ಗಾಳಿ ಮಳೆಗೆ ಹಾನಿಗೊಂಡ ಮನೆಗೆ ಆಸರೆಯಾದ ವಿಪತ್ತು ನಿರ್ವಹಣಾ ತಂಡ ಹಾಗೂ ಶಿವಗಿರಿ ಸೇವಕರು #avintvcom
1 min read
ಗಾಳಿ ಮಳೆಗೆ ಹಾನಿಗೊಂಡ ಮನೆಗೆ ಆಸರೆಯಾದ ವಿಪತ್ತು ನಿರ್ವಹಣಾ ತಂಡ ಹಾಗೂ ಶಿವಗಿರಿ ಸೇವಕರು
ದಿನಾಂಕ ಜೂನ್ 18
ಮೂಡಿಗೆರೆ ತಾಲೂಕು ಹೆಸಗಲ್ ಗ್ರಾಮ ಪಂಚಾಯಿತಿ ರಂಗಮ್ಮ ಎಂಬವರಿಗೆ ಸೇರಿದ ಮನೆಯ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸಂಪೂರ್ಣವಾಗಿ ಹಾಳಾಗಿದೆ ಇದನ್ನು ಮನಗಂಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸತ್ಯವತಿ ನಮ್ಮ ತಂಡಕ್ಕೆ ಕರೆಯ ಮೂಲಕ ಮನವಿಯನ್ನು ಮಾಡಿದ ತಕ್ಷಣವೇ ಆ ಜಾಗಕ್ಕೆ ತೆರಳಿ ಮನೆಯ ಮೇಲ್ಚಾವಣಿ ಪ್ಲಾಸ್ಟಿಕ್ಕಿನ ಸಂಪೂರ್ಣವಾಗಿ ಮುಚ್ಚಿ ಮುಂದಿನ ದಿನಗಳವರೆಗೆ ಯಾವುದೇ ರೀತಿಯ ಅನಾಹುತಗಳು ಆಗದ ರೀತಿಯಲ್ಲಿ ತಾತ್ಕಾಲಿಕವಾಗಿ ದುರಸ್ತಿ ಗೊಳಿಸಲಾಯಿತು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ನಮ್ಮ ತಂಡಕ್ಕೆ ಶುಭ ಹಾರೈಸಿ ಇನ್ನು ಮುಂದೆ ನಿಮ್ಮ ಜೊತೆ ನಾವಿರುತ್ತೇವೆ ಎಂಬ ಭರವಸೆಯ ಮಾತನಾಡಿದರು ಈ ಸ್ಥಳಕ್ಕೆ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರು ಸಹ ಹಾಜರಿದ್ದರು.
ಈ ಸಂದರ್ಭದಲ್ಲಿ ಸಂಯೋಜಕ ಪ್ರವೀಣ್ ಪೂಜಾರಿ ಸುರೇಶ್ ವೆಂಕಟೇಶ್ ಸಂತೋಷ್ ಸುನಿಲ್ ಪ್ರತಾಪ್ ಶಶಿ ಕೆಲ್ಲೂರು ಹರೀಶ್ ಗೌಡ ಅಶ್ವಿನ್ ವಿನುತ್ ಮಂಜುನಾಥ್ ಗ್ರಾಮಪಂಚಾಯತಿಯ ಬಿಲ್ ಕಲೆಕ್ಟರ್ ನಜೀರ್ ಹಾಗೂ ಮರದ ಕೆಲಸ ಮಾಡುವ ಲಿಂಗಪ್ಪ ಗೌಡ ಈ ಕಾರ್ಯದಲ್ಲಿ ಭಾಗಿಯಾಗಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.