AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರಿಗೆ ಆಹಾರದ ವ್ಯವಸ್ಥೆಯನ್ನು ಕಲ್ಪಿಸಲಾಯಿತು.#avintvcom

1 min read
Featured Video Play Icon

*ಮುಂದುವರಿದ ಸಹಾಯ ಹಸ್ತ*

ಭಾರತ್ ಸ್ಕೌಟ್ ಮತ್ತು ಗೈಡ್ ಚಿಕ್ಕಮಗಳೂರು.
ಜಿಲ್ಲಾ ಸಂಸ್ಥೆಯ ವತಿಯಿಂದ ಸತತವಾಗಿ 17ನೇ ದಿನವಾದ ಇಂದು 26-5-2021 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಕೈಮರ
ಇಲ್ಲಿನ ವೈದ್ಯರು, ನರ್ಸ್ ಗಳಿಗೆ,
ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರಿಗೆ ಆಹಾರದ ವ್ಯವಸ್ಥೆಯನ್ನು ಕಲ್ಪಿಸಲಾಯಿತು.

ವಿಶೇಷವಾಗಿ ಜಿಲ್ಲಾ ಸಂಸ್ಥೆಯಿಂದ ಕೋವಿಡ್ ವಾರಿಯರ್ಸ್ ಗಳಿಗೆ ಮಾಸ್ಕ್ ಗಳನ್ನು ನೀಡುವ ಅಭಿಯಾನ ಮುಂದುವರೆದಿದ್ದು, ಉತ್ತಮ ಗುಣಮಟ್ಟವಾದ N-95 ಮಾಸ್ಕ್ ಗಳನು ಸಿಬ್ಬಂದಿಗಳಿಗೆ ಜಿಲ್ಲಾ ಖಜಾಂಚಿ ಯಾದ ಶ್ರೀ ರಮೇಶ್ ರವರು ವಿತರಿಸಿದರು.

ಶ್ರೀ ಟಿ .ಸಿ ಮಲ್ಲಿಕಾರ್ಜುನ್ (ಮಧು) ಕಾಫಿ ಬೆಳೆಗಾರರು ಚಿಕ್ಕಮಗಳೂರು, ಹಾಗೂ ಅಶ್ವಿನ್ ಕಾಫಿ ಬೆಳೆಗಾರರು ಚಿಕ್ಕಮಗಳೂರು ಇವರು ಮಧ್ಯಾಹ್ನದ ಉಪಹಾರ ವ್ಯವಸ್ಥೆಯನ್ನು ಮಾಡಿಕೊಟ್ಟಿರುತ್ತಾರೆ. ಇವರಿಗೆ ಜಿಲ್ಲಾ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶ್ರೀ ಪಣಿರಾಜ್, ಜಿಲ್ಲಾ ಖಜಾಂಚಿ ಶ್ರೀ ರಮೇಶ್ , ಜಿಲ್ಲಾ ಸಹಾಯಕ ಆಯುಕ್ತರಾದ ಶ್ರೀ ಡಾ ಶ್ರೀನಿವಾಸ್, ಜಿಲ್ಲಾ ಸಂಘಟಕರಾದ ಕಿರಣ್, ನವೀನ್, ಸ್ಕೌಟ್ ಮಾಸ್ಟರ್ ರಾಘವೇಂದ್ರ, ಗೈಡ್ ಕ್ಯಾಪ್ಟನ್ ಸುಪ್ರಿಯಾ ರವರು ಹಾಜರಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್

http://nisargacare.com/career/

Navachaitanya Old Age Home

About Author