ಮಾಜಿ ಶಾಸಕ ಜೀವರಾಜ್ ರವರಿಗೆ ಕಾನೂನಿನ ಅರಿವು ಇಲ್ಲ ಕಾಮನ್ ಸೆನ್ಸ್ ಕೂಡ ಇಲ್ಲ-ಸುಧೀರ್ ಮುರೊಳ್ಳಿ ಪ್ರತಿಕ್ರಿಯೆ#avintvcom
1 min readಮಾಜಿ ಶಾಸಕ ಜೀವರಾಜ್ ರವರಿಗೆ ಕನಿಷ್ಠ ಕಾನೂನಿನ ಅರಿವು ಇಲ್ಲ -ಕಾಮನ್ ಸೆನ್ಸ್ ಕೂಡ ಇಲ್ಲ-ಸುಧೀರ್ ಕುಮಾರ್ ಮುರೊಳ್ಳಿ ಪ್ರತಿಕ್ರಿಯೆ
ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಮಾರಾಟ ಪ್ರಕರಣಗಳು ಪದೇಪದೆ ವರದಿಯಾಗುತ್ತಿದ್ದು ಈ ಬಗ್ಗೆ ತಾಲ್ಲೂಕಿನಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಇದೇ ರೀತಿ ರಾಜ್ಯಾದ್ಯಂತ ಹಲವು ಪ್ರಕರಣಗಳು ವರದಿಯಾಗಿವೆ.
ಇಂತಹ ವಿಚಾರದಲ್ಲಿ ಬಾಲ ನ್ಯಾಯ ಮಕ್ಕಳ ಪೋಷಣೆ ಮತ್ತು ರಕ್ಷಣೆ 2015 ಕಾಯ್ದೆಯ ಪ್ರಕಾರವೇ ನಾವೆಲ್ಲರೂ ಕಾರ್ಯನಿರ್ವಹಿಸಬೇಕಾಗಿದೆ.
ಮಕ್ಕಳ ಮಾರಾಟ ಮಾಡುವುದು ಅಥವಾ ನಿಯಮಬಾಹಿರವಾಗಿ ಮಗು ಹೆತ್ತವರು ಇನ್ನೊಬ್ಬರಿಗೆ ಮಗುವನ್ನು ಹಸ್ತಾಂತರ ಮಾಡುವುದು ಕಾನೂನಿನ ಪರಿಮಿತಿಯಲ್ಲಿ ಅವಕಾಶವಿಲ್ಲ ಮತ್ತು ಇದು ಅಪರಾಧ ವಾಗಿರುತ್ತದೆ .
ಮಗುವನ್ನು ಹೆತ್ತವರು ಯಾವುದೇ ಕಾರಣ ನೀಡಿದರೂ ಆ ಮಗು ಇನ್ನೊಬ್ಬರ ಕಾನೂನುಬದ್ಧ ಮಗು ವಾಗಬೇಕಾದರೆ ಅದಕ್ಕೆ ಸಂಬಂಧಪಟ್ಟ ಇಲಾಖೆ ಮತ್ತು ಪ್ರಾಧಿಕಾರಗಳಿಂದ ಅಧಿಕೃತ ಮಗುವಿನ ಹಸ್ತಾಂತರ ಮಾಡಬೇಕು ಇದು ಕಾನೂನಿನಲ್ಲಿ ಒಪ್ಪಿತ ಕ್ರಮ.
ಈ ರೀತಿ ಮಾಡುವುದು ಮಗುವನ್ನು ಕೊಟ್ಟವರಿಗೂ ಕ್ಷೇಮ ಮತ್ತು ಮಗುವನ್ನು ಪಡೆದವರಿಗೂ ಸಹ ಭವಿಷ್ಯದಲ್ಲಿ ಯಾವುದೇ ಆತಂಕಗಳಿರುವುದಿಲ್ಲ,ಮಗು ಬೆಳೆದಂತೆ ಮಗುವಿನ ವಿದ್ಯಾಭ್ಯಾಸ, ರಕ್ಷಣೆ, ಆಸ್ತಿಹಕ್ಕು, ಗಳಿಕೆ, ದುಡಿಮೆ ಇವುಗಳೆಲ್ಲವೂ ಒಳಗೊಂಡಿರುತ್ತದೆ.
ಇಂತಹ ಸಂದರ್ಭದಲ್ಲಿ ಅನಧಿಕೃತ ಮಗುವಿನ ಹಸ್ತಾಂತರ ಅಥವಾ ಮಾರಾಟ ಯಾವುದೇ ನಾಗರಿಕ ಸಮಾಜ ಒಪ್ಪುವ ಕ್ರಮವಲ್ಲ.
ಮಗುವನ್ನು ಪಡೆದುಕೊಂಡವರು ಮಗುವನ್ನು ಪ್ರೀತಿ ವಾತ್ಸಲ್ಯದಿಂದಲೇ ಸಾಕಿರುತ್ತಾರೆ ಅವರ ಪ್ರೀತಿ ಅಕ್ಕರೆಗೆ ನಾವು ಗೌರವಿಸಬೇಕಾಗುತ್ತದೆ.
ಆದರೂ ಸಹ ಕಾನೂನು ಬಾಹಿರವಾಗಿ ನಡೆದ ಪ್ರಕ್ರಿಯೆಗಳನ್ನು ಯಾರೂ ಬೆಂಬಲಿಸಕೂಡದು ಇಂತಹ ಸಂದರ್ಭದಲ್ಲಿ ಮಾಜಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್ ರವರು ಜವಾಬ್ದಾರಿಯುತ ಹುದ್ದೆಯಲ್ಲಿ ಇರುವವರು ಇಂತಹ ವಿಚಾರಗಳಲ್ಲಿ ಗಂಭೀರವಾಗಿ ಪ್ರತಿಕ್ರಿಯಿಸಬೇಕಾಗುತ್ತದೆ ಮತ್ತು ಅವರೇ ಪತ್ರಿಕಾ ಹೇಳಿಕೆ ನೀಡಿದಂತೆ ಮಗುವನ್ನು ಅನಾಥಾಲಯಕ್ಕೆ ಹಾಕುವುದು ಎಂದು ಬಾಲಿಶವಾಗಿ ಮಾತನಾಡಬಾರದು.
ಬಾಲನ್ಯಾಯ ಮಕ್ಕಳ ಹಿತ ಹಾಗೂ ರಕ್ಷಣಾ ಕಾಯ್ದೆ 2015 ರ ಪ್ರಕಾರ ಮಕ್ಕಳಿಗೆ ಸರ್ಕಾರ ಅಥವಾ ಸಂಬಂಧಿಸಿದ ಕಾನೂನು, ರಕ್ಷಣಾಧಿಕಾರಿಯನ್ನು ನೇಮಿಸಿರುತ್ತದೆ.
ಆ ರಕ್ಷಣಾಧಿಕಾರಿಯೂ ಇಂತಹ ಸಂದರ್ಭದಲ್ಲಿ ಮಗುವಿನ ಪಾಲನೆ ಮತ್ತು ಪೋಷಣೆ ನಿಯಮ ಪ್ರಕಾರ ಕಾನೂನುಬದ್ಧವಾಗಿ ಮಾಡಲೇಬೇಕಾಗಿರುತ್ತದೆ ಹಾಗೂ ಅಂತಹ ನಿಯಮಬದ್ಧವಾದ ಮತ್ತು ಮಕ್ಕಳ ರಕ್ಷಣೆ ಪರವಾಗಿಯೇ ಮಾಡಿರುವ ಕಾನೂನನ್ನು ಜೀವರಾಜ್ ರವರು ಅತಿ ಬಾಲಿಶವಾಗಿ ಪ್ರತಿಕ್ರಿಯಿಸಿ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ.
ಜೀವರಾಜ್ ರವರ ಇಂತಹ ಮಾತುಗಳು ಜನರನ್ನು ದಿಕ್ಕು ತಪ್ಪಿಸುವ ಹಾಗೂ ಕಾನೂನು ಬಾಹಿರ ಕ್ರಮಗಳಿಗೆ ಪ್ರಚೋದಿಸಿದಂತಿದೆ.
ಜವಾಬ್ದಾರಿ ಸ್ಥಾನದಲ್ಲಿ ಇರುವವರಿಗೆ ಕನಿಷ್ಠ ಕಾನೂನಿನ ಅರಿವು ಇರಬೇಕಾಗುತ್ತದೆ ಇಲ್ಲವಾದಲ್ಲಿ ಕಾಮನ್ ಸೆನ್ಸ್ ಆದರೂ ಇರಬೇಕಾಗುತ್ತದೆ.
ಈಗ ನಿಯಮ ಪ್ರಕಾರವಾಗಿ ಮಗುವನ್ನು ಅಭಿರಕ್ಷಣೆ ತೆಗೆದುಕೊಳ್ಳುವ ಬೇಕಾಗುತ್ತದೆಯೇ ಹೊರತು ಬೇರೆ ದಾರಿಗಳಿಲ್ಲ ಈಗ ನಿಯಮಬಾಹಿರವಾಗಿ ಅಥವಾ ಅಕ್ರಮವಾಗಿ ಮಗುವನ್ನು ಹೊಂದಿದವರಿಗೆ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
ಈ ನಾಗರಿಕ ಸಮಾಜದ ಜವಾಬ್ದಾರಿಯನ್ನು ಕಾನೂನು ಪ್ರಕ್ರಿಯೆಗಳ ವಿರುದ್ಧವಾಗಿ ಮಾಡುವುದು ಅಥವಾ ಮಾಡಲು ಪ್ರಚೋದಿಸುವುದು ಮಕ್ಕಳ ಹಕ್ಕಿನ ಉಲ್ಲಂಘನೆಯಾಗುತ್ತದೆ.
ಇಂತಹ ಕನಿಷ್ಠ ಅರಿವೂ ಇಲ್ಲದೆ ಮಕ್ಕಳ ಅಕ್ರಮ ಹಸ್ತಾಂತರಕ್ಕೆ ಅಥವಾ ಮಕ್ಕಳ ಕಳ್ಳತನಕ್ಕೆ ಪ್ರಚೋದಿಸಿರುವ ಜೀವರಾಜ್ ರವರನ್ನು ಬಾಲ ನ್ಯಾಯ ಮಕ್ಕಳ ಪೋಷಣೆ ಮತ್ತು ರಕ್ಷಣೆ ಕಾಯ್ದೆ 2015ಪ್ರಕಾರ ಅವರನ್ನು ಆರೋಪಿಯನ್ನಾಗಿಸಿ ಅವರ ಮೇಲೆ ತನಿಖೆ ಗೆ ಕ್ರಮ ಕೈಗೊಳ್ಳಬೇಕು ಮತ್ತು ಜೀವರಾಜ್ ರವರು ಜವಾಬ್ದಾರಿ ಅರಿತು ಮಾತನಾಡುವುದನ್ನು ಕಲಿಯಬೇಕು.
ಇಲ್ಲವಾದಲ್ಲಿ ಸಮಾಜದಲ್ಲಿ ನಡೆಯುವ ಅಕ್ರಮ ಕಾರ್ಯಗಳಿಗೆ ಜೀವರಾಜ್ ರವರ ರಕ್ಷಣೆ ಇದೆ ಎಂದು ಭಾವಿಸಬೇಕಾಗುತ್ತದೆ ಮತ್ತು ಇಂತಹ ವ್ಯಕ್ತಿಯನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯನ್ನಾಗಿ ಮಾಡಿಕೊಂಡರೆ ರಾಜ್ಯಕ್ಕಾಗಲಿ, ಸಮಾಜಕ್ಕಾಗಲೀ, ಜನರಿಗಾಗಲೀ ಯಾವುದೇ ಉಪಯೋಗವಿಲ್ಲ.
ನಾನು ಮೊದಲೇ ಹೇಳಿದಂತೆ ಜೀವರಾಜ್ ರವರಿಗೆ ಕಾನೂನಿನ ಕನಿಷ್ಠ ಅರಿವೂ ಇಲ್ಲ ಕಾಮನ್ ಸೆನ್ಸ್ ಕೂಡ ಇಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳಿ ತಿರುಗೇಟು ನೀಡಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.