AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಸಹಾಯ ಹಸ್ತ*ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು.#avintvcom

1 min read
Featured Video Play Icon

*ಮುಂದುವರಿದ ಸಹಾಯ ಹಸ್ತ*

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು.

ಇಂದು ಜಿಲ್ಲಾ ಸಂಸ್ಥೆ ವತಿಯಿಂದ 19.05.2021 ರಂದು ಜಿಲ್ಲಾ ಲಸಿಕಾ ಕೇಂದ್ರದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರುಪೂರೈಕೆ, ಲಸಿಕಾ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಪಾಡುವುದು,
ಲಸಿಕೆ ಪಡೆಯಲು ಬರುವವರಿಗೆ ಅದರ ಮಾಹಿತಿ ನೀಡಿ ಸರತಿಸಾಲಿನಲ್ಲಿ ನಿಲ್ಲಿಸುವುದು
ಮುಂತಾದ ಸೇವೆಯು ಮುಂದುವರೆದಿದ್ದು, ಇಂದು ಲಸಿಕಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ
ವೈದ್ಯರು ಮತ್ತು ನರ್ಸ್ ಆಶಾ ಕಾರ್ಯಕರ್ತರಿಗೆ ಪೊಲೀಸ್ ಸಿಬ್ಬಂದಿಗಳಿಗೆ ಉತ್ತಮ ಗುಣಮಟ್ಟದ ಆಹಾರದ ಪ್ಯಾಕೆಟ್ ಗಳನ್ನು ವಿತರಿಸಲಾಯಿತು.

ದರ್ಶನ್ ಜಿಪಿ ನರಗನಹಳ್ಳಿ ಇವರು ಈ ದಿನದ ಆಹಾರದ ವ್ಯವಸ್ಥೆಯನ್ನು ಮಾಡಿರುತ್ತಾರೆ,

ಈ ಕಾರ್ಯದಲ್ಲಿ ಜಿಲ್ಲಾ ಕಾರ್ಯದರ್ಶಿ ಶ್ರೀ ಪಣಿರಾಜ್ ಮತ್ತು ಜಿಲ್ಲಾ ಸಹಾಯಕ ಆಯುಕ್ತರು ಡಾಕ್ಟರ್ ಶ್ರೀನಿವಾಸ್ ರವರು,
ಶ್ರೀ ಸಿದ್ದೇಗೌಡರು ಜಿಲ್ಲಾ ಸ್ಥಾನಿಕ ಆಯುಕ್ತರು, ಹಾಗೂ ಜಿಲ್ಲಾ ಸಂಘಟಕರುಗಳಾದ ಕಿರಣ್,
ನವೀನ್ ಮತ್ತು ರಾಘವೇಂದ್ರ ಸ್ಕೌಟ್ ಮಾಸ್ಟರ್,
ಗೈಡ್ ಕ್ಯಾಪ್ಟನ್ ಸುಪ್ರಿಯರವರು ಹಾಜರಿದ್ದರು..

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author