AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

**ಸಾಹಸಿಗರ ತಂಡ**ಶೌರ್ಯ ಶ್ರೀ ಧರ್ಮಸ್ಥಳ ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡ ಕಸಬ ವಲಯ. #avintvcom

1 min read
Featured Video Play Icon

**ಮೂಡಿಗೆರೆಯಲೊಂದು

ಸಾಹಸಿಗರ ತಂಡ**

“ಹರಿ ಓಂ ”         ‌                                              ಓಂ ಶ್ರೀ ಮಂಜುನಾಥಾಯ ನಮಃ

ಚಿಕ್ಕಮಗಳೂರು ಜಿಲ್ಲೆ.

ಮೂಡಿಗೆರೆ ತಾಲೂಕಿನಲ್ಲಿ

ಶೌರ್ಯ ಶ್ರೀ ಧರ್ಮಸ್ಥಳ ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡ ಕಸಬ ವಲಯ.

ನಮ್ಮ ತಂಡದಲ್ಲಿ ಹನ್ನೊಂದು ಜನ ಸದಸ್ಯರಿದ್ದಾರೆ.

ನಮ್ಮ ತಂಡದಲ್ಲಿ ಇಲ್ಲಿಯವರೆಗೆ 253 ಸೇವಾ ಕಾರ್ಯಗಳು ನಡೆದಿದೆ ಸೇವಾಕಾರ್ಯದಲ್ಲಿ ವಿಪತ್ತಿಗೆ ಸಂಬಂಧಿಸಿದ,163 ಸೇವಾ ಕಾರ್ಯವೂ ನಡೆದಿದೆ.

ಸಾಮಾಜಿಕ ಸಂಬಂಧಿಸಿದ 140  ಕಾರ್ಯವೂ ನಡೆದಿದೆ ಅದರಲ್ಲೂ ಮುಖ್ಯವಾಗಿ ಕೊರೋನಾದಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರ ನಮ್ಮ ತಂಡದಲ್ಲಿ 50ನೇ ಶವಸಂಸ್ಕಾರ  ನಡೆಸಿದ್ದೇವೆ. ಲಾಕ್ಡೌನ್ ಸಮಯದಿಂದ ಪ್ರತಿದಿನ ಬೆಳಗ್ಗೆ ಮತ್ತು ಮಧ್ಯಾಹ್ನ ನಿತ್ಯ 50ರಿಂದ 60 ಜನಕ್ಕೆ ಊಟದ ವ್ಯವಸ್ಥೆಯನ್ನು ಸಹ ಮಾಡಿರುತ್ತೇವೆ.

ನಮ್ಮ ತಂಡವು ವ್ಯಾಕ್ಸಿನ್ ಸಂದರ್ಭದಲ್ಲಿ ಮುಂದಾಳತ್ವ ತೆಗೆದುಕೊಂಡು 45 ರಿಂದ ಮೇಲ್ಪಟ್ಟ ವ್ಯಕ್ತಿಗಳಿಗೆ ವ್ಯಾಕ್ಸಿನ್ ಕೊಡಿಸುವಾಗ ಉಚಿತವಾಗಿ ಗಾಡಿಗಳ ವ್ಯವಸ್ಥೆಯನ್ನು ಮಾಡಿರುತ್ತೇವೆ.

ಮತ್ತು ಕೊರೋನಾ ಪಾಸಿಟಿವ್ ಬಂದ ವ್ಯಕ್ತಿ ಗಳನ್ನು ಆಸ್ಪತ್ರೆಗೆ ದಾಖಲು ಮಾಡಿರುತ್ತೇವೆ.

ಪಾಸಿಟಿವ್ ಬಂದ ಮನೆಗಳಿಗೆ ಆಹಾರದ ಕಿಟ್ಟು ವ್ಯವಸ್ಥೆಯನ್ನು ಸಹ ಮಾಡಿರುತ್ತೇವೆ.

ಬಡವರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆಯನ್ನು ಸಹ ಮಾಡಿರುತ್ತೇವೆ.

ಕೋವಿಡ್ ಬಂದ ವ್ಯಕ್ತಿಗಳಿಗೆ ಔಷಧಿಯನ್ನು ಮನೆ ಮನೆಗೆ ಸಹ ಪೂರೈಕೆ ಮಾಡಿರುತ್ತೇವೆ.

ಇತ್ತೀಚಿನ ದಿನಗಳಲ್ಲಿ ಗಾಳಿ-ಮಳೆಗೆ ರಸ್ತೆಯ ಮೇಲೆ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿದ ಮಳೆಗಾಲದಲ್ಲಿ ಮನೆಯನ್ನು ಕಳೆದುಕೊಂಡ ವ್ಯಕ್ತಿಗಳಿಗೆ ತಾತ್ಕಾಲಿಕವಾಗಿ ರಿಪೇರಿ ಮಾಡಿಮನೆಯನ್ನು ಸಹ ಕಲ್ಪಿಸಿಕೊಟ್ಟಿದ್ದಾರೆ.

ಪೂಜ್ಯರು ಬಯಸಿದ ಕಾಡುಗಳಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮವು ನಮ್ಮ ತಂಡದಲ್ಲಿ ಯಶಸ್ವಿಯಾಗಿ ಎರಡು ಬಾರಿ ನಡೆದಿದೆ.

ಅದರಲ್ಲೂ ಸಮೂಹ ಸಾಮೂಹಿಕವಾಗಿ 2500 ಗಿಡಗಳನ್ನು ನಾಟಿ ಮಾಡುವುದರಲ್ಲಿ ತುಂಬಾ ಖುಷಿ ಕೊಟ್ಟಿದೆ.

ನಮ್ಮ ಊರಿನ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛತೆ ಯಾಗಿರಲು ನಮಗೆ ಒಂದು ಉತ್ತಮವಾದ ವೇದಿಕೆಯನ್ನು ಕಲ್ಪಿಸಿಕೊಟ್ಟ ಪೂಜ್ಯರಿಗೆ ಹಾಗೂ ಅಮ್ಮನವರಿಗೂ ಮನದಾಳದ ಕೋಟಿ ಕೋಟಿ ಧನ್ಯವಾದಗಳು.

ಎಲೆಮರೆ ಕಾಯಿಯಂತೆ ಬೆಳೆಯುತ್ತಿದ್ದ ನಮಗೆ ಶೌರ್ಯ ಶ್ರೀ ಧರ್ಮಸ್ಥಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಸ್ಥಾಪನೆ ಮಾಡಿ ನಮ್ಮನ್ನು ಸೇರಿಸಿಕೊಂಡು ಒಂದು ಉತ್ತಮ ಅವಕಾಶ ಮಾಡಿಕೊಟ್ಟ ಯೋಜನೆಯ ಕಾರ್ಯನಿರ್ವಹಣಾಧಿಕಾರಿಗಳಾದ

ಡಾ/ ಎಲ್ ಎಚ್ ಮಂಜುನಾಥ್ ಸರ್ ತಮಗೂ ಕೋಟಿ ಕೋಟಿ ಪ್ರಣಾಮಗಳು.

ರಾಜ್ಯ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ , ಯೋಜನಾಧಿಕಾರಿ ಜೈ ವಂತ್ ಪಟಗಾರ್ ಮೂಡಿಗೆರೆಯಲ್ಲಿ ಯಶಸ್ವಿಯಾಗಿ ನಡೆಯಲು ನಮ್ಮ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ವಸಂತ್ ಸಾಲ್ಯಾನ್,

ಮತ್ತು ನಿರ್ದೇಶಕರಾದ ಪ್ರಕಾಶ್ ರಾವ್ ಹಾಗೂ ಯೋಜನಾಧಿಕಾರಿ ವಿಠಲ ಪೂಜಾರಿ ಸರ್ ಮತ್ತು ವಲಯ ಮೇಲ್ವಿಚಾರಕರಾದ ವಿಘ್ನೇಶ್ಅವರಿಗೂ ಮನದಾಳದ ಧನ್ಯವಾದಗಳು. ಹಗಲು-ರಾತ್ರಿಯೆನ್ನದೆ ನಮ್ಮ ತಂಡದಲ್ಲಿರುವ ಸದಸ್ಯರುಗಳು ತಮ್ಮ ದೂರವಾಣಿ ಕರೆಗೆ ಓಗೊಟ್ಟು ಸಕ್ರಿಯವಾಗಿ ಶಿಪ್ರ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಸಹಕರಿಸಿದ ತಮಗೆಲ್ಲರಿಗೂ ಅನಂತ ಅನಂತ ಧನ್ಯವಾದಗಳು🌹🙏🙏

ಪ್ರವೀಣ್ ಪೂಜಾರಿ

ಸಂಯೊಜಕ.

ಕಸಬಾ ವಲಯ

ಮೂಡಿಗೆರೆ.

ವರದಿ. ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

Career | job

Navachaitanya Old Age Home

About Author