*ಶೌರ್ಯ ಶ್ರೀ ಧರ್ಮಸ್ಥಳ ರಾಷ್ಟ್ರೀಯ ವಿಪತ್ತು ನಿರ್ವಹಣೆ ತಂಡ ಹಾಗೂ ಶಿವಗಿರಿ ಸೇವಕರು ತಂಡದ ದಿಂದ ಸ್ವಚ್ಚಗೊಂಡ ಚೆಕ್ ಡ್ಯಾಮ್#avintvcom
1 min readಮೂಡಿಗೆರೆ ಶೌರ್ಯ ಶ್ರೀ ಧರ್ಮಸ್ಥಳ ರಾಷ್ಟ್ರೀಯ ವಿಪತ್ತು ನಿರ್ವಹಣೆ ತಂಡ ಹಾಗೂ ಶಿವಗಿರಿ ಸೇವಕರು ತಂಡದ ಕಾರ್ಯದಿಂದ ಸ್ವಚ್ಚಗೊಂಡ ಚೆಕ್ ಡ್ಯಾಮ್.
ನಿರ್ಮಲವಾಗಿ ಹರಿದ ಹೇಮಾವತಿ.
ದಿನಾಂಕ ಜೂನ್ 27
ಮೂಡಿಗೆರೆ ಕಸಬಾ ವಲಯದಿಂದ ಶೌರ್ಯ ಶ್ರೀ ಧರ್ಮಸ್ಥಳ ರಾಷ್ಟ್ರೀಯ ವಿಪತ್ತು ನಿರ್ವಹಣೆ ತಂಡ ಹಾಗೂ ಶಿವಗಿರಿ ಸೇವಕರು ತಂಡದ ವತಿಯಿಂದ ನಂದಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕನ್ನಾಪುರದ ಕೃಷಿ ಬಳಕೆಗೆ ಚೆಕ್ ಡ್ಯಾಮ್ ನಲ್ಲಿ ಈ ದಿನ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು .
ಶವ ಸಂಸ್ಕಾರದಲ್ಲಿ ಪಾಲ್ಗೊಂಡರು ಮನೆಗೆ ಮರಳಿ ಬರುತ್ತಿರುವಾಗ ದಾರಿಯಲ್ಲಿ ಚೆಕ್ ಡ್ಯಾಮ್ ಕಸ ಕಡ್ಡಿಗಳಿಂದ ಬ್ಲಾಕ್ ಆಗಿರುವುದು ಕಂಡುಬಂತು. ಅದನ್ನು ತೆರವುಗೊಳಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದುಕೊಂಡು ಶ್ರಮದಾನ ಆರಂಭಿಸಿ ಸ್ವಚ್ಛತೆ ಮಾಡಲಾಯಿತು. ಒಂದು ಸೇವೆ ಸಲ್ಲಿಸಲು ಹೋದ ನಮಗೆ ಎರಡು ಸೇವೆ ಪೂರ್ತಿಗೊಳಿಸಿದ ಸಂತೋಷ ನಮ್ಮ ಎಲ್ಲಾ ಸ್ವಯಂಸೇವಕರದ್ದಾಗಿದೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ ಚೆಕ್ ಡ್ಯಾಮ್ ನಲ್ಲಿ ಮರದ ಕೊಂಬೆಗಳು ಹಾಗೂ ಕಸಕಡ್ಡಿಗಳು ತುಂಬಿಕೊಂಡು ಸರಾಗ ನೀರಿನ ಹರಿಯುವಿಕೆಗೆ ತೊಂದರೆಯಾಗಿತ್ತು. ಇದನ್ನು ಗಮನಿಸಿದ ಶೌರ್ಯ ಶ್ರೀ ಧರ್ಮಸ್ಥಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಹಾಗೂ ಶಿವಗಿರಿ ಸೇವಕರು ತಂಡದ ಸದಸ್ಯರುಗಳು ಜೊತೆಗೂಡಿ ಸ್ವಚ್ಛ ಗೊಳಿಸಲಾಯಿತು ಈ ಸಂದರ್ಭದಲ್ಲಿ ಸಂಯೋಜಕರಾ ಪ್ರವೀಣ್ ಪೂಜಾರಿ ಹಾಗೂ ಅರುಣ್ ಪಿಂಟೋ ಸ್ವಯಂಸೇವಕರಾದ ರವಿಪೂಜಾರಿ, ಹರೀಶ್ ಗೌಡ, ಮಂಜುನಾಥ್ ಹಾಗೂ ವಿನಿತ್ ಪೂಜಾರಿ ಹಾಜರಿದ್ದರು.
ವರದಿ
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.