AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

..ಹಕ್ಕೊತ್ತಾಯಗಳು.ಚಿಕ್ಕಮಗಳೂರು ಜಿಲ್ಲಾ ರೈತರಾದ ನಾವು ಸರ್ಕಾರಗಳಿಗೆ ಈ ಪ್ರತಿಭಟನೆ ಮನವಿ #avintvcom

1 min read
Featured Video Play Icon

…ಹಕ್ಕೊತ್ತಾಯಗಳು…

*ಗೆ
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ
ವಿಧಾನಸೌಧ
ಬೆಂಗಳೂರು*

ಇವರ ಮೂಲಕ
ಮಾನ್ಯ ಜಿಲ್ಲಾಧಿಕಾರಿಗಳು
ಚಿಕ್ಕಮಗಳೂರು ಜಿಲ್ಲೆ
ಚಿಕ್ಕಮಗಳೂರು

17/05/2021

ಚಿಕ್ಕಮಗಳೂರು ಜಿಲ್ಲಾ ರೈತರಾದ ನಾವು ಸರ್ಕಾರಗಳಿಗೆ ಈ ಪ್ರತಿಭಟನೆ ಮನವಿ ಸಲ್ಲಿಸುವುದು ಏನೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸತತ ಎರಡನೇ ಅವಧಿಯ ಆಡಳಿತವನ್ನು ಹಿಡಿದಿದ್ದು ಕೇಂದ್ರ ಸರ್ಕಾರ 2022ಕ್ಕೆ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಜನರನ್ನು ನಂಬಿಸಿದ್ದು ಆಗಿದೆ. ಈವರೆಗೆ ವಾಸ್ತವವಾಗಿ ಕೃಷಿ ಸಾಮಗ್ರಿ, ಸಲಕರಣೆಗಳ ಬೆಲೆ ದುಪ್ಪಟ್ಟು ಹೆಚ್ಚಿಸಿ ಉತ್ಪಾದನಾ ವೆಚ್ಚ ಜಾಸ್ತಿ ಮಾಡುತ್ತಾ ಕೃಷಿಯಲ್ಲಿ ನಷ್ಟವನ್ನು ಹೆಚ್ಚಿಸಲಾಗಿದೆ. ಸುಮಾರು ಆರು ತಿಂಗಳಿನಿಂದ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಯನ್ನು ಹೆಚ್ಚಿಸುವ ಮುಖಾಂತರ ರಾಸಾಯನಿಕ ಗೊಬ್ಬರಗಳ ಕೀಟನಾಶಕಗಳ ಮತ್ತು ಯಂತ್ರೋಪಕರಣಗಳ ಸಹಾಯಧನವನ್ನು ತೆಗೆದುಹಾಕಿ ಕೃಷಿ ಸಾಮಾಗ್ರಿಗಳ ಬೆಲೆ ದುಬಾರಿಯಾಗಿದೆ. ರಾಜ್ಯ ಸರ್ಕಾರ ಹನಿ ನೀರಾವರಿ, ತುಂತುರು ನೀರಾವರಿ ಮತ್ತು ಕೃಷಿ ನೀರಾವರಿಗೆ ಕೊಡುತ್ತಿದ್ದ ಸಬ್ಸಿಡಿ ಸಹಾಯಧನವನ್ನು ಹಿಂಪಡೆಯಲಾಗಿದೆ.
ಕಾಫಿ, ಕಾಳುಮೆಣಸು, ಅಡಕೆ ಬೆಳೆಗಾರರು ಕಳೆದ 15-20 ವರ್ಷಗಳಿಂದ ಬಹಳ ಆರ್ಥಿಕ ಸಂಕಷ್ಟದಲ್ಲಿದ್ದು ಕಳೆದ ವರ್ಷದಿಂದ ಕೋವಿಡ್-19 ಭೀಕರವಾಗಿ ಹರಡುತ್ತಿರುವುದರಿಂದ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಬೆಳೆಗಾರರಿಗೆ ಮತ್ತು ಕಾರ್ಮಿಕರಿಗೆ ತೊಂದರೆಯಾಗಿದೆ. ಮಾರ್ಚ್ ನಿಂದ ಮೇ ವರೆಗು ಗಿಡ ಕಸಿ, ನೀರು ಹಾಯಿಸುವುದು, ರಸಗೊಬ್ಬರ, ತರಗೆಲೆ ಸ್ವಚ್ಛತೆ, ಬಸಿ ಕಾಲುವೆಗಳು ಇತ್ಯಾದಿ ತೋಟದ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದ್ದು ತೋಟಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಮುಂದಿನ ಬೆಳೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಪ್ರತಿದಿನ 10-15 ಕಿಲೋಮೀಟರ್ ಕೃಷಿ ಕಾರ್ಮಿಕರನ್ನು ಸಾಗಾಣಿಕೆ ಮಾಡಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷದಿಂದ ಲಾಕ್ಡೌನ್ ಇರುವುದರಿಂದ ಸಕಾಲದಲ್ಲಿ ಕೆಲಸ ನಡೆಯದೆ ರೈತ ಬೆಳೆಗಾರರು ಆರ್ಥಿಕ ಸಂಕಷ್ಟದಲ್ಲಿದ್ದಾರೆ ಪರಿಣಾಮವಾಗಿ ಕೃಷಿ ಮತ್ತು ರೈತ ಬೆಳೆಗಾರರು ಏಕಕಾಲಕ್ಕೆ ನಾಶವಾಗುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿದೆ. ಆ ಕಾರಣದಿಂದ ಈ ಕೆಳಕಾಣಿಸಿದ ಹಕ್ಕೊತ್ತಾಯಗಳನ್ನು ಶೀಘ್ರವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ರಮ ವಹಿಸದೆ ಹೋದರೆ ರಾಜ್ಯದ ರೈತರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿ ಇದ್ದಾರೆ

ಹಕ್ಕೊತ್ತಾಯಗಳು
1. ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್ಡೌನ್ ಅವಧಿಯಲ್ಲಿ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿರುವುದನ್ನು ರದ್ದುಪಡಿಸಬೇಕು.
2. ಕೇಂದ್ರ ಸರ್ಕಾರ ಏರಿಸಿರುವ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಯನ್ನು ಪರಿಷ್ಕರಿಸಬೇಕು.
3. ಏಪ್ರಿಲ್ 1ರಿಂದ ಜಾರಿಯಾದಂತೆ ನೂತನ ಬೆಲೆ ಗೊಬ್ಬರದ ಚೀಲಗಳು ಅಂಗಡಿಗಳಿಗೆ ಬಂದಿವೆ. ದುಬಾರಿ ರಸಗೊಬ್ಬರಗಳ ಬೆಲೆಯನ್ನು ವಾಪಸ್ ಪಡೆದು ಹಿಂದಿನ ದರದಲ್ಲಿಯೇ ಕೊಡಬೇಕು.
4. ಕಾಫಿ, ಕಾಳುಮೆಣಸು, ಅಡಕೆ ರೈತ ಬೆಳೆಗಾರರು ಆರ್ಥಿಕ ಸಂಕಷ್ಟದಲ್ಲಿದ್ದು ಈ ಬೆಳೆಗಳು ವಾರ್ಷಿಕ ಬೆಳೆಯಾಗಿರುವುದರಿಂದ ವಿಶೇಷ ಪ್ಯಾಕೇಜ್ ಘೋಷಿಸಿ ಅನುಷ್ಠಾನಗೊಳಿಸಬೇಕು.
5. ರಾಜ್ಯ ಸರ್ಕಾರ ಕೃಷಿ ಯಂತ್ರೋಪಕರಣಗಳ ತುಂತುರು ನೀರಾವರಿ, ಹನಿ ನೀರಾವರಿ, ಬಿತ್ತನೆ ಬೀಜ, ಕೀಟನಾಶಕ, ಕ್ರಿಮಿ ನಾಶಕ ಔಷಧಿಗಳ ಸಹಾಯಧನ ಮುಂದುವರಿಸಬೇಕು.
6. ರಾಜ್ಯ ಸರ್ಕಾರ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ನೆನೆಗುದ್ದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಸಮಗ್ರವಾಗಿ ಜಾರಿಗೆ ತರಬೇಕು.
7. ಕೇಂದ್ರ ಸರ್ಕಾರದ ಸಾಲ ಮನ್ನಾ ಯೋಜನೆ ಅಡಿ 2009ರ ವಿದರ್ಭ ಪ್ಯಾಕೇಜ್ ಹಾಗೂ 2018ರ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಸಾಲ ಮನ್ನಾ ಘೋಷಣೆ ಯಾದಂತೆ ಎರಡು ಅವಧಿಯ ಸಾಲ ಮನ್ನಾ ದಿಂದ ಸುಸ್ತಿಯಾದ(NPA) ಬಹುತೇಕ ರೈತರು ಸಾಲ ಮನ್ನಾ ದಿಂದ ವಂಚಿತರಾಗಿದ್ದಾರೆ ತಕ್ಷಣದಿಂದಲೇ. NPA ಆಗಿರುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು.
8. ರಾಷ್ಟ್ರೀಕೃತ ಬ್ಯಾಂಕ್ , ಪಿ ಸಿ ಎ ಆರ್ ಡಿ ಬ್ಯಾಂಕ್ ಸಹಕಾರ ಸಂಸ್ಥೆಗಳು ಹಾಗೂ ಸರ್ಕಾರಿ ಸ್ವಾಮ್ಯದ ಎಲ್ಲಾ ಬ್ಯಾಂಕುಗಳ ಕರೋನ ಸಂಕಷ್ಟದಲ್ಲಿ ರೈತರು ಪಡೆದ ಬೆಳೆ ಸಾಲ ಅಭಿವೃದ್ಧಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ರೈತರು ಪಡೆದ ಸಾಲದ ಮೇಲಿನ ಬಡ್ಡಿ ಮನ್ನಾಮಾಡಬೇಕು ರೈತ ಬೆಳೆಗಾರರ ಬ್ಯಾಂಕ್ ಸಾಲದ ಖಾತೆಗಳ ಮರು ಹೊಂದಾಣಿಕೆ ಮಾಡಿಕೊಂಡು ಹೊಸ ಬೆಳೆ ಸಾಲ ನೀಡಬೇಕು.
9. ರಾಜ್ಯದ ನೊಂದಣಿ ಕಚೇರಿಗಳಲ್ಲಿ 2004ರ ನಂತರ ದ ಋಣಭಾರ ಪ್ರಮಾಣಪತ್ರ(EC) ನೊಂದಾಯಿತ ದಸ್ತಾವೇಜು ಪತ್ರಗಳ ದೃಢೀಕೃತ ನಕಲು ಪ್ರತಿಗಳನ್ನು ಪಡೆಯಲು ಕಾವೇರಿ ಆನ್ಲೈನ್ ಸೇವೆಗಳ ಮುಖಾಂತರ ಪಡೆಯಲು ಸುತ್ತೋಲೆ ಹೊರಡಿಸಿರುವುದು ರೈತರಿಗೆ ತುಂಬಾ ಅನಾನುಕೂಲವಾಗಿದೆ. ದೃಡೀಕೃತ ನಕಲುಗಳನ್ನು ಸಬ್ ರಿಜಿಸ್ಟರ್ ಕಚೇರಿಗಳಲ್ಲೆ ಈ ಹಿಂದೆ ಚಾಲ್ತಿಯಲ್ಲಿದ್ದ ಪದ್ಧತಿಯಂತೆ ದಾಖಲೆಗಳನ್ನು ವಿತರಿಸುವಂತೆ ಕ್ರಮ ಕೈಗೊಳ್ಳಬೇಕು.
10. ಡಾಕ್ಟರ್ ಸ್ವಾಮಿನಾಥನ್ ವರದಿಯಂತೆ ಉತ್ಪಾದನೆ ವೆಚ್ಚದ ಮೇಲೆ ಶೇಕಡ 50 ರಷ್ಟು ಲಾಭ ಸೇರಿಸಿ ಬೆಲೆ ಘೋಷಿಸಬೇಕು.
11. ಫಸಲು ಭೀಮ ವಿಮಾ ಯೋಜನೆಯನ್ನು ಪರಿಷ್ಕರಿಸಿ ಪ್ರತಿ ರೈತನ ನಷ್ಟ ಕ್ಕನುಗುಣವಾಗಿ ಪರಿಹಾರ ನೀಡಬೇಕು.
12. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ಬೆಲೆ ಖಾತ್ರಿ, ಮಾರುಕಟ್ಟೆ ಭದ್ರತೆ ಒದಗಿಸುವವರೆಗೆ ಮೇಲಿನ ಎಲ್ಲಾ ಸಬ್ಸಿಡಿ ಸಹಾಯಧನವನ್ನು ಮುಂದುವರಿಸಬೇಕು.

ಡಿ ಆರ್ ದುಗ್ಗಪ್ಪ ಗೌಡ
ಜಿಲ್ಲಾಧ್ಯಕ್ಷರು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
ಚಿಕ್ಕಮಗಳೂರು

ಬಿ ಸಿ ದಯಾಕರ್
ಜಿಲ್ಲಾ ಕಾರ್ಯಾಧ್ಯಕ್ಷರು

ಪಿ ಕೆ ನಾಗೇಶ್
ತಾ ಅಧ್ಯಕ್ಷರು
ಮೂಡಿಗೆರೆ

ಮಂಜೇಗೌಡ
ತಾ ಅಧ್ಯಕ್ಷರು
ಚಿಕ್ಕಮಗಳೂರು

ನಿರಂಜನಮೂರ್ತಿ
ತಾ ಅಧ್ಯಕ್ಷರು
ಕಡೂರು

ಓಂಕಾರಪ್ಪ
ತಾ ಅಧ್ಯಕ್ಷರು
ತರಿಕೆರೆ

ಬಸವರಾಜ್
ತಾ ಅಧ್ಯಕ್ಷರು
ಎನ್ಆರ್ ಪುರ

ಸವಿಂಜಯ ಜೈನ್
ಜಿಲ್ಲಾ ಸಂಚಾಲಕರು

ಮಹೇಶ್
ರಾಜ್ಯ ಉಪಾಧ್ಯಕ್ಷರು

ವೃಷಭ ರಾಜ್
ರೈತ ಮುಖಂಡರು….

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author