*ಮೇಘರಾಜ* ಇನ್ನಿಲ್ಲ.ಆದರ್ಶ ವ್ಯಕ್ತಿತ್ವ, ಜೀವನದಲ್ಲಿ ಶಿಸ್ತಿನಿಂದ ಬದುಕಿದ ಬರಹಗಾರ ಮತ್ತು ಚಿಂತಕ #avintvcom
1 min read
ಶ್ರದ್ದಾಂಜಲಿ ಸಭೆ
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ.
ಬಣಕಲ್ ಗ್ರಾಮ ಪಂಚಾಯಿತಿಯ ಬಸ್ನಿ ಊರಿನ
ಮೇಘರಾಜ ಇನ್ನಿಲ್ಲ.
ಬಣಕಲ್ ಗ್ರಾಮ ಪಂಚಾಯಿತಿಯ ಸದಸ್ಯ,
ಉತ್ಸಾಹಿ ಯುವಕ ಸಮಾಜದ ಆಗು ಹೋಗುಗಳಿಗೆ ತಕ್ಷಣ ಪ್ರತಿಕ್ರಿಯಿಸಿ ತಿದ್ದುವ ಕೆಲಸ ಮಾಡುತ್ತಿದ್ದ,
ಎಂ.ಟೆಕ್ ಪದವೀಧರನಾಗಿ ಮುಂಬೈನಲ್ಲಿರುವ ಪ್ರತಿಷ್ಠಿತ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು,
ಕಾಫ಼ಿ ಬೆಳೆಗಾರರಾಗಿದ್ದರು.
ರಾಜಕೀಯದಲ್ಲಿ ಅತೀವ ಆಸಕ್ತಿ ಹೊಂದಿದ ಯುವನಾಯಕ ಬದುಕಿದ 31ವರ್ಷದಲ್ಲಿ ಆದರ್ಶ ವ್ಯಕ್ತಿತ್ವ, ಜೀವನದಲ್ಲಿ ಶಿಸ್ತಿನಿಂದ ಬದುಕಿದ ಬರಹಗಾರ ಮತ್ತು ಚಿಂತಕ,
ದಿನಾಂಕ 13-5-2021 ರ ಗುರುವಾರ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ.
ಇವರಿಗೆ ಮೂಡಿಗೆರೆ ತಾಲ್ಲೊಕ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಗ್ಗಲಮಕ್ಕಿಗಣೇಶ,
ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕ್ ಅಧ್ಯಕ್ಷರಾದ ಬಕ್ಕಿಮಂಜುನಾಥ.
ತಾಲೂಕು ಬಿ.ಜೆ.ಪಿ.ಕಾರ್ಯದರ್ಶಿ ಗಜೇಂದ್ರ ಕೊಟ್ಟಿಗೆಹಾರ, ವಿಜಯವಾಣಿ ಪತ್ರಿಕೆಯ ವರದಿಗಾರ ನಂದೀಶ್ ಬಂಕೇನಹಳ್ಳಿ. ವಾರ್ತಾಭಾರತಿ ಪತ್ರಿಕೆಯ ವರದಿಗಾರ ತನು, ಶಿಕ್ಷಕರಾದ ಭಕ್ತೇಶ್, ಜಯಪಾಲ್ ಹೊಸಳ್ಳಿ, ಪ್ರತಾಪ್ ಕೊಟ್ಟಿಗೆಹಾರ ಪ್ರದೀಪ್ ರಾಜ್, ವಿನಯ್ ಶ್ರದ್ಧಾಂಜಲಿ ಸಲ್ಲಿಸಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.