ಡಾ, ಗಿರೀಶ್ ಕಾರ್ನಾಡ್ ಅವರ 83ನೇ ಜನ್ಮ ದಿನದ ಒಂದು ನೆನಪು ಮತ್ತು ಶುಭಾಶಯಗಳು#avintvcom
1 min read
*ಜನ್ಮ ದಿನದ ಒಂದು ನೆನಪು*
ಅಂತಾರಾಷ್ಟ್ರೀಯ ದೈತ್ಯ ಪ್ರತಿಭೆ,
ಜ್ಞಾನಪೀಠ ಪ್ರಶಸ್ತಿಗೆ ಬಾಜನರಾದ , ರಂಗ ದಿಗ್ಗಜ
ಡಾ, ಗಿರೀಶ್ ಕಾರ್ನಾಡ್ ಅವರ 83ನೇ ಜನ್ಮ ದಿನದ ಒಂದು ನೆನಪು ಮತ್ತು ಶುಭಾಶಯಗಳು
“ಬೆಳಕಿಲ್ಲದ ಹಾದಿಯಲ್ಲಿ ನೆಡೆಯಬಹುದು ಆದರೆ ಕನಸುಗಳೇ ಇಲ್ಲದ ಹಾದಿಯಲ್ಲಿ ನೆಡೆಯುವುದಾದರೂ ಹೇಗೆ ”
ಇದು ಕಾರ್ನಾಡರ ಯಾಯಾತಿ ನಾಟಕದ ಮುಖ್ಯ ಸಾಲು, ಯಾಯಾತಿ ಕಾರ್ನಾಡರ ಮೊದಲ ನಾಟಕ ಕೊಡ ಹೌದು, ಈ ಮೊದಲ ನಾಟಕ ಬರೆದಾಗ ಕಾರ್ನಾಡರಿಗೆ ಕೇವಲ 23ವರ್ಷ,
ಕಾರ್ನಾಡ್ ಅವರು ಬದುಕಿದ್ದರೆ ಇಂದು ತನ್ನ 83ನೆಯ ಜನ್ಮ ದಿನಕ್ಕೆ ಕಾಲಿಡುತ್ತಿದ್ದರು,
ವಿದುವೆ ತಾಯಿ ಕೃಷ್ಣಬಾಯಿ ತಂದೆ ರಘುನಾಥ ಕಾರ್ನಾಡರಿಗೆ ಬೇಡವಾಗಿದ್ದ ಈ ಕೂಸನ್ನು ದಂಪತಿಗಳಿಬ್ಬರು ತೆಗೆಸಲು ಪುಣೆಯ ವೈದ್ಯರೊಬ್ಬರ ಹತ್ತಿರ ಹೋಗಿದ್ದರು, ಅದೃಷ್ಟವಶಾತ್ ಅ ದಿನ ಹಗಲಿಡಿ ಅ ವೈದ್ಯರು ಆಸ್ಪತ್ರೆಗೆ ಬರಲೇ ಇಲ್ಲ, ಮನೆಗೆ ಹಿಂತಿರುಗಿದ ಈ ದಂಪತಿಗಳು ಪುನಃ ಆಸ್ಪತ್ರೆ ಕಡೆ ಮುಖ ಮಾಡಲಿಲ್ಲ, ಮತ್ತೆಂದೂ ಅ ಮಗುವನ್ನು ಹೊಟ್ಟೆಯಿಂದ ತೆಗೆಸಲು ಮನಸ್ಸು ಮಾಡಲೇ ಇಲ್ಲ,
ಹೀಗೆ ತನ್ನ ತಂದೆ ತಾಯಿಗೆ ಬೇಡವಾದ ಮಗುವೊಂದು ಮುಂದೆ ರಾಷ್ಟ್ರೀಯ -ಅಂತಾರಾಷ್ಟ್ರೀಯ ರಂಗಭೂಮಿ ದಿಗ್ಗಜನಾಗಿ ತನ್ನ 40ನೇ ವರ್ಷದೊಳಗೆ ಭಾರತದ ಹಲವಾರು ಭಾಷೆಗಳಲ್ಲಿ ರಂಗಭೂಮಿ, ಚಲನಚಿತ್ರಗಳಲ್ಲಿ ನಟಿಸಿ, ನಿರ್ದೇದೇಶಿ, ನವ್ಯ ಸಾಹಿತ್ಯದ ಮೂಲಕ ಕೃಷಿ ಮಾಡಿ ಅನೇಕ ಅಂತಾರಾಷ್ಟ್ರೀಯ ಮನ್ನಣೆಗಳನ್ನು ಪಡೆದು, ಪದ್ಮಶ್ರೀ ಸೇರಿದಂತೆ ಕನ್ನಡಕ್ಕೆ 7ನೇ ಜ್ಞಾನಪೀಠ ಪ್ರಶಸ್ತಿ ತಂದು ಕೊಡುವ ಮೂಲಕ ಭಾರತ ಇತಿಹಾಸಕ್ಕೆ ಒಂದು ಅತಿ ದೊಡ್ಡ ಮೈಲಿಗಲ್ಲಾಗಿದ್ದಾರೆ,
ಕಾರ್ನಾಡರು ದೇಶ ವಿದೇಶಗಳಲ್ಲಿ ಹೆಸರು ಮಾಡುವ ಮೂಲಕ ತಾನು ಹುಟ್ಟಿ ಬೆಳೆದ ದೇಶಕ್ಕೂ ಹೆಸರು ತಂದುಕೊಟ್ಟವರು,
ಸಂಖ್ಯಾ ದೃಷ್ಟಿಯಿಂದ ಕಡಿಮೆ ನಾಟಕ ರಚಿಸಿದ್ದರು ಸಹ, ಮೌಲ್ಯ ಮತ್ತು ಗುಣಮಟ್ಟದಲ್ಲಿ ಶ್ರೇಷ್ಠ ನಾಟಕಗಳನ್ನು ಕಟ್ಟಿ ಕೊಟ್ಟಿದ್ದಾರೆ, ಶ್ರೇಷ್ಠ ನಾಟಕಗಳಾಗಿವೆ ಎಂಬುದಕ್ಕೆ ಉದಾಹರಣೆ ಎಂದರೆ , ನನ್ನ ಅನುಭವಕ್ಕೆ ಕೇಳಿ ತಿಳಿದಂತೆ ಕಾರ್ನಾಡರ ನಾಟಕಗಳ ಬಗ್ಗೆ ಪಿಹೆಚ್ ಡಿ ಸಂಶೋಧನೆಗಳು ಆಗಿರುವಷ್ಟು ಬೇರೆಯವರ ನಾಟಕದ ಬಗ್ಗೆ ಆಗಿಲ್ಲ,
10 ಜುಲೈ 2019ರಂದು ಕಾಲವಾದ ಡಾ, ಗಿರೀಶ್ ಕಾರ್ನಾಡ್ ಅವರು ಹುಟ್ಟಿದ ದಿನ 19 ಮೇ 1938,
ಅವರೆ ಹೇಳಿದ ಹಾಗೆ ಆಡಾಡ್ತಾ ಆಯುಷ್ಯ ಹೋಗೆ ಬಿಟ್ಟಿತು,
ಕಾರ್ನಾಡರು ಅಮರವಾಗಲಿ,
ಅವರ ಆದರ್ಶಗಳು ಹಬ್ಬಿ ಬೆಳೆಯಲಿ,
ಅವರ ನೆನಪು ಎಲ್ಲರಲ್ಲಿ ಸದಾ ಇರುವಂತಾಗಲಿ,
ಸಂಸ್ಮರಣೆಯೊಂದಿಗೆ ಮತ್ತೊಮ್ಮೆ 83ನೇ ವರ್ಷದ ಶುಭಾಶಯಗಳು.
ಬರಹ ಕೃಪೆ.
ರಂಗನಮನಗಳೊಂದಿಗೆ :-
ನಿಮ್ಮ,,
ಡಿ, ಎಂ, ಮಂಜುನಾಥಸ್ವಾಮಿ,
ದಿಣ್ಣೆಕೆರೆ, ಚಿಕ್ಕಮಗಳೂರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.