ಯಾತಗೇರಿ ಬ್ರದರ್ಸ್ ವತಿಯಿಂದ ಆಪತ್ಬಾಂಧವ ವಾಹನ ಸೇವೆ ಆರಂಭ#avintvcom
1 min read
ಯಾತಗೇರಿ ಬ್ರದರ್ಸ್ ವತಿಯಿಂದ ಆಪತ್ಬಾಂಧವ ವಾಹನ ಸೇವೆ ಆರಂಭ
ಹುಬ್ಬಳ್ಳಿ- ಹು- ಧಾ ಮಹಾನಗರ ಜಿಲ್ಲಾ ಯುವ ಕಾಂಗ್ರೇಸ್ ಸಮಿತಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಯಾತಗೇರಿ ಬ್ರದರ್ಸ್ ಗೆಳೆಯರ ಬಳಗ ವತಿಯಿಂದ, ಕೋವಿಡ್ ನಿಂದ ಸಂಕಷ್ಟವನ್ನು ಅನುಭವಿಸುತ್ತಿರುವ ಜನರಿಗೆ ಹಾಗೂ ರೋಗಿಗಳಿಗೆ ಅನುಕೂಲ ವಾಗಲೆಂದು ಹುಬ್ಬಳ್ಳಿಯ ಗಿರಣಿಚಾಳದಲ್ಲಿ ಆರಂಭಿಸಲಾದ ಉಚಿತ ವಾಹನ ಆಪತ್ಬಾಂಧವ ಸೇವೆಯನ್ನು, ಶಾಸಕರಾದ ಪ್ರಸಾದ ಅಬ್ಬಯ್ಯ ಉದ್ಘಾಟಿಸಿ ಜನರಿಗೆ ಉಚಿತ ತರಕಾರಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಇಮ್ರಾನ್ ಯಲಿಗಾರ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಲ್ಲಿಕಾರ್ಜುನ ಯಾತಗೇರಿ, ಯುವ ಕಾಂಗ್ರೆಸ್ ಕಾರ್ಯದರ್ಶಿ ಸುರೇಶ ಯಾತಗೇರಿ, ಚಂದ್ರಶೇಖರ ಯಾತಗೇರಿ, ಗುರುನಾಥ ಯಾತಗೇರಿ, ಮಂಜುನಾಥ ಬಳ್ಳಾರಿ, ಶ್ರೀಕಾಂತ ಬಾರಕೇರ, ಬಸುರಾಜ ನಾಗಲಾಪುರ, ಗುರುನಾಥ ಮದರಿ, ಆನಂದ ಕನಸಾವಿ, ಕೃಷ್ಣಾ ಚಲವಾದಿ, ಸುನಿಲ ಈಟಿ, ಕಿರಣ ಗಾಣದಾಳ, ಮೋಹನ ವದ್ಲಿ, ನಾಗರಾಜ ಕನಸಾವಿ, ಶ್ರೀ ಶೈಲ್ ಯಾತಗೇರಿ ಹಾಗೂ ಅನೇಕರು ಉಪಸ್ಥಿತರಿದ್ದರು ವರದಿ.ಸುರೇಶ್ ಜಾದವ್ ಅವಿನ್ ಟಿವಿಯ ಹುಬ್ಬಳ್ಳಿ