*ಯುವ ವಾಗ್ಮಿಗಳ ಬಳಗದ ವತಿಯಿಂದ ರಾಜ್ಯಮಟ್ಟದ ಚರ್ಚಾಸ್ಪರ್ಧೆ* #avintvcom
1 min read
*ಯುವ ವಾಗ್ಮಿಗಳ ಬಳಗದ ವತಿಯಿಂದ ರಾಜ್ಯಮಟ್ಟದ ಚರ್ಚಾಸ್ಪರ್ಧೆ*
ಯುವ ವಾಗ್ಮಿಗಳ ಬಳಗ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಸಾಹಿತ್ಯ, ಕಲೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿದೆ. ಭಾಷಣ ಮತ್ತು ಚರ್ಚಾಸ್ಪರ್ಧೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಯುವ ಮನಸ್ಕರಿಂದ ಸ್ಥಾಪಿತವಾಗಿರುವ ಈ ಸಂಸ್ಥೆಯು ಕರೋನಾ ಸಂದಿಗ್ಧ ಸ್ಥಿತಿಯಲ್ಲಿ ಹುಟ್ಟಿಕೊಂಡಿದ್ದು ಲಾಕ್ಢೌನ್ ಸಂಧರ್ಭದಲ್ಲಿ ಹಲವಾರು ಕವಿಗೋಷ್ಠಿ,ಕಥಾಗೋಷ್ಠಿ,ಗಾನಯಾನ ಮತ್ತು ಹಲವಾರು ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ರಾಜ್ಯದಲ್ಲಿನ ಹಲವಾರು ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಇದೀಗ ವಿನೂತವಾದ ಚರ್ಚಾಸ್ಪರ್ಧೆಯನ್ನು ಆಯೋಜಿಸುವುದರ ಮೂಲಕ ಒಂದು ಹೆಜ್ಜೆ ಮುಂದೆ ಹೋಗಿದೆ.
ಸರ್ಕಾರವು ಪಿ.ಯು.ಸಿ ಪರೀಕ್ಷೆ ರದ್ದು ಪಡಿಸಿರುವ ಹಿನ್ನೆಲೆ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು; ವಿದ್ಯಾರ್ಥಿಗಳ ಭವಿಷ್ಯದ ಅಧಃಪತನಕ್ಕೆ ಆಹ್ವಾನವೇ? ವಿಷಯದ ಕುರಿತು ರಾಜ್ಯಮಟ್ಟದ ಚರ್ಚಾಸ್ಪರ್ಧೆಯನ್ನು ಏರ್ಪಡಿಸಿದ್ದು ಸ್ಪರ್ಧೆಗೆ 16 ರಿಂದ 35 ವರ್ಷದೊಳಗಿನವರು ನೋಂದಣಿ ಮಾಡಿಸಿಕೊಳ್ಳಬಹುದು. ಹೆಸರು ನೋಂದಾಯಿಸಿಕೊಳ್ಳಲು ಜೂನ್ 18 ಕಡೆ ದಿನಾಂಕವಾಗಿರುತ್ತದೆ. ಸ್ಪರ್ಧೆಯು ಎರಡು ಸುತ್ತು ನಡೆಯಲಿದ್ದು ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಪ್ರಥಮ ಬಹುಮಾನವಾಗಿ ರೂ 3,000, ದ್ವಿತೀಯ ಬಹುಮಾನವಾಗಿ ರೂ 2,000 ತೃತೀಯ ಬಹುಮಾನವಾಗಿ ರೂ 1,000 ಮತ್ತು ಇಬ್ಬರು ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನವಾಗಿ ರೂ 500 ಬಹುಮಾನ ಮತ್ತು ಅಭಿನಂದನಪತ್ರವಿರುತ್ತದೆ. ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಇ-ಅಭಿನಂದನಪತ್ರ ನೀಡಲಾಗುತ್ತದೆ ಮಾಹಿತಿಗಾಗಿ 74068 54007 ಸಂಪರ್ಕಿಸಬಹುದು ಎಂದು ಆಯೋಜಕ ದೀಕ್ಷಿತ್ ನಾಯರ್ ತಿಳಿಸಿದರು.
ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.