AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀಮತಿ ನಾಗರತ್ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿದರಹಳ್ಳಿ ಇವರು ವಯೋ ನಿವೃತ್ತಿ ಹೊಂದಿದ್ದಾರೆ.#avintvcom

1 min read
Featured Video Play Icon

ಗುರುವಾದ ಶಿಕ್ಷಕಿ*

ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ.

ಇಂದು ಶ್ರೀಮತಿ ನಾಗರತ್ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿದರಹಳ್ಳಿ ಇವರು ವಯೋ ನಿವೃತ್ತಿ ಹೊಂದಿದ್ದಾರೆ.
ಇವರಿಗೆ ದೇವರು ಆರೋಗ್ಯ ಸಂಪತ್ತು ಐಶ್ವರ್ಯ ಇವುಗಳನ್ನು ದಯಪಾಲಿಸಿ ಕರುಣಿಸಲಿ ಎಂದು ಶುಭ ಹಾರೈಸುತ್ತೇವೆ.
ಶ್ರೀಮತಿ ನಾಗರತ್ನಮ್ಮ ಇವರು ಸುದೀರ್ಘ 40 ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ.
ಇವರ ಪರಿಚಯ ಹಾಗೂ ಸೇವೆ ಹೀಗಿದೆ:
ತಂದೆ ಶ್ರೀ ಗೋಪಾಲ,
ತಾಯಿ
ಶ್ರೀಮತಿ ಕಮಲಮ್ಮ,
ಪತಿ
ಶ್ರೀ ಎಮ್.ಎಲ್.ಪ್ರಕಾಶ್.
ಜನ್ಮದಿನಾಂಕ :1/6/1961.
ಸೇವೆಗೆ ಸೇರಿದ ದಿನಾಂಕ2/7/1981.
*ಸೇವೆ ಸಲ್ಲಿಸಿದ ಶಾಲೆಗಳು*
1)ಸ.ಕಿ.ಪ್ರಾ.ಶಾಲೆ ಭಕ್ತರಹಳ್ಳಿ.ದಿನಾಂಕ 2/4/1981 ರಿಂದ 1989 ರವರೆಗೆ.
2)ಸ.ಹಿ.ಪ್ರಾ.ಶಾಲೆ ಹಾಂದಿ.1989 ರಿಂದ 30/10/2001 ರ ವರೆಗೆ.
3).ಸ.ಮಾ.ಹಿ.ಪ್ರಾ.ಶಾಲೆ.ಮೂಡಿಗೆರೆ.ಇಲ್ಲಿ ದಿನಾಂಕ 31/10/2001 ರಿಂದ 15/3/2002 ರ ವರೆಗೆ.
4). ಸಮೂಹ ಸಂಪನ್ಮೂಲ ವ್ಯಕ್ಯಿಯಾಗಿ ಹೆಸ್ಗಲ್ ನಲ್ಲಿ ದಿನಾಂಕ 15/3/2002 ರಿಂದ7/7/2004
5). ಸ.ಮಾ.ಹಿ.ಪ್ರಾ.ಶಾಲೆ ಮೂಡಿಗೆರೆ ಇಲ್ಲಿ 7/7/2004 ರಿಂದ 6/4/2006
6).ಸ.ಹಿ.ಪ್ರಾ.ಶಾಲೆ ಜಕ್ಕಳಿ ಇಲ್ಲಿ 7/4/2006 ರಿಂದ 9/10/2015
7).ಪ್ರಸ್ತುತ ಸ.ಹಿ.ಪ್ರಾ.ಶಾಲೆ ಬಿದರಹಳ್ಳಿ ಇಲ್ಲಿ ದಿನಾಂಕ 10/10/2015 ರಿಂದ 31/05/2021 ರ ವರೆಗೆ ಸೇವೆ ಸಲ್ಲಿಸಿದ್ದಾರೆ.
ಸಹ ಶಿಕ್ಷಕರಾಗಿ,
ಭಡ್ತಿ ಮುಖ್ಯ ಶಿಕ್ಷಕರಾಗಿ ಇವರ ಸೇವೆ ಅನನ್ಯ,
ಅಮೂಲ್ಯವಾದುದು.
ಸಹಸ್ರಾರು ವಿದ್ಯಾರ್ಥಿ ಸಮೂಹಕ್ಕೆ ಇವರು ಆರಾಧ್ಯ ದೇವರಾಗಿದ್ದಾರೆ.
ಕ್ರೀಡೆ,ಸಾಂಸ್ಕೃತಿಕ, ಶೈಕ್ಷಣಿಕ ವಲಯಕ್ಕೆ ಇವರ ಕೊಡುಗೆ ಅಪಾರವಾದುದು.
ಶಿಕ್ಷಕರಿಗೆ ತರಬೇತಿಯನ್ನೂ ನೀಡಿರುವ ಹೆಗ್ಗಳಿಕೆ ಇವರದು.
ಗುರುಚೇತನ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ,ಸಹೋದ್ಯೋಗಿಗಳ,ಊರವರ ಪ್ರೀತಿಯ ಟೀಚರ್ ಇವರು.
ಮೂಡಿಗೆರೆ ಪ್ರಾ.ಶಾ.ಶಿ.ಸಂಘದ ಉಪಾಧ್ಯಕ್ಷರು ಮತ್ತು ಖಜಾಂಚಿಯಾಗಿ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸೇವೆಗೈದಿದ್ದಾರೆ.
ಈ ಎಲ್ಲಾ ಗಣನೀಯ ಸೇವೆ ಪರಿಗಣಿಸಿ ಇಲಾಖೆ 2020-21 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಮುಡಿಗೇರಿಸಿತು. ಸದಾ ನಗುಮುಖದ, ಸ್ನೇಹಮಯಿ, ಮೂಡಿಗೆರೆ ಶಿಕ್ಷಕರ ಕಣ್ಮಣಿ, ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿ, ಸದಾ ಉತ್ಸಾಹಿ, ಸರಳ ಜೀವನ-ಉದಾತ್ತ ಚಿಂತನೆಗಳುಳ್ಳ ನಡೆನುಡಿ, ವಿಚಾರದಾರೆಗಳು, ಸಮಾನ ಮನಸ್ಸಿನ ಆದರ್ಶ ಗುಣಗಳ ಗುರು ಮಾತೆಗೆ ನಿವೃತ್ತಿ ಜೀವನವು ಸುಖವಾಗಿರಲಿ.
ದೇವರು ಆಯುರಾರೋಗ್ಯ ,
ಐಶ್ವರ್ಯ, ಸುಖ, ಶಾಂತಿ, ನೆಮ್ಮದಿ ಜೀವನ ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.
ನಿಮ್ಮ ಸಮಯ ಪ್ರಜ್ಞೆ,ಕರ್ತವ್ಯನಿಷ್ಠೆ, ಆದರ್ಶ ಗುಣಗಳು ನಮ್ಮೆಲ್ಲರಿಗೂ ದಾರಿದೀಪವಾಗಲಿ. ಮಾದರಿಯಾಗಲಿ ಎಂದು ತಾಲೂಕಿನ ಸಮಸ್ತ ಶಿಕ್ಷಕ ವರ್ಗ,
ಸಮಸ್ತ ಮೂಡಿಗೆರೆ ನಾಗರಿಕರ,ವಿದ್ಯಾಭಿಮಾನಿಗಳ ಹೃದಯಪೂರ್ವಕ ಅಭಿನಂದನೆಗಳೊಂದಿಗೆ ಶುಭ ಹಾರೈಕೆಗಳು .ತಮ್ಮ ನಿವೃತ್ತಿ ಸಾಂಸಾರಿಕ ಜೀವನ ಫಲಪ್ರದವಾಗಲಿ.
ತಮಗೆ ವೃತ್ತಿಯಿಂದ ಮಾತ್ರ ನಿವೃತ್ತಿಯಾಗಿದೆ.ಪ್ರವೃತ್ತಿಯಿಂದ ನೀವು ಯಾವಾಗಲೂ ನಮಗೆ ಟೀಚರ್ ಹಾಗೂ ಮಾರ್ಗದರ್ಶಕರು.
ತಮ್ಮ ಆಶೀರ್ವಾದ ಎಂದೆಂದೂ ನಮ್ಮ ಮೇಲಿರಲಿ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author