AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶೌರ್ಯ ಶ್ರೀಧರ್ಮಸ್ಥಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ,ಮೊದಲ ವರ್ಷದ ವಾರ್ಷಿಕೋತ್ಸ #avintvcom

1 min read
Featured Video Play Icon

*ಮೊದಲ ವರ್ಷದ ವಾರ್ಷಿಕೋತ್ಸವ*

ಮೂಡಿಗೆರೆ ತಾಲ್ಲೂಕು: ಶೌರ್ಯ ಶ್ರೀ ಧರ್ಮಸ್ಥಳ  ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ , ಮೊದಲ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶಾರದೆಯ  ಮಡಿಲಲ್ಲಿ  ಹಣ್ಣಿನ ಗಿಡ ನಾಟಿ ಮಾಡಲಾಯಿತು,

ಮೂಡಿಗೆರೆ ತಾಲ್ಲೂಕು ಜೂನ್:21 ರಂದು

ಮೂಡಿಗೆರೆ ಕಸಬಾ ವಲಯದ ಘಟಕದ ವತಿಯಿಂದ ಮೂಡಿಗೆರೆ ಸರಕಾರಿ ಹಿರಿಯ ಪ್ರಾಥಮಿಕ  ಬಾಲಿಕಾ ಶಾಲೆ ಮೂಡಿಗೆರೆ ಶಾಲೆಯ ಆವರಣದಲ್ಲಿ ಹಣ್ಣಿನ ಗಿಡ ನಾಟಿ ಮಾಡುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಶಾಲೆಯ ಆವರಣದ ಮುಂಭಾಗವನ್ನು ಸತತ ನಾಲ್ಕು ಗಂಟೆಗಳವರೆಗೆ ಶ್ರಮದಾನ ಮಾಡಿ ನಂತರ ಗಿಡ ನಾಟಿ ಮಾಡಲಾಯಿತು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ವಿಠಲ ಪೂಜಾರಿಯವರ ಉಪಸ್ಥಿತಿಯಲ್ಲಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗದವರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.

ಈ ಕಾರ್ಯಕ್ರಮಕ್ಕೆ ಮೂಡಿಗೆರೆ ಕಸಬಾ ವಲಯದ  ಸಂಯೋಜಕರಾದ ಪ್ರವೀಣ್ ಪೂಜಾರಿ, ಸ್ವಯಂ ಸೇವಕರಾದ ಅರುಣ್ ಪಿಂಟೋ ಸುರೇಶ್ ಪ್ರವೀಣ್ ಅಚ್ಚು ಮಂಜುನಾಥ್ ಹರೀಶ್ ಗೌಡ ರವಿ ಅಗ್ರಿಟೆಕ್ ರವರು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಕಾರ್ಯಕ್ರಮ ಆಯೋಜನೆ ಮಾಡಿದ ಮೂಡಿಗೆರೆ ಕಸಬಾ ವಲಯ ಶೌರ್ಯ ಶ್ರೀ ಧರ್ಮಸ್ಥಳ ರಾಷ್ಟ್ರೀಯ ವಿಪತ್ತು ಘಟಕ ಈ ಕಾರ್ಯಕ್ರಮಕ್ಕೆ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿದರು,

“ಹಸಿರು ಬೆಳೆಸಿ ಉಸಿರು ಉಳಿಸಿ”

ವರದಿ ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

Career | job

Navachaitanya Old Age Home

About Author