**ದೇಶಕ್ಕೊಂದು ಕಾನೂನು.ಬಣಕಲ್-ಕೊಟ್ಟಿಗೆಹಾರಕ್ಕೊಂದು ಕಾನೂನು**#avintvcom
1 min read
**ದೇಶಕ್ಕೊಂದು ಕಾನೂನು.
ಬಣಕಲ್ –ಕೊಟ್ಟಿಗೆಹಾರಕ್ಕೊಂದು ಕಾನೂನು**
ಚಿಕ್ಕಮಗಳೂರು ಜಿಲ್ಲೆ
ಮೂಡಿಗೆರೆ ತಾಲೂಕಿನ
ಬಣಕಲ್ ಮತ್ತು ಕೊತ್ತಿಗೆಹಾರದ ಕೇಂದ್ರಬಾಗದಲ್ಲಿ ಹೆದ್ದಾರಿ ಪ್ರಾಧಿಕಾರದಿಂದ ರಸ್ತೆ ಅಗಲೀಕರಣ ಪ್ರಾರಂಭವಾಗಿ ರಸ್ತೆ ಎದುರು ಬದುರು ಬಾಕ್ಸ್ ಚರಂಡಿ ನಿರ್ಮಾಣ ಕಾರ್ಯ ಆರಂಭವಾಗಿದೆ.
ಆದರೆ ಹೆದ್ದಾರಿ ಪ್ರಾಧಿಕಾರ ದ್ವಂದ್ವ ನಿಲುವು ತಾಳಿದೆ 120 ಅಡಿ ದೂರದಲ್ಲಿ ಕಟ್ಟಡ ನಿರ್ಮಾಣ ಮಾಡಿದರೆ ಮಾತ್ರ ಕಟ್ಟಡಕ್ಕೆ ಪರವಾನಗಿ ನೀಡುವುದು ಎನ್ನುವ ಇಲಾಖೆ ಈಗ ಕನಿಷ್ಟ 40 ಅಡಿ ರಸ್ತೆಗೆ ಬಾಕ್ಸ್ ಚರಂಡಿ ನಿರ್ಮಾಣ ಕಾರ್ಯ ನಡೆಸಿದೆ.
ಇದರಿಂದ ವಾಹನ ನಿಲುಗಡೆಗೆ ಸ್ಥಳಾವಕಾಶ ಇಲ್ಲ.
ಯಾವಾಗ ರಸ್ತೆಗಾಗಿ ಸರ್ವಕಾಲಿಕ ಕಟ್ಟಡ ನಿರ್ಮಾಣ ಮಾಡಿದರೆ ಕಟ್ಟಡ ಕೆಡುವುತ್ತಾರೋ ಎಂಬ ಭಯದಲ್ಲಿ ತಾತ್ಕಾಲಿಕ ಶೆಡ್ ಮಾಡಿ ಬಾಡಿಗೆಗೆ ನೀಡುವ ಪರಿಸ್ಥಿತಿಯನ್ನು ಇಲಾಖೆ ನಿರ್ಮಾಣ ಮಾಡಿದೆ. ಇದರಿಂದ ಇತ್ತೀಚೆಗೆ ಅಂಗಡಿ ಮಳಿಗೆಗೆ ಬೆಂಕಿ ಅವಘಡ ಸಂಭವಿಸಿದರೂ ಕಟ್ಟಡದ ಮಾಲೀಕರಿಗೂ, ಬಾಡಿಗೆದಾರರಿಗೂ ಲಕ್ಷಾಂತರ ರೂಪಾಯಿಯ ನಷ್ಟ ಭರಿಸಲು ಸಾಧ್ಯವಾಗುತ್ತಿಲ್ಲ.
ಬಣಕಲ್ ಹೋಬಳಿ ಕೇಂದ್ರ ಸ್ಥಾನ, ಕೊಟ್ಟಿಗೆಹಾರ ಪ್ರವಾಸಿಗರ ಕೂಡುವ ಪ್ರದೇಶವಾದುದರಿಂದ ರಸ್ತೆ ಅಗಲೀಕರಣ ಮಾಡಿರುವುದು ಅವೈಜ್ಞಾನಿಕ ಮುಂದೆ ಪೊಲೀಸ್ ಅಲ್ಲ ಸೈನಿಕರೇ ಬಂದರು ವಾಹನ ದಟ್ಟಣೆ ತಡೆಯುವ ಸಾಧ್ಯತೆ ಕಡಿಮೆ ಆಗಬಹುದು.
ಮತ್ತು ಈಗ ಅರ್ದಾಂಬರ್ದ ಕಾಮಗಾರಿ ಮಾಡಿ ಕೆಲಸ ನಿಲ್ಲಿಸಿದ್ದೆ ಆದರೆ ನಮ್ಮ ಮಲೆನಾಡಿನ ಮಳೆಗೆ ಬಾಕ್ಸ್ ಚರಂಡಿ ಮಣ್ಣು ತುಂಬಿಕೊಂಡು ರಸ್ತೆಯಲ್ಲಿ ನೀರು ನಿಂತು ಬಣಕಲ್ ಪೇಟೆಯೆ ಜಲಾವೃತ ವಾಗುವ ಸಮಯ ದೂರವಿಲ್ಲ ಆದುದರಿಂದ ಈ ತಿಂಗಳ ಒಳಗೆ ಬಾಕ್ಸ್ ಚರಂಡಿ ನಿರ್ಮಾಣ ಕಾರ್ಯ ಮುಗಿಸುವಂತೆ ಇಲಾಖೆಗೆ ನಿರ್ದೇಶನ ನೀಡಬೇಕಾಗಿ ವಿಧಾನ ಪರಿಷತ್ ಉಪ ಸಭಾಪತಿಗಳಾದ ಶ್ರೀ ಯುತ ಎಂ.ಕೆ.ಪ್ರಾಣೇಶ್ ಹಾಗೂ ಶಾಸಕರಾದ ಶ್ರೀ ಯುತ ಎಂ.ಪಿ.ಕುಮಾರಸ್ವಾಮಿ ಯವರನ್ನು ಮತ್ತು ಜಿಲ್ಲಾಡಳಿತ ಹಾಗೂ ಸಂಬಂದಪಟ್ಟ ಹೆದ್ದಾರಿ ಇಲಾಖೆಯನ್ನು ಒತ್ತಾಯಿಸುತ್ತೇನೆ .
ಎಸ್.ಬಿ.ದೇವರಾಜ್ ಸಬ್ಲಿ
ಮಾಜಿ ತಾಲ್ಲೂಕ್ ಪಂಚಾಯಿತಿ ಸದಸ್ಯರು ಮೂಡಿಗೆರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/career/