತಿ ನದಿಯ ಮಹತ್ವದ ಕುರಿತಾಗಿ ನಾನು ಬರೆದ ಹಾಡೊಂದು ಹೀಗಿದೆ..
ಮಲೆನಾಡ ಮಡಿಲಿನಲಿ ಜನಿಸಿದವಳು ನೀನು //
ತಲಕಾಡ ಕಾವೇರಿಯ ತಂಗಿಯೂ ನೀನು.
ಜಾವಳಿ ಊರು ನಿನ್ನ ಮೂಲ ಉಗಮ ಸ್ಥಾನ.//
ಗೋರೂರು ಅಣೆಕಟ್ಟು ನಿನ್ನ ನಿಲ್ದಾಣ.
ಅಲ್ಲೂ ನಿಲ್ಲದೆ ನೀ ಮುಂದೆ ಸಾಗುವೆ.//
ಕಾವೇರಿ ನದಿಯ ಒಡಲ ನೀನು ಸೇರುವೆ.

ಮೂಡಿಗೆರೆಯ ಓ ಮಹನೀಯರೆ.//
ಸ್ವಾಭಿಮಾನದ ಜನ ಸಾಮಾನ್ಯರೆ.
ಇವಳ ಮಹತು ಅರಿತು.//
ನೀವು ಬಾಳುವುದು ಒಳಿತು.
ಬೊಗಸೆಯಲಿ ಹಿಡಿದು ನಾವು ಕುಡಿಯ ಬೇಕು ಮೂರೊತ್ತು.
ನಮ್ಮೂರ ಜೀವ ಗಂಗೆಯೇ ಮಲೆನಾಡಿನ ಸಂಪತ್ತು.//
ಈ ಹಾಡನು ಕೇಳಬೇಕು ನೀವಂತೂ ಎದೆಯ ಕಿವಿಯನು ಕೊಟ್ಟು.//

ಊರು ಕೇರಿಯ ನೀ ಹಾದು ಹೋಗುವೆ.//
ಪಾಲು ನೀಡದೆ ನೀನು ಹೋಗಲಾರೆ.
ಇವಳ ಮನಸು ಕುರಿತು ನಾವು ತಿಳಿಯ ಬೇಕು ಈವತ್ತು.//
ಬೋರ್ಗರೆಯಲಿ ಇವಳು ನಾವು ಕಾಯಬೇಕು ಮೂರೊತ್ತು.
ನಮ್ಮೂರ ಜೀವ ಧಾರೆಯೇ ಕರುನಾಡಿನ ಸಂಪತ್ತು.//
ಈ ಹಾಡಲಿ ಹೇಳುತ್ತಿರುವೆ ನಾನಂತೂ ಎರಡು ಕಿವಿಯ ಮಾತು.//
ಎಂಬ ಗೀತೆಯ ಹುಟ್ಟಿಗೆ ಕಾರಣವಾಗಿದ್ದು ಈ ಜೀವನದಿಯೇ.ಇಂದಿನ ಪ್ರಾಕೃತಿಕ ಏರು ಪೇರುಗಳ ಅನಾವುತದ
ಎಲ್ಲಾ ವಿದ್ಯಾಮಾನಗಳ ಅರಿವು ಇಲ್ಲಿನ ಪರಿಸರ ಪ್ರೇಮಿಗಳು ಸಾಮಾಜಿಕ ಹೋರಾಟಗಾರರು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಹಲವಾರು ಪ್ರಗತಿಪರ ಚಿಂತಕರನ್ನೊಳಗೊಂಡ ಸಮಿತಿಯೊಂದು ಈ ನಾಡಿನ ಮಹತ್ವವುಳ್ಳ ಆಸ್ತಿಯಾದ ಹೇಮಾವತಿನದಿಯ ಹಿತವನ್ನು ಕಾಯುವ ದೃಷ್ಟಿಯಿಂದ “ಹೇಮಾವತಿ ನದಿ ಉಗಮ ಹಿತರಕ್ಷಣ ಒಕ್ಕೂಟ (ರಿ ) ಎಂಬ ಸಂಸ್ಥೆಯು ರೂಪುಗೊಂಡಿರುವುದು ಶ್ಲಾಘನೀಯವಾದ ಸಂಗತಿಯಾಗಿದೆ.

ಈ ಸಂಸ್ಥೆಯು ಬಹು ಮುಖ್ಯ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ನದಿಯ ಮಹತ್ವವನ್ನು ಅದರಿಂದಾಗುತ್ತಿರುವ ಪ್ರಯೋಜನಗಳನ್ನು ಕರ್ನಾಟಕ ರಾಜ್ಯದಾದ್ಯಂತ ತಿಳಿಸಲು ಮುಂದಾಗುತ್ತಿದೆ. ಈ ಸಂಸ್ಥೆಯ ಉದ್ದೇಶಗಳನ್ನು ಈ ಕೆಳಕಂಡಂತೆ ಗಮನಿಸಬಹುದು.ಪೃಕೃತಿಯ ಮೆರುಗನ್ನು ಹೆಚ್ಚಿಸುವಲ್ಲಿ ನದಿಗಳ ಪಾತ್ರ ಬಹುಮುಖ್ಯವಾದುದು.
ಅದರಲ್ಲೂ ಪ್ರಕೃತಿಯ ತವರಾಗಿರುವ ಮಲೆನಾಡಿನ ಸೌಂದರ್ಯಕೆ ಕಿರೀಟದಂತಿರುವ ಮೂಡಿಗೆರೆಯ ಜೀವನದಿಯಾಗಿರುವ “ಹೇಮಾವತಿ”ಯ ಹುಟ್ಟು ನಮ್ಮ ಮಲೆನಾಡ ನಿಸರ್ಗದ ಒಡಲಿನಲ್ಲಿ ಆಗಿರುವುದೆ ನಮಗೆಲ್ಲ ಹೆಮ್ಮೆಯ ಸಂಗತಿ.
ನಾಗರೀಕತೆ ಬೆಳೆದಂತೆ ಈ ಜಗತ್ತು ನಗರೀಕರಣದತ್ತ ವೇಗವಾಗಿ ಸಾಗುತ್ತಿರುವುದರ ಜೊತೆಗೆ ದಿನೇ ದಿನೇ ಜನಸಂಖ್ಯಾ ಸ್ಫೋಟದ ಪರಿಣಾಮವಾಗಿ ಭೂಮಿಯು ಮಾಲಿನ್ಯವಾಗುತ್ತಿದ್ದು, ಭೂಮಿಯ ಮೇಲಿನ ಗಾಳಿ ನೀರು, ಪರಿಸರ ಸಂಪೂರ್ಣವಾಗಿ ವಿನಾಶವಾಗುತ್ತಿರುವುದು ಮಾನವಕುಲಕ್ಕೆ ಕಂಠಕವೇ ಸರಿ.

ಹೇಮಾವತಿ ನದಿಯ ಕುರಿತಾಗಿ ಹೇಳುವುದಾದರೆ ಈ ನದಿಯು ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ಜಾವಳಿ ಗ್ರಾಮದಲ್ಲಿ ಉಗಮವಾಗಿ ಸತತವಾಗಿ ಹಾಸನ, ಕೊಡಗು, ಚಿಕ್ಕಮಗಳೂರು ತುಮಕೂರು, ಮಂಡ್ಯ, ಮತ್ತು ಮೈಸೂರು ಈ ಆರು ಜಿಲ್ಲೆಗಳಿಗೆ ತನ್ನ ಪ್ರತಿಫಲವನ್ನು ನೀಡುತ್ತಿರುವ ಕಾವೇರಿ ನದಿಯ ದೊಡ್ಡ ಉಪನದಿಯಾಗಿ ಜನರ ಜೀವನದಿಯಾಗಿ ಹರಿಯುತ್ತಿದೆ.
ನಂದು ಕುಲ ನಿಂದು ಕುಲ.
ನಂಗು ನಿಂಗು ಬೇಕು ಜಲ.
ಜಲವೇ ತಾನೇ ಜೀವ ಫಲ.
ಜಲದತಾಯಿದ್ಯಾವ ಕುಲ.
ಜಲ ಜಲ ಜಲ ಜಲ
ಜಗದ ಜಲದಿಗೆ ಇಲ್ಲವೋ ವ್ಯಾಕುಲ. ಎಂಬ ಹಂಸಲೇಖಕರು ಗೀಚಿದ ಇತ್ತೀಚಿಗೆ ಬಿಡುಗಡೆಯಾದ ಜಲದ ಮಹತ್ವವನ್ನು ಹೇಳುವ ಹಾಡೊಂದರ ಸಾಲುಗಳು ಇವು.

ಈ ನಿಟ್ಟಿನಲ್ಲಿ ಹೇಮಾವತಿಯ ಅರ್ಥವೇನೆಂದು ತಿಳಿಯುವುದಾದರೆ ಹೇಮಾವೆಂದರೆ -ಚಿನ್ನ, ವತಿ ಎಂದರೆ -ಹುಟ್ಟು ಎಂಬುದೆ ಆಗಿದೆ.
ನಮ್ಮೂರ ಜೀವನದಿಯ ಹೇಮಾವತಿ ನದಿಯ ಮಹತ್ವದ ಕುರಿತಾಗಿ ನಾನು ಬರೆದ ಹಾಡೊಂದು ಹೀಗಿದೆ..
ಮಲೆನಾಡ ಮಡಿಲಿನಲಿ ಜನಿಸಿದವಳು ನೀನು //
ತಲಕಾಡ ಕಾವೇರಿಯ ತಂಗಿಯೂ ನೀನು.
ಜಾವಳಿ ಊರು ನಿನ್ನ ಮೂಲ ಉಗಮ ಸ್ಥಾನ.//
ಗೋರೂರು ಅಣೆಕಟ್ಟು ನಿನ್ನ ನಿಲ್ದಾಣ.
ಅಲ್ಲೂ ನಿಲ್ಲದೆ ನೀ ಮುಂದೆ ಸಾಗುವೆ.//
ಕಾವೇರಿ ನದಿಯ ಒಡಲ ನೀನು ಸೇರುವೆ.

ಮೂಡಿಗೆರೆಯ ಓ ಮಹನೀಯರೆ.//
ಸ್ವಾಭಿಮಾನದ ಜನ ಸಾಮಾನ್ಯರೆ.
ಇವಳ ಮಹತು ಅರಿತು.//
ನೀವು ಬಾಳುವುದು ಒಳಿತು.
ಬೊಗಸೆಯಲಿ ಹಿಡಿದು ನಾವು ಕುಡಿಯ ಬೇಕು ಮೂರೊತ್ತು.
ನಮ್ಮೂರ ಜೀವ ಗಂಗೆಯೇ ಮಲೆನಾಡಿನ ಸಂಪತ್ತು.//
ಈ ಹಾಡನು ಕೇಳಬೇಕು ನೀವಂತೂ ಎದೆಯ ಕಿವಿಯನು ಕೊಟ್ಟು.

ಈ ಸಂಸ್ಥೆಯು ಬಹು ಮುಖ್ಯ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ನದಿಯ ಮಹತ್ವವನ್ನು ಅದರಿಂದಾಗುತ್ತಿರುವ ಪ್ರಯೋಜನಗಳನ್ನು ಕರ್ನಾಟಕ ರಾಜ್ಯದಾದ್ಯಂತ ತಿಳಿಸಲು ಮುಂದಾಗುತ್ತಿದೆ. ಈ ಸಂಸ್ಥೆಯ ಉದ್ದೇಶಗಳನ್ನು ಈ ಕೆಳಕಂಡಂತೆ ಗಮನಿಸಬಹುದು.ಈ ಎಲ್ಲಾ ವಿದ್ಯಾಮಾನಗಳ ಅರಿವು ಇಲ್ಲಿನ ಪರಿಸರ ಪ್ರೇಮಿಗಳು ಸಾಮಾಜಿಕ ಹೋರಾಟಗಾರರು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಹಲವಾರು ಪ್ರಗತಿಪರ ಚಿಂತಕರನ್ನೊಳಗೊಂಡ ಸಮಿತಿಯೊಂದು ಈ ನಾಡಿನ ಮಹತ್ವವುಳ್ಳ ಆಸ್ತಿಯಾದ ಹೇಮಾವತಿನದಿಯ ಹಿತವನ್ನು ಕಾಯುವ ದೃಷ್ಟಿಯಿಂದ “ಹೇಮಾವತಿ ನದಿ ಉಗಮ ಹಿತರಕ್ಷಣ ಒಕ್ಕೂಟ (ರಿ ) ಎಂಬ ಸಂಸ್ಥೆಯು ರೂಪುಗೊಂಡಿರುವುದು ಶ್ಲಾಘನೀಯವಾದ ಸಂಗತಿಯಾಗಿದೆ.
ಈ ಸಂಸ್ಥೆಯು ಬಹು ಮುಖ್ಯ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ನದಿಯ ಮಹತ್ವವನ್ನು ಅದರಿಂದಾಗುತ್ತಿರುವ ಪ್ರಯೋಜನಗಳನ್ನು ಕರ್ನಾಟಕ ರಾಜ್ಯದಾದ್ಯಂತ ತಿಳಿಸಲು ಮುಂದಾಗುತ್ತಿದೆ. ಈ ಸಂಸ್ಥೆಯ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪುಗೊಳಿಸಲು 12ವಿಭಾಗಗಳನ್ನು ರಚಿಸಲಾಗಿದೆ. ಅವುಗಳೆಂದರೆ
#ಯೋಜನೆ ಮತ್ತು ಅಭಿವೃದ್ಧಿ ವಿಭಾಗ.

#ಸಾಹಿತ್ಯ ವಿಭಾಗ.

#ಕಾರ್ಯಕ್ರಮ ನಿರ್ವಹಣೆ ಮತ್ತು ಜಾಹೀರಾತು ವಿಭಾಗ.

#ಸಾಮಾಜಿಕ ಜಾಲತಾಣ ಮತ್ತು ಪತ್ರಿಕೆ ಮಾಹಿತಿ ವಿಭಾಗ.

#ಪರಿಸರ ಅಭಿವೃದ್ಧಿ ವಿಭಾಗ.

#ಸಮುದಾಯದ ಅಭಿವೃದ್ಧಿ ವಿಭಾಗ.

#ಸದಸ್ಯತ್ವ ನೋಂದಣಿ ವಿಭಾಗ.

#ತರಬೇತಿ ವಿಭಾಗ.

#ಹೊಸ ಘಟಕಗಳ ರಚನೆ ಮತ್ತು ನಿರ್ವಹಣೆ ವಿಭಾಗ.

#ಕಾನೂನು ಸಲಹೆ ವಿಭಾಗ.

#ಲೆಕ್ಕ ಪತ್ರ ಪರಿಶೀಲನೆ ವಿಭಾಗ.

#ಪ್ರವಾಸೋದ್ಯಮ ಅಭಿವೃದ್ಧಿ ವಿಭಾಗ.

ಐದು ವರ್ಷಗಳ ಗುರಿಯಿಟ್ಟುಕೊಂಡು ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲು ಕ್ರಿಯಾಯೋಜನೆಯನ್ನು ತಯಾರಿಸಲಾಗಿದೆ.
ಕ್ರಿಯಾಯೋಜನೆಯಲ್ಲಿ ಹೇಮಾವತಿ ಹೆಬ್ಬಾಗಿಲು ನಿರ್ಮಾಣ, ರಸ್ತೆಗಳ ಅಗಲೀಕರಣ, ಶುದ್ಧಗಂಗ ನೀರಿನ ಘಟಕ, ಹೇಮಾವತಿ ವಸತಿಗೃಹ ಮತ್ತು ಸಭಾಭವನ, ಗ್ರಂಥಾಲಯ ಮತ್ತು ದಕ್ಷಿಣ ಕರ್ನಾಟಕದ ನದಿಗಳು ಮತ್ತು ಪರಿಸರ ಅಭಿವೃದ್ಧಿ ಅಧ್ಯಯನ ಕೇಂದ್ರ, ಹೇಮಾವತಿ ಮತ್ತು ಸೋಮಾವತಿ ಉದ್ಯಾನ ವನ, ಪರಿಸರ ಸಪ್ತಾಹ ಹಾಗೂ “ಹೇಮಾದ್ರಿ ಉತ್ಸವ”ವನ್ನು ಆರು ಜೆಲ್ಲೆಗಳ ಇತಿಹಾಸ, ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸಲು ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಎರಡು ದಿನಗಳ ಕಾಲ ಆಯೋಜಿಸಲು ತೀರ್ಮಾನಿಸಲಾಗಿದೆ. ಸಂಪನ್ಮೂಲ ಕ್ರೂಢೀಕರಣಕ್ಕಾಗಿ ಸರ್ಕಾರದ ವಿವಿಧ ಇಲಾಖೆಗಳು ಮತ್ತು ದಾನಿಗಳನ್ನು ಕೋರಲಾಗುವುದು. ಒಕ್ಕೂಟದ ಸದಸ್ಯತ್ವ ಶುಲ್ಕ 2000/-ಕ್ಕೆ ನಿಗಧಿಗೊಳಿಸಿದ್ದು ಆರು ಜಿಲ್ಲೆಗಳ ನಿವಾಸಿಗಳು ಸದಸ್ಯತ್ವ ಪಡೆಯಲು ಅವಕಾಶವಿದೆ. ಒಕ್ಕೂಟದಿಂದ ಮೂಡಿಗೆರೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು “ಹೇಮಾವತಿ ನದಿ ಉಗಮ ಹಿತರಕ್ಷಣ ಒಕ್ಕೂಟವು ತಿಳಿಸಲು ಮುಂದಾಗಿದೆ.
“ಪರಿಸರದ ಉಳಿವೆ ನಮ್ಮ ನಿಮ್ಮೆಲ್ಲರ ಉಳಿವು.
ಪರಿಸರದ ಅಳಿವೆ ನಮ್ಮ
ನಿಮ್ಮೆಲ್ಲರ ಅಳಿವು.

ಇ ದಿನದ ಸಭೆಯಲ್ಲಿ
ಅಧ್ಯಕ್ಷರಾದ ಬಾಲಕೃಷ್ಣ.
ಕಾರ್ಯದರ್ಶಿ ಜಗದೀಶ.ಎಂ.ವಿ.
ಖಜಾಂಚಿ.
ಮನೋಹರ.ಕೆ.ಡಿ.
ಸಂಯೊಜನ ಅಧಿಕಾರಿ.
ಅಶೋಕನಾಗರಸೀಮೆ.
ನಿರ್ದೆಶಕರುಗಳಾದ.
ಸುರೇಂದ್ರ.
ದೇವರಾಜು.ಹೆಚ್.ಪಿ.
ಶಶೀದರ್.ಜೆ.ಜಿ.
ಇದ್ದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
9686585329.

ಬರಹ ಕೃಪೆ :
ಹೆಸಗಲ್ ವೆಂಕಟೇಶ್.

ವರದಿ: ಮಗ್ಗಲಮಕ್ಕಿ ಗಣೇಶ್.
ಬ್ಯುರೋ ನ್ಯೂಸ್.

http://nisargacare.com/navachaithanya-old-age-home/

Career | job

About Author