ಕನ್ನಡ ನಾಡು ನುಡಿಗಾಗಿ ಸೇವೆಗೈದು ಅಕಾಲಿಕವಾಗಿ ಕೊರೊನ ಸೋಂಕು ಇತರೆ ಕಾರಣಗಳಿಂದ ಅಗಲಿದ ನುಡಿ ನಮನ#avintvcom
1 min read
🌹🙏ನುಡಿ ನಮನ 🌹🙏 —————————————- ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿವಿಧ ಕನ್ನಡ ಪರ ಸಂಘಟನೆಗಳು, ಜಿಲ್ಲಾ ಘಟಕ, ಚಿಕ್ಕಮಗಳೂರು —————————————-ಕನ್ನಡ ನಾಡು ನುಡಿಗಾಗಿ ಸೇವೆಗೈದು ಅಕಾಲಿಕವಾಗಿ ಕೊರೊನ ಸೋಂಕು ಮತ್ತು ಇತರೆ ಕಾರಣಗಳಿಂದ ಅಗಲಿದ ಕನ್ನಡ ನಾಡಿನ ಹಿರಿಯ ಚೇತನಗಳಾದ,
01, ಕನ್ನಡ ನಿಘಂಟು ತಜ್ಞ ಪ್ರೊ, ಜಿ, ವೆಂಕಟಸುಬ್ಬಯ್ಯನವರು,
02, ಬಂಡಾಯ ಸಾಹಿತಿ, ಕವಿ, ನಾಟಕರ, ನಾಡೋಜ ಡಾ, ಸಿದ್ದಲಿಂಗಯ್ಯನವರು,
03, ನಟ, ನಿರ್ದೇಶಕ, ರಾಷ್ಟ್ರಪ್ರಶಸ್ತಿ ವಿಜೇತ ಚಿಕ್ಕಮಗಳೂರಿನ ಪ್ರತಿಭೆ ಸಂಚಾರಿ ವಿಜಯ್,
04, ಸ್ವಾತಂತ್ರ್ಯ ಹೋರಾಟಗಾರರಾದ ಶತಾಯುಷಿ ದೊರೆಸ್ವಾಮಿ ಯವರು ,
05, ಬೆಂಕಿ ಬಿದ್ದಿದೆ ಮನೆಗೆ ಎದ್ದು ಬಾರೋ ಕೆಚ್ಚೆದೆಯ ಕನ್ನಡಿಗ ಎಂದು ಕರೆಕೊಟ್ಟು ಕನ್ನಡ ನಾಡಿಗಾಗಿ ಹೃದಯ ಮಿಡಿದಿದ್ದ ಡಾ, ಕೋ, ವೆಂ, ರಾಮಕೃಷ್ಣೆ ಗೌಡ್ರು,
06, ಚಿಕ್ಕಮಗಳೂರು ಜಿಲ್ಲಾ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಪರಮೇಶ್ವರಪ್ಪನವರು,
07, ತತ್ವ ಪದಗಳಿಗೆ ಹೊಸ ಸಂಚಲನ ಮೂಡಿಸಿದ ಪ್ರೊ, ಲಕ್ಷ್ಮಿ ನಾರಾಯಣ ಭಟ್ಟರು,
08, ಚುಟುಕು ಕವಿ, ಜರಗನಹಳ್ಳಿ ಶಿವಶಂಕರ್ ರವರು ಸೇರಿದಂತೆ ಅಗಲಿದ ಇತರೆ ಅನೇಕ ಗಣ್ಯರಿಗೆ ನುಡಿ ನಮನ ಸಲ್ಲಿಸಿ, ಅವರ ಬದುಕು, ಬರಹ, ಹೋರಾಟ, ಆದರ್ಶಗಳನ್ನು ಮೆಲುಕು ಹಾಕಿ ಸಂಸ್ಮರಣೆ ಮಾಡಿ ಗೌರವ ಸಲ್ಲಿಸಲಾಯಿತು,
ಈ ಸಂದರ್ಭದಲ್ಲಿಜಿಲ್ಲೆಯ ಅನೇಕ ಸಾಹಿತಿಗಳು, ಕವಿಗಳು, ರೈತಪರ ಹೋರಾಟಗಾರರು, ದಲಿತ ಸಂಘರ್ಷ ಸಮಿತಿ ಮುಖಂಡರು, ಪತ್ರಕರ್ತರು, ರಂಗಕರ್ಮಿಗಳು , ರಾಜಕೀಯ ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರು,ವಿವಿಧ ಕನ್ನಡ ಪರ ಹೋರಾಟಗಾರರು, ಜನಪರ ಚಿಂತಕರು ಬಾಗವಹಿಸಿ, ಮೌನಾಚರಣೆ ಮಾಡಿ, ಮಾತನಾಡಿ, ನುಡಿ ಗೌರವ ಸಲ್ಲಿಸಿ ಸಂತಾಪ ಸೂಚಿಸಿದರು,
————————————–
ಬರಹ ಕೃಪೆ,..
ಡಿ, ಎಂ, ಮಂಜುನಾಥಸ್ವಾಮಿ,
ಗೌ, ಕಾರ್ಯದರ್ಶಿ,
ಜಿಲ್ಲಾ, ಕ, ಸಾ, ಪ, ಚಿಕ್ಕಮಗಳೂರು,
—
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/navachaithanya-old-age-home/