ಲಾಕ್ಡೌನ್ ನಿಂದ ಹೊರ ಬರಲುಆಗದೇ ಅವರಿಗೆ ಮನೆಯ ಬಾಗಿಲಿಗೆ ತರಕಾರಿ#avintvcom
1 min read
…… ಸಹಾಯ ಹಸ್ತ…
ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿ ನಿಡುವಾಳೆ ಗ್ರಾಮ ಪಂಚಾಯತಿಗೆ ಒಳಪಟ್ಟಿರುವ ಕೆಳ ಮರ್ಕಲ್ ಭಾಗದ ಜನರು
ಲಾಕ್ಡೌನ್ ನಿಂದ ಹೊರ ಬರಲುಆಗದೇ ಅವರಿಗೆ ಅಗತ್ಯವಾಗಿ ಬೇಕಾದ ತರಕಾರಿ ಖರೀದಿಸಲು ಆಗಿರಲಿಲ್ಲ
ಇದರಿಂದ ಕೆಲವು ಮನೆಗಳಲ್ಲಿ ಸಂಕಷ್ಟದ ಸ್ಥಿತಿ ಎದುರಾಗಿತ್ತು.
ಆ ಭಾಗದ ಹುಡುಗರು ರಿತೇಶ್ ಹಾಗೂ ರಾಜೇಶ್ ಎನ್ನುವವರು ನಿಡುವಾಳೆ ಗ್ರಾಮ ಪಂಚಾಯತಿ ಸದಸ್ಯರಾಗಿರುವ ಸಚಿನ್ ಮರ್ಕಲ್ ಅವರಿಗೆ ಈ ಹುಡುಗರು ತಮ್ಮ ಹಳ್ಳಿಯ ಪರಿಸ್ಥಿತಿ ಹೇಳಿಕೊಂಡಿದ್ದಾರೆ,
ಈ ವಿಚಾರ ತಿಳಿಯುತ್ತಿದಂತೆ ಸಚಿನ್ ಮರ್ಕಲ್ ಅಲ್ಲಿ ಅಗತ್ಯ ಇರುವ ಎಲ್ಲಾ ಮನೆಗಳಿಗೆ ತಾವೇ ತರಕಾರಿಯನ್ನು ಖರೀದಿಸಿ ಸಂಕಷ್ಟದಲ್ಲಿ ಇರುವ ಜನಗಳ ಮನೆಯ ಬಾಗಿಲಿಗೆ ತರಕಾರಿಯನ್ನು ಕೊಟ್ಟುಬಂದಿರುತ್ತಾರೆ,
ಚುನಾವಣೆ ಬರುವ ಮುನ್ನ ಮನೆಯ ಬಾಗಿಲಿಗೆ ಬಂದು ಮತಕೇಳಿ ಹೋಗುವ ಸ್ಪರ್ಧಿಗಳು ಗೆದ್ದ ನಂತರ ಒಮ್ಮೆಯೂ ನಮ್ಮನ್ನು ತಿರುಗಿ ನೋಡುವುದಿಲ್ಲ. ಆದರೆ ಗೆದ್ದ ನಂತರ ಸಚಿನ್ ಮರ್ಕಲ್ ಅವರು ನಮಗೆ ಸಂಕಷ್ಟವಾದರೆ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ ಎಂದು ಗ್ರಾಮಸ್ಥರು ತಿಳಿಸಿರುತ್ತಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.