ಜಿಲ್ಲಾ ಕೃಷಿ ಹವಾಮಾನ ಘಟಕ, ಕೃಷಿ ವಿಜ್ಞಾನ ಕೇಂದ್ರ,ಮೂಡಿಗೆರೆ.ಪ್ರಕಟಣೆ* #avintvcom
1 min read
ಪ್ರಕಟಣೆ
ದಿನಾಂಕ 12-05-2021 ರಿಂದ 16-05-2021ರ ವರೆಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ,ಮೂಡಿಗೆರೆ,ಚಿಕ್ಕಮಗಳೂರು,ಶೃಂಗೇರಿ (50-60mm) ತಾಲೂಕುಗಳ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಗಾಳಿಯ ವೇಗವು ಹೆಚ್ಚಾಗಲಿದ್ದು ಹೆಚ್ಚು ಮಳೆಯಾಗುವ ಸಂಭವವಿದೆ ಹಾಗೂ ತರೀಕೆರೆ,ಕಡೂರು ಮತ್ತು ನರಸಿಂಹರಾಜಪುರ ತಾಲ್ಲೂಕುಗಳ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಗಾಳಿಯ ವೇಗವು ಹೆಚ್ಚಾಗಿರುವ ಸಂಭವದ ಜೊತೆ ಸಾಧಾರಣ ಮಳೆಯಾಗುವ ಸಂಭವವಿದೆ.(20-30mm to 10mm). ರೈತರು ಶುಂಠಿ ನಾಟಿ ಮಾಡಲು ಸೂಕ್ತ ಸಮಯವಾಗಿದೆ ಹಾಗೂ ನಾಟಿ ಮಾಡುವ ಸಮಯವಾಗಿದಲ್ಲಿ ರೈತರು ಏರು ಮಡಿ ಮಾಡಿ ನಾಟಿ ಮಾಡಬೇಕು. ಮುಂಗಾರು ಆಗಮನಕ್ಕೆ ಮೊದಲು ತೋಟಗಳಲ್ಲಿ ಬಸಿಕಾಲುವೆ ವ್ಯವಸ್ತೆಯನ್ನು ಸರಿಪಡಿಸಿಕೊಳ್ಳಲು ಸೂಕ್ತ ಸಮಯವಾಗಿದೆ. ಗಾಳಿಯ ವೇಗವು ಹೆಚ್ಚಾಗುವ ಸಂಭವಿರು ವುದರಿಂದ ರೈತರು ಬಾಳೆ ಬೆಳೆಗೆ ಆಧಾರವನ್ನು ನೀಡಬೇಕು. ಮುಂದುವರೆದು ವಿಸ್ತೃತ ಮಳೆ ಮುನ್ಸೂಚನೆಯ ಪ್ರಕಾರ ದಿನಾಂಕ:16-05-2021 ರಿಂದ 22-05-2021ರ ವರೆಗೆ ಜಿಲ್ಲೆಗೆ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಂಭವವಿದೆ. ಮಾಹಿತಿಗಾಗಿ ಸಂಪರ್ಕಿಸಿ: ಜಿಲ್ಲಾ ಕೃಷಿ ಹವಾಮಾನ ಘಟಕ, ಕೃಷಿ ವಿಜ್ಞಾನ ಕೇಂದ್ರ,ಮೂಡಿಗೆರೆ. Phn no: 9632894144*
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.