ಶೌರ್ಯ ವಿಪತ್ತು ಹಾಗೂ ಶಿವಗಿರಿ ಸೇವಕರು ವತಿಯಿಂದ ಕೊರೊನಾದಿಂದ ಮೃತಪಟ್ಟ 50ನೇ ವ್ಯಕ್ತಿಯ ಶವ ಸಂಸ್ಕಾರ #avintvcom
1 min read
*ಅಂತ್ಯ ಸಂಸ್ಕಾರ*
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲ್ಲೂಕಿನ
ಹಳೆಮೂಡಿಗೆರೆ.
ಶೌರ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಶಿವಗಿರಿ ಸೇವಕರು ವತಿಯಿಂದ ಈ ದಿನ ಕೊರೊನಾದಿಂದ ಮೃತಪಟ್ಟ 50ನೇ ವ್ಯಕ್ತಿಯ ಶವ ಸಂಸ್ಕಾರ ನಡೆಸಲಾಯಿತು.
ದಿನಾಂಕ ಜೂನ್ 16
ಮೂಡಿಗೆರೆ ತಾಲ್ಲೂಕು ಹಳೆ ಮೂಡಿಗೆರೆ ಗ್ರಾಮ ಪಂಚಾಯಿತಿಯ ಕೃಷ್ಣಾಪುರ ವಾಸಿಯಾದ ಸುಮಾರು 44 ವರ್ಷ ಇವರು ಕೋವಿಡ್ 19 ಮೃತಪಟ್ಟಿದ್ದು ಈ ಸಂದರ್ಭದಲ್ಲಿ ಅವರ ಅಂತ್ಯಕ್ರಿಯೆಯನ್ನು ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣ ತಂಡ ಹಾಗೂ ಶಿವಗಿರಿ ಸೇವಕರು ತಂಡದ ಸದಸ್ಯರು ನೆರವೇರಿಸಿರುತ್ತಾರೆ .
ಈ ಸೇವಾಕಾರ್ಯದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಸಂಯೋಜಕ ಪ್ರವೀಣ್ ಪೂಜಾರಿ, ಸದಸ್ಯರುಗಳಾದ , ರವಿ ಪೂಜಾರಿ, ಅರುಣ್ ಪಿಂಟೋ, ವಿನೀತ್ ಜನ್ನಾಪುರ ರವಿ ಅಗ್ರಿಟೆಕ್ ಪ್ರವೀಣ್ ಅಚ್ಚು, ಮತ್ತು
ಮೃತರ ಕುಟುಂಬ ಸದಸ್ಯರು ಭಾಗಿಯಾಗಿದ್ದರು.
ವರದಿ :-
ಪ್ರವೀಣ್ ಪೂಜಾರಿ.
ಸಂಯೋಜಕರು.
ಶೌರ್ಯ ಶ್ರೀ ಧರ್ಮಸ್ಥಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ
ಕಸಬಾ ವಲಯ
ಮೂಡಿಗೆರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.