AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಪೊಲೀಸರೇ ಕಳ್ಳರಾದಾಗ ಯಾರಿಗೆ ದೂರು ಕೊಡುವುದು*#avintvcom

1 min read

*ಪೊಲೀಸರೇ ಕಳ್ಳರಾದಾಗ ಯಾರಿಗೆ ದೂರು ಕೊಡುವುದು*

ಮೈಸೂರು ವಿಶ್ವವಿದ್ಯಾಲಯದಲ್ಲಿಯ ಪರೀಕ್ಷಾ ಅಕ್ರಮ ಮತ್ತು ಲಾಡ್ಜ್‌ಗೆ ನುಗ್ಗಿ ಅಕ್ರಮದಲ್ಲಿ ತೊಡಗಿದ್ದ ಆರೋಪಿಗಳನ್ನು ಠಾಣೆಗೆ ಕರೆತಂದು ನಂತರ ಅವರೊಡನೆ ಡೀಲ್ ಮಾಡಿಕೊಂಡ ಪೊಲೀಸರ ಬಗ್ಗೆ KRS ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ Somasunder K S ನೆನ್ನೆ ಪಟ್ಟುಬಿಡದೆ ತಡರಾತ್ರಿಯ ತನಕ ಪೊಲೀಸ್ ಠಾಣೆಯಲ್ಲಿ ಕುಳಿತು FIR ಮಾಡಿಸಿದ್ದಾರೆ. ಮೈಸೂರಿನ ಮಂಡಿ ಮೊಹಲ್ಲಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ರನ್ನೂ ಸಹ ಆರೋಪಿಯನ್ನಾಗಿಸಲಾಗಿದೆ. ದೂರಿನಿಂದ ಬೆಚ್ಚಿಬಿದ್ದಿರುವ ಪೊಲೀಸರು ಸಾಕ್ಷ್ಯಾಧಾರಗಳನ್ನು ನಾಶಪಡಿಸಲು ಈಗಾಗಲೇ ಮುಂದಾಗಿರುವ ಮಾಹಿತಿ ಬರುತ್ತಿದೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು, “ಹುಡುಗರು ಲಾಡ್ಜ್‌ನಲ್ಲಿ ಪರೀಕ್ಷೆಗೆ ಅಭ್ಯಾಸ ಮಾಡಿಕೊಳ್ಳುತ್ತಿದ್ದರು” ಎಂದಿದ್ದಾರೆ! ಎಂದಿನಿಂದ ಹುಡುಗರು ನಡುರಾತ್ರಿಯಲ್ಲಿ ಲಾಡ್ಜ್‌ಗಳಲ್ಲಿ ರೂಮ್ ಪಡೆದು ತಮ್ಮ ಕಾಲೇಜಿನ ಅಟೆಂಡರ್ ಮತ್ತಿತರರೊಡನೆ ಸೇರಿ ಪರೀಕ್ಷೆಗೆಂದು ಓದುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ?

ಇಂತಹ ಮಾತುಗಳನ್ನು ಆಡುವ ಈ ಪೊಲೀಸ್ ಅಧಿಕಾರಿ ಇನ್ನೆಷ್ಟು ನೀಚ, ಭಂಡ ಮತ್ತು ಖದೀಮ ಆಗಿರಬೇಡ?

ಈ ಅಕ್ರಮದ ವಿಚಾರವಾಗಿ ಈಗಾಗಲೇ ನಾನು ಮೈಸೂರು ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಅವರು ಅಕ್ರಮ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ ಮತ್ತು ತಪ್ಪಿತಸ್ಥರ ಮೇಲೆ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅವರು ಅದನ್ನು ಬೇಗ ಮಾಡದೇ ಇದ್ದರೆ ಅವರ ಮೇಲೆಯೂ ಕರ್ತವ್ಯಲೋಪದ ದೂರು ದಾಖಲಿಸುವುದು ನಮಗೆ ಅನಿವಾರ್ಯವಾಗುತ್ತದೆ.

“ಕರ್ನಾಟಕ ರಾಷ್ಟ್ರ ಸಮಿತಿ” ಪಕ್ಷ ಮತ್ತದರ ಸದಸ್ಯರು ರಾಜ್ಯದಲ್ಲಿಯ ಈಗಿನ ಭ್ರಷ್ಟ ವ್ಯವಸ್ಥೆಯನ್ನು ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ ಮತ್ತು ಅದನ್ನು ಸರಿಪಡಿಸದೆ ಬಿಡುವುದೂ ಇಲ್ಲ. ಭ್ರಷ್ಟ J.C.B ಪಕ್ಷಗಳಂತೆ ಭ್ರಷ್ಟರನ್ನು ಸಹಿಸುವುದಾಗಲಿ, ಅವರೊಂದಿಗೆ ರಾಜಿಯಾಗಲಿ, ಇಲ್ಲವೇ ಇಲ್ಲ.

• RKR

10-06-2021.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author