ಚಿಕ್ಕಮಗಳೂರು ಜಿಲ್ಲೆ.**ಕಳಸ ಕೋವಿಡ್ ಕೇರ್ ಸೆಂಟರ್ ಓಪನ್**#avintvcom
1 min read
ಸ್ಥಳ:- ಕಳಸ ತಾಲೂಕು
ದಿನಾಂಕ 26 5 21
*ಕಳಸ ಕೋವಿಡ್ ಸೆಂಟರ್ ಓಪನ್*
ಚಿಕ್ಕಮಗಳೂರು ಜಿಲ್ಲೆ.
ಕಳಸ ಪಟ್ಟಣದ ಜನರ ಬೇಡಿಕೆಯಾಗಿದ್ದ ಕೋವಿಡ್ ಕೇರ್ ಸೆಂಟರ್ ಇಂದಿನಿಂದ ಆರಂಭಗೊಂಡಿದೆ.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು ಕೋವಿಡ್ ಕೇರ್ ಆಗಿ ಮಾಡಲಾಗಿದೆ. ಇದನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್ ಅಂಗಾರ ರವರು ಉದ್ಘಾಟಿಸಿದರು.
ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಕೋವಿಡ್ ಹರಡುತ್ತಿದ್ದು ಕಳೆದವಾರ ಕಳಸ ಪಟ್ಟಣದಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿದ್ದ ವ್ಯಕ್ತಿಯು ಕಳೆದವಾರ ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಇದರಿಂದಾಗಿ ಪಟ್ಟಣದಲ್ಲಿ ಜನರು ಕೋವಿಡ್ ಸೆಂಟರ್ ತೆರೆಯಲು ಜಿಲ್ಲಾಡಳಿತದಲ್ಲಿ ಮನವಿ ಮಾಡಿದ್ರು.
ಅದೇ ರೀತಿ ಕಳಸದ ಸಮುದಾಯ ಆರೋಗ್ಯ ಕೇಂದ್ರವನ್ನು ಕೋವಿಡ್ ಕೇರ್ ಸೆಂಟರ್ ಅನ್ನು ಆರಂಭಿಸಲಾಗಿದೆ ಎಂದು ತಾಲೂಕು ಕೋವಿಡ್ ಅಧಿಕಾರಿ ಡಾ.ಮಧುಸೂದನ್ ತಿಳಿಸಿದ್ದಾರೆ.
10 ಆಕ್ಸಿಜನ್ ಬೆಡ್ಡ್ ಮತ್ತು 20 ಸಾಮಾನ್ಯ ಬೆಡ್ಡ್ ಗಳನ್ನು ಈ ಆಸ್ಪತ್ರೆ ಹೊಂದಿದೆ .
ಅದೇ ರೀತಿಯಾಗಿ ಲಸಿಕೆ ನಿಡುವ ಸ್ಥಳವನ್ನು ಪಕ್ಕದ ಗ್ರಾಮ ಪಂಚಾಯಿತಿ ಮತ್ತು ಗ್ರಂಥಾಲಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್ ಅಂಗಾರ ಹಾಗೂ ಸಭೆಯಲ್ಲಿ ವಿಧಾನಪರಿಷತ್ ಉಪ ಸಭಾಪತಿಗಳಾದ ಶ್ರೀ ಎಂ.ಕೆ. ಪ್ರಾಣೇಶ್ ಹಾಗೂ ಮೂಡಿಗೆರೆಯ ಶಾಸಕರಾದ ಎಂಪಿ ಕುಮಾರಸ್ವಾಮಿ ಮತ್ತು ಚಿಕ್ಕಮಗಳೂರು ಜಿಲ್ಲಾ ಅಧಿಕಾರಿಯಾದ ಶ್ರೀ ರಮೇಶ್ ಹಾಗೂ ಆಸ್ಪತೆಯ ಸಿಬ್ಬಂದಿಗಳು ಆಶಾ ಕಾರ್ಯಕತೆ೯ಯರು ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.