*ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್,*ನಿರಾಶ್ರಿತರ ಕೇಂದ್ರಕ್ಕೆ ಹಾಸಿಗೆ, ದಿಂಬು, ಬೆಡ್ಶೀಟ್, ಬಟ್ಟೆ ಹಸ್ತಾಂತರಿಸಲಾಯಿತು. #avintvcom
1 min read*ಮುಂದುವರಿದ ಸಹಾಯ ಹಸ್ತ*
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್,ಕರ್ನಾಟಕ
ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು.
ದಿನಾಂಕ 25.05.2021 ರಂದು ಜಿಲ್ಲಾ ಸಂಸ್ಥೆಯ ವತಿಯಿಂದ ಜಿಲ್ಲೆಯ ನಿರಾಶ್ರಿತರ ಕೇಂದ್ರಕ್ಕೆ ಅಗತ್ಯವಿರುವ ಹಾಸಿಗೆ, ದಿಂಬು, ಬೆಡ್ಶೀಟ್, ಬಟ್ಟೆಗಳು ಇತ್ಯಾದಿ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು.
ನಿರಾಶ್ರಿತರ ಕೇಂದ್ರಕ್ಕೆ ಅಗತ್ಯವಸ್ತುಗಳನ್ನು ಜಿಲ್ಲಾ ಸಂಸ್ಥೆ ಹಾಗೂ ವಿವಿಧ ಸಂಸ್ಥೆಯ ವತಿಯಿಂದ ನೀಡಲಾಗುವ ವಸ್ತುಗಳನ್ನು ಅಗತ್ಯವಿರುವ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ನೇರವಾಗಿ ತಲುಪಿಸುವ ಕಾರ್ಯವನ್ನು ಜಿಲ್ಲಾ ಸಂಸ್ಥೆಯಿಂದ ಮಾಡಲಾಗುತ್ತಿದೆ.
ಈ ಸಹಾಯ ಕಾರ್ಯಕ್ಕೆ ಸಹಕರಿಸಿದ ಜಗದ್ಗುರು ರಂಭಾಪುರಿ ಶ್ರೀ ರೇಣುಕಾಚಾರ್ಯ ಛತ್ರದ ಅಧ್ಯಕ್ಷರು ಮತ್ತು ಸದಸ್ಯರಿಗೆ ರಾಜ್ಯ ಸಂಸ್ಥೆ ಮತ್ತು ಜಿಲ್ಲಾ ಸಂಸ್ಥೆಯ ವತಿಯಿಂದ ತುಂಬು ಹೃದಯದ ಧನ್ಯವಾದಗಳು. 🙏🙏
ಈ ಕಾರ್ಯದಲ್ಲಿ ಜಿಲ್ಲಾ ಸಹಾಯಕ ಆಯುಕ್ತರಾದ ಶ್ರೀ ಡಾ ಗಣೇಶ್, ಶ್ರೀಮತಿ ಭಾರತಿ ಶಿವರುದ್ರಪ್ಪ, ಜಿಲ್ಲಾ ಸಂಘಟಕರ ಗಳಾದ ಕಿರಣ್, ನವೀನ್, ಗೈಡ್ ಕ್ಯಾಪ್ಟನ್ ಸುಪ್ರಿಯಾ ಹಾಜರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್