ಮುಂದುವರಿದ ಸೇವೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು. #avintvcom
1 min read
ಮುಂದುವರಿದ ಸೇವೆ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು.
ಜಿಲ್ಲಾ ಸಂಸ್ಥೆ ವತಿಯಿಂದ 4 ನೇ ದಿನದಂದು, ಹಗಲಿರುಳು ಬಿಸಿಲೆನ್ನದೆ ನಮ್ಮೆಲ್ಲರ ಸುರಕ್ಷತೆಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ನರ್ಸ್ ಗಳು ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು, ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರು ಗಳಿಗೆ, ಸಾರ್ವಜನಿಕರಿಗೆ ಇಂದು ತಾಜಾ ಬರೀತ ತಂಪಾದ ಮಜ್ಜಿಗೆಯನ್ನು ವಿತರಿಸಲಾಯಿತು.
ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಎಂ ಎನ್ ಷಡಕ್ಷರಿ ರವರ ನೇತೃತ್ವದ ತಂಡ ಕೋವಿಡ್ ಲಸಿಕಾ ಕೇಂದ್ರ, ನಗರದ ವಿವಿಧ ವೃತ್ತ ಚೆಕ್ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವರಿಗೆ ತಂಪಾದ ಮಜ್ಜಿಗೆಯ ಪ್ಯಾಕೆಟ್ಗಳನ್ನು ವಿತರಿಸಿದರು.
ಈ ಕಾರ್ಯದಲ್ಲಿ ಜಿಲ್ಲಾ ಕಾರ್ಯದರ್ಶಿ ಶ್ರೀ ಪಣಿರಾಜ್, ಜಿಲ್ಲಾ ಸಹಾಯಕ ಆಯುಕ್ತರು ಹಾಗೂ ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಶ್ರೀ ಡಾಕ್ಟರ್ ಶ್ರೀನಿವಾಸ್, ಜಿಲ್ಲಾ ಜಂಟಿ ಕಾರ್ಯದರ್ಶಿಗಳಾದ ಶ್ರೀ ನೀಲಕಂಠಚಾರ್, ಜಿಲ್ಲಾ ಸಂಘಟಕರುಗಳಾದ ಕಿರಣ್ ಮತ್ತು ನವೀನ್ ರವರು ಹಾಜರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.