ಮಹಿಳೆಯರು, ಮಕ್ಕಳು, ವೃದ್ಧರಿಗೆ ಲಾಠಿ ಬೀಸಿದ ಮೂಡಿಗೆರೆಯ ಗ್ರಾಮ ಲೆಕ್ಕಾಧಿಕಾರಿ ಗಿರೀಶ್#avintvcom
1 min read
ಲಾಕ್ ಡೌನ್ ಉಲ್ಲಂಘನೆಯ ನೆಪದಲ್ಲಿ ಮಹಿಳೆಯರು, ಮಕ್ಕಳು, ವೃದ್ಧರಿಗೆ ಲಾಠಿ ಬೀಸಿದ ಮೂಡಿಗೆರೆಯ ಗ್ರಾಮ ಲೆಕ್ಕಾಧಿಕಾರಿ ಗಿರೀಶ್:-ಎಸ್ಡಿಪಿಐ ಖಂಡನೆ
▪️ಪೋಲಿಸರು ಲಾಠಿ ಬೀಸಬಾರದೆಂದು ಡಿಜಿಪಿ ಆದೇಶ ಇರುವಾಗ ಕಂದಾಯ ಇಲಾಖೆಯ ನೌಕರನಿಗೆ ಲಾಠಿ ಬೀಸಲು ಅಧಿಕಾರ ನೀಡಿದವರು ಯಾರು?
ಮೂಡಿಗೆರೆ, ಮೇ,24:-ಲಾಕ್ ಡೌನ್ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಮೂಡಿಗೆರೆಯ ಗ್ರಾಮ ಪಂಚಾಯತಿ ಲೆಕ್ಕಾಧಿಕಾರಿಯೊಬ್ಬ ಪಟ್ಟಣದ ಬಡಪಾಯಿ ಮಹಿಳೆ ಮತ್ತು ಹಲವಾರು ಬಡಪಾಯಿಗಳಿಗೆ ಲಾಠಿ ಬೀಸಿ ನೈತಿಕ ಪೋಲಿಸ್ ಗಿರಿ ಮೆರೆದ ಘಟನೆ ಮೂಡಿಗೆರೆಯಲ್ಲಿ ನಡೆದಿದೆ.
ಕಂದಾಯ ಇಲಾಖೆಯ ಅಧಿಕಾರಿಯ ಹೀನ ನಡೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಚಿಕ್ಕಮಗಳೂರು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಮತ್ತು ಆರೋಪಿ ಗಿರೀಶ್ ನನ್ನು ಸೇವೆಯಿಂದ ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೇ 24 ತಾರೀಖು ಬೆಳಿಗ್ಗೆ 6 ಗಂಟೆಯವರೆಗೆ ಲಾಕ್ ಡೌನ್ ಎಂದು ಘೋಷಿಸಲಾಗಿತ್ತು,
ಆದರೆ ನಿನ್ನೆ ಸಂಜೆ ಪರಿಷ್ಕೃತ ಆದೇಶವನ್ನು 28 ತಾರೀಖಿನವರೆಗೆ ಮುಂದೂಡಿಕೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು,
ಆದರೆ ಅವಿಧ್ಯಾವಂತೆ ಶಬಾನ ಎಂಬ ವಿಧವೆ ಮಹಿಳೆ ಇದರ ಅರಿವಿಲ್ಲದೆ ಇಂದು ಬೆಳಿಗ್ಗೆ ತರಕಾರಿ ಸೊಪ್ಪು ಗಳನ್ನು ಮಾರಲು ಬೆಳಿಗ್ಗೆ 8 ಗಂಟೆಯ ಸಮಯದಲ್ಲಿ ಮಾರುಕಟ್ಟೆಯ ಬಳಿ ಬಂದಿದ್ದರು.
ಆ ಸಂದರ್ಭದಲ್ಲಿ ಬೈಕಿನಲ್ಲಿ ಲಾಠಿ ಯೊಂದಿಗೆ ಬಂದ ಗ್ರಾಮ ಲೆಕ್ಕಾಧಿಕಾರಿ ಗಿರೀಶ್ ಎನ್ನುವ ಅಧಿಕಾರಿ ನಾನು ಕೂಡ ಒಬ್ಬ ಮಹಿಳೆಗೆ ಹುಟ್ಟಿದವ ಮತ್ತು ಈ ಮಹಿಳೆ ಒಂದೊತ್ತಿನ ಊಟಕ್ಕಾಗಿ ಬೀದಿಗೆ ಬಂದಿದ್ದಾಳೆ ಎಂಬ ಜ್ಞಾನ ವಿಲ್ಲದೆ ಬುದ್ದಿ ಹೀನನಾಗಿ ವರ್ತಿಸಿ ಏಕಾಏಕಿ ಲಾಠಿ ಯನ್ನು ಬೀಸಿ ವಿಧವೆ ಮಹಿಳೆಯನ್ನು ಗಾಯಗೊಳಿಸಿ ಬೈಕನ್ನೇರಿ ತೆರಳಿದ್ದಾನೆ.
ಅದಲ್ಲದೆ ಪಟ್ಟಣದಲ್ಲಿ ಹಲವಾರು ಬಡಪಾಯಿಗಳು, ಕೂಲಿ ಕಾರ್ಮಿಕರ ಮೇಲು ಗಿರೀಶ್ ಲಾಠಿಯಿಂದ ಹೊಡೆದು ಗಾಯಗೊಳಿಸಿದ್ದಾನೆ.
ರೌಡಿಗಳು ಬಂದ ರೀತಿ ಬೈಕ್ ನಲ್ಲಿ ಬಂದು ಜನರಿಗೆ ಲಾಠಿ ಬೀಸುವುದು ಅಂಗಡಿಯ ಸಿಸಿ ಕ್ಯಾಮರಾ ದಲ್ಲಿ ಸೆರೆಯಾಗಿದೆ.
ಪೋಲಿಸರು ಲಾಠಿ ಬೀಸಬಾರದೆಂದು ಡಿಜಿಪಿ ಆದೇಶ ಇರುವಾಗ ಕಂದಾಯ ಇಲಾಖೆಯ ನೌಕರನಿಗೆ ಲಾಠಿ ಬೀಸಲು ಅಧಿಕಾರ ನೀಡಿದವರು ಯಾರು?
ಲಾಠಿಯ ಹೊಡೆತಕ್ಕೆ ಮಹಿಳೆಯ ಕೈ ಗೆ ಬಲವಾದ ಪೆಟ್ಟು ಬಿದ್ದಿದ್ದು ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರಿಗೆ ಕರೆದೊಯ್ಯಲಾಗಿದ್ದು, ವಿಧವೆ ಮಹಿಳೆಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು,
ಹಾಗೂ ಜನಸಾಮಾನ್ಯರ ಮೇಲೆ ದರ್ಪ ತೋರಿಸುತ್ತಿರುವ ಗಿರೀಶ್ ಎಂಬ ಅಧಿಕಾರಿಯ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿಕಂದರ್ ಪಾಶಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ..
ಮುಂದಿನ ದಿನಗಳಲ್ಲಿ ಗಿರೀಶನ ಎಲ್ಲಾ ಅವ್ಯವಹಾರಗಳನ್ನು ಬಯಲಿಗೆ ಎಳೆಯುವುದಾಗಿ ತಿಳಿಸಿದ್ದಾರೆ.
ಪೊಲೀಸ್ ಲಾಠಿ ಪ್ರಹಾರ ಮಾಡುವುದು ನೋಡಿದ್ದೇವೆ. ಆದರೆ, ಕಂದಾಯ ಇಲಾಖೆ ನೌಕರ ಲಾಠಿ ಹಿಡಿದು ಸಾರ್ವಜನಿಕರಿಗೆ ಥಳಿಸುವುದು ಎಷ್ಟು ಸರಿ?. ಈ ವಿಡಿಯೋದಲ್ಲಿ ಲಾಠಿಯಿಂದ ಹೊಡೆಯುತ್ತಿರುವ ವ್ಯಕ್ತಿ ಗಿರೀಶ್ ಎನ್ನುವ ಗ್ರಾಮ ಲೆಕ್ಕಾಧಿಕಾರಿ ಮೂಡಿಗೆರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.