*ಭಾರತೀಯ ಜೈನ ಸಂಘಟನೆ ವತಿಯಿಂದ ಒಟ್ಟು 5000 ಸಸಿಗಳನ್ನು ನೆಟ್ಟು ಸತತ 2-3 ವರ್ಷ ಗಳ ಪಾಲನೆ ಪೋಷಣೆ *#avintvcom
1 min read
ಭಾರತೀಯ ಜೈನ ಸಂಘಟನೆ ಕರ್ನಾಟಕ (ಚಾಪ್ಟರ್) ವತಿಯಿಂದ ರಾಜ್ಯಾದ್ಯಂತ ತನ್ನ ಎಲ್ಲ ಶಾಖೆಗಳಲ್ಲಿ ವಿಶ್ವ ಪರಿಸರ ಮಾಸಿಕವನ್ನು ಅಯೋಜಿಸಲಾಗುತ್ತಿದೆ.
ನಮ್ಮ ರಾಜ್ಯವನ್ನು ಹಸಿರು ಕರ್ನಾಟಕ ಮಾಡುವ ಪ್ರಧಾನ ಗುರಿಹೊಂದಿ, ನೈಸರ್ಗಿಕ ಆಮ್ಲಜನಕವನ್ನು ಸಸಿ ನೆಟ್ಟು ಮರಬೇಳೆಸಿ ಹಸಿರು ಕರ್ನಾಟಕ ಮಾಡುವ ಮಹಾನ್ ಗುರಿಯೊಂದಿಗೆ ಆರಂಭಿಸಿರುವ ಭಾರತೀಯ ಜೈನ್ ಸಂಘಟನೆ – ತನ್ನ ಒಟ್ಟು 45 ಶಾಖೆಗಳ ವತಿಯಿಂದ ಒಟ್ಟು 5000 ಸಸಿಗಳನ್ನು ರಾಜ್ಯದೆಲ್ಲೆಡೆ ನೆಟ್ಟು, ಆಯಾ ಭಾಗದ ಎಲ್ಲ ಸದಸ್ಯರು ಈ ಕಾರ್ಯವನ್ನು ಮಾತೃಸ್ವರೂಪಿ ಕಾಯಕ ಎಂದು ಪರಿಗಣಿಸಿ, ನೆಟ್ಟ ಎಲ್ಲ ಸಸಿಗಳನ್ನು ತಮ್ಮ ಮಕ್ಕಳಂತೆ ಸತತ 2-3 ವರ್ಷ ಗಳ ಪಾಲನೆ ಪೋಷಣೆ ಮಾಡಿ ಮರವಾಗಿ ಬೆಳೆಸುವ ಪ್ರಮಾಣವನ್ನು ಮಾಡುವುದರೊಂದಿಗೆ, ಈ ದಿನ 12.06.2021ರಂದು ಹುಬ್ಬಳ್ಳಿಯ ಶಾಖೆಯಿಂದ ಆರಂಭಿಕವಾಗಿ 100 ಸಸಿಗಳನ್ನು ನೆಡುವ ಮೂಲಕ ಈ ಮಹಾನ್ ಹಸಿರು ಕರ್ನಾಟಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಪುಕ್ರಾಜ್ ಜಿ ಸಂಘವಿ ಆಗಮಿಸಿದ್ದರು.
ಜೈನ ಸಮಾಜದ ಮುಖಂಡರಾದ ಶ್ರೀ ಪಾರಸಮಲ್ ಪಾಟ್ವಾ, ಶ್ರೀ ಮಹೇಂದ್ರ ಪಾಲ್ಗೊತಾ, ಶ್ರೀ ವಿಮಲ್ ಪೂರ್ವಾಲ್, ಹಸಿರು ಕರ್ನಾಟಕ ಸಂಘ ಅಧ್ಯಕ್ಷ ಶ್ರೀ ಚನ್ನು ಹೊಸಮನಿ, ಬಿಜೆಎಸ್ ಹುಬ್ಬಳ್ಳಿ ಶಾಖಾ ಅಧ್ಯಕ್ಷ ಶ್ರೀ ಪ್ರಕಾಶ ಕವಾಡ, ಕಾರ್ಯದರ್ಶಿ ಶ್ರೀ ಮಹಾವೀರ ಕೊಠಾರಿ, ರಾಷ್ಟ್ರೀಯ ಸಚಿವರಾದ ಶ್ರೀ ಗೌತಮ ಭಾಫಣ, ಕಾರ್ಯಕ್ರಮ ಚೇರ್ಮನ್ ಶ್ರೀ ಸುರೇಶ್ ಷಾ, ಶ್ರೀ ಧಿರಾಜ್ ಓಸ್ತವಾಲ್ ಹಾಗೂ ಎಲ್ಲ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡುದ್ದರು.