day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ರಾಜ್ಯ ಸರ್ಕಾರದ ಅವೈಜ್ಞಾನಿಕ ನಿಯಮ ಎಷ್ಟು ಸರಿ..*ದೇವಸ್ಥಾನಕ್ಕೂ ಮುಂಚೆ ಬಾರ್ ಓಪನ್*#avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

ರಾಜ್ಯ ಸರ್ಕಾರದ ಅವೈಜ್ಞಾನಿಕ ನಿಯಮ ಎಷ್ಟು ಸರಿ..*ದೇವಸ್ಥಾನಕ್ಕೂ ಮುಂಚೆ ಬಾರ್ ಓಪನ್*#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ರಾಜ್ಯ ಸರ್ಕಾರದ ಅವೈಜ್ಞಾನಿಕ ನಿಯಮ ಎಷ್ಟು ಸರಿ…?

*ದೇವಸ್ಥಾನಕ್ಕೂ ಮುಂಚೆ ಬಾರ್ ಓಪನ್*

ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ ಬೆಳಿಗ್ಗೆ 06.ಗಂಟೆಗೆ ಬಾಗಿಲು ತೆರೆಯಲು ಅವಕಾಶ ಮಾಡಿಕೊಟ್ಟಿರುವುದು ಎಷ್ಟು ಸರಿ..?
ಕೋವಿಡ್- 19 ಕೊರೋನ ಎರಡನೆಯ ಅಲೆಗೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳು ಅಪಾರ ಪ್ರಮಾಣದ ಪ್ರಾಣ ಹಾನಿಯ ಜೊತೆಗೆ, ಆರ್ಥಿಕವಾಗಿ ಸಂಕಷ್ಟಕ್ಕೆ ತುತ್ತಾಗಿರುವುದು ಪ್ರತಿಯೊಬ್ಬರಿಗೂ ತಿಳಿದಿರುವ ಸತ್ಯ.
ಉಸಿರುಗಟ್ಟಿದಂತಹ ಲಾಕ್ ಡೌನ್ ವ್ಯವಸ್ಥೆಯಿಂದ ಸುಧಾರಿಸಿಕೊಳ್ಳಲು ಕರ್ನಾಟಕ ರಾಜ್ಯ ಸರ್ಕಾರವು ಇತ್ತೀಚೆಗೆ ಅವಕಾಶ ಮಾಡಿಕೊಟ್ಟಿದೆ.

ಸದ್ಯ ಕರ್ನಾಟಕ ರಾಜ್ಯದ ಮುಕ್ಕಾಲು ಭಾಗದಷ್ಟು ಜಿಲ್ಲೆಗಳಿಗೆ ಸರ್ಕಾರ ಈಗಾಗಲೇ ರಿಲೀಫ್ ನೀಡಿರುವುದು ಪ್ರಸ್ತುತ ಜನರ ಪಾಲಿನ ಸಂತಸದ ವಿಷಯ.

ಆದರೆ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಡಳಿತ ದಿನನಿತ್ಯದ ಅಗತ್ಯಗಳಿಗೆ ಅವಕಾಶವನ್ನು ಮಾಡಿ ಕೊಟ್ಟಿದ್ದರು ಸಹ ಬಾರ್ ಅಂಡ್ ರೆಸ್ಟೋರೆಂಟ್ ಗಳನ್ನು ಬೆಳಿಗ್ಗೆ 6ಗಂಟೆಗೆ ತೆರೆಯಲು ಅನುಮತಿ ನೀಡಿರುವುದು ಇದೊಂದು ಅವೈಜ್ಞಾನಿಕ ನಿಯಮವೇ ಸರಿ.

ದಿನಗೂಲಿಯಿಂದ ದುಡಿದು ಬದುಕುತ್ತಿರುವ ಜನರ ಬದುಕು ಕೊರೋನ ಮಹಾಮಾರಿಯಿಂದ ಬೀದಿಗೆ ಬಂದಿರುವ ಅರಿವು ಸರ್ಕಾರಕ್ಕಿದ್ದರು, ಸರ್ಕಾರದ ಖಜಾನೆಯನ್ನು ತುಂಬಿಸುವ ಉದ್ದೇಶದಿಂದ ಮಧ್ಯಪಾನ ಮಾಡುವ ಜನರಿಗೆ ಅವೈಜ್ಞಾನಿಕವಾಗಿ ಅವಕಾಶ ಮಾಡಿಕೊಟ್ಟಿರುವುದು ಅಕ್ಷಮ್ಯ ಅಪರಾಧ.

ಮಧ್ಯಪಾನ ಪ್ರಿಯರು ದುಡಿಮೆಗೆ ಹೋಗದೆ ಕುಡಿದು ಜೀವ ಜೀವನವನ್ನು ನಾಶಮಾಡಿಕೊಳ್ಳುವ ಜೊತೆಗೆ ದುಡಿಯುವ ಕೈಗಳನ್ನು ನಂಬಿಕೊಂಡಿರುವ ಬಡ ಕೂಲಿ ಕಾರ್ಮಿಕರ ಕುಟುಂಬವು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಲು ಸರ್ಕಾರ ಮತ್ತು ಜಿಲ್ಲಾಡಳಿತ ತೆಗೆದುಕೊಂಡಿರುವ ಅವೈಜ್ಞಾನಿಕ ನಿಯಮವನ್ನು ಜನರು ಪ್ರಶ್ನಿಸುವ ಅಗತ್ಯವಿದೆ.

ಸ್ವಸ್ಥ ಸಮಾಜದ ನಿರ್ಮಾಣದ ಹಿತದೃಷ್ಟಿಯಿಂದ
ಸರ್ಕಾರವು ಈ ವಿಷಯದ ಕುರಿತು ಮಧ್ಯಪಾನ ಪ್ರಿಯರಿಗೆ ಬೇರೆ ಸಮಯವನ್ನು ನಿಗಧಿಮಾಡಲಿ ಎಂಬುದು ಸಾರ್ವಜನಿಕರು ಮತ್ತು ಸಾಮಾಜಿಕ ಚಿಂತಕರ ಒತ್ತಾಯವಾಗಿದ್ದು ಈ ಗಂಭೀರ ವಿಷಯದ ಕುರಿತು ಜಿಲ್ಲಾಡಳಿತ ಮತ್ತು ಜಿಲ್ಲಾಧಿಕಾರಿಗಳು ಸೂಕ್ತ ಸದುಪಯೋಗದ ನಿಯಮಗಳನ್ನು ರೂಪಿಸಲು ಮುಂದಾಗಬೇಕೆಂದು ಆಗ್ರಹಿಸುತ್ತೇವೆ.

ಬರಹ ಕೃಪೆ :
ಹೆಸಗಲ್ ವೆಂಕಟೇಶ್

ವರದಿ :
ಮಗ್ಗಲಮಕ್ಕಿ ಗಣೇಶ್
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author