ಮನುಷ್ಯರೆಂಬ ಮಹಾ ಮೇಧಾವಿಗಳೇ ನಿಮಗಿದು ತಿಳಿದಿರಲಿ..#avintvcom
1 min read
ಮನುಷ್ಯರೆಂಬ ಮಹಾ ಮೇಧಾವಿಗಳೇ ನಿಮಗಿದು ತಿಳಿದಿರಲಿ…..
ಕೊರೋನಾ ಪಾಸಿಟಿವ್ ಬಂದು ಮನೆಯಲ್ಲೆ ಹೋಂ ಐಶೋಲೇಷನ್ ನಲ್ಲಿರುವವರು ತಮ್ಮ ಸ್ನೇಹಿತರೋ, ಹಿತೈಶಿಗಳೋ ಅಥವಾ ನೆರೆಹೊರೆಯವರೋ ಆಗಿದ್ದು, ಅಂತವರ ಹೆಸರು ತಮ್ಮ ಗಮನಕ್ಕೆ ಯಾವುದೇ ಮೂಲದಿಂದ ಗೊತ್ತಾದರೂ ಅವರಿಗೆ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿ, ಅವರಿಗೆ ಧೈರ್ಯದ ಮಾತುಗಳನ್ನಾಡಿ ಹಾಗೆಯೇ ಗುಣಮುಖರಾಗುವವರೆಗೂ ಅವರೊಂದಿಗೆ ಸದಾ ಸಂಪರ್ಕದಲ್ಲಿರಿ ಹಾಗೂ ಅವರು ಮನೆಯಲ್ಲೆ ವಿಶ್ರಾಂತಿ ಪಡೆಯಲು ತಿಳಿಸಿ…
ಬಹಳ ಮುಖ್ಯವಾಗಿ 17 ದಿನಗಳ ಹೋಂ ಐಶೋಲೇಷನ್ ಮುಗಿಸಿ ಬಂದ ನಂತರ ಅವರಲ್ಲಿ ಯಾವುದೇ ವೈರಾಣು ಇಲ್ಲದೆ ಇರುವುದರಿಂದ ಅವರನ್ನು ಕೊರೋನಾ ಪೂರ್ವದಲ್ಲಿ ಇದ್ದಂತೆ ಕಾಣಬಾರದು…
ಇಂದು ನಮ್ಮ ನೆರೆಹೊರೆಯವರಿಗೆ ಅರಿಯದೆ ಬಂದ ಕೊರೋನಾ ನಾಳೆ ನಮಗೂ ಬರಬಹುದು…
ಮನುಷ್ಯ ಮತ್ತೊಬ್ಬ ಮನುಷ್ಯನಿಗೆ ಇಂತಹ ಸಂಧರ್ಭದಲ್ಲೆ ಸಹಾಯ ಮಾಡಬೇಕೆ ವಿನಃ ಅವರಿಗೆ ಬಂದ ಕಾಯಿಲೆಯನ್ನ ದೊಡ್ಡ ಪ್ರಮಾದವೆಂಬಂತೆ ಸಮಾಜದ ಮುಂದಿಡುವ ಕೆಲಸ ಮಾಡಬಾರದು…
ವೈರಾಣು ಇವತ್ತು ಇರುತ್ತೆ ನಾಳೇ ಹೋಗುತ್ತೆ ಆದರೆ ನಮ್ಮ ಗ್ರಾಮದ ವ್ಯಕ್ತಿಗಳು ಸದಾ ನಮ್ಮೊಂದಿಗೆ ಇರುವವರು…
👍🏼👍🏼
ಬರಹ ಕೃಪೆ.
ಶರತ್ ಗೌಡ ಫಲ್ಗುಣಿ.
ನಿರ್ದೆಶಕರು.
ಜೂನಿಯರ್ ಚೇಂಬರ್ ಅಫ಼್ ಇಂಟರ್ ನ್ಯಾಶನಲ್.
ಜೇಸಿಐ.
ಬಣಕಲ್ ವಿಸ್ಮಯ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್
http://nisargacare.com/career/