ಮನೆ- ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸು(ಹಂಚು)ವ *ಪತ್ರಿಕಾ ವಿತರಕರಿಗೆ*ಆಹಾರ ಕಿಟ್ಟ ವಿತರಿಸಲಾಯಿತು#avintvcom
1 min read
ದಿನಾಲು ಮಳೆ, ಚಳಿ, ಬಿಸಿಲು ಲೆಕ್ಕಿಸದೇ ಮನೆ- ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸು(ಹಂಚು)ವ ಪತ್ರಿಕಾ ವಿತರಕರಿಗೆ ಕಲಬುರಗಿ-ಯಾದಗೀರ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ರಾಜಕುಮಾರ ಪಾಟೀಲ ತೆಲ್ಕೂರ ಅವರು ಪಡಿತರ ಕಿಟ್ ಗಳನ್ನು ವಿತರಿಸಿದರು
ಮಹಾನಗರದಲ್ಲಿ ಪತ್ರಿಕೆಗಳನ್ನು ಹಂಚುವವರಿಗೆ ಬ್ಯಾಂಕ್ ನ ಆವರಣದಲ್ಲಿ ಬ್ಯಾಂಕ್ ಸರ್ವ ಆಡಳಿತ ಮಂಡಳಿಯೊಂದಿಗೆ ಕಿಟ್ ಗಳನ್ನು ಹಂಚಿ
ಮಾತನಾಡಿದ ಅವರು ಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವುದು ಅಗತ್ಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊರೊನಾದಿಂದ ಸಂಕಷ್ಡಕ್ಕೆ ಒಳಗಾದವರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಜನ ಸೇವಾ ಕಾರ್ಯ ಮುಂದುವರೆದಿದೆ ಎಂದು ವಿವರಿಸಿದರು.
ಬ್ಯಾಂಕ್ ನ ಉಪಾಧ್ಯಕ್ಷ ಸುರೇಶ ಸಜ್ಜನ, ನಿರ್ದೆಶಕರಾದ ಶರಣ ಬಸಪ್ಪ ಪಾಟೀಲ್ ಅಷ್ಠಗಾ, ಅಶೋಕ ಸಾವಳೇಶ್ವರ, ಬಾಪುಗೌಡ ಪಾಟೀಲ್, ಬಸವರಾಜ ಪಾಟೀಲ್, ನಿಂಗಣ್ಣ ದೊಡ್ಮನಿ, ಸಿದ್ರಾಮರಡ್ಡಿ ಕೌಳೂರ, ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ನಿಂಬಾಳ ಸೇರಿದಂತೆ ಮುಂತಾದವರಿದ್ದರು.
ವರದಿ ವೆಂಕಟಪ್ಪ K ಸುಗ್ಗಾಲ್
ಬ್ಯುರೋ ನ್ಯೂಸ್ ಸೇಡಂ.