ಲಾಕ್ಡೌನ್ನಿಂದ ವಾಹನವಿಲ್ಲದೇ ಹಳ್ಳಿಗಳಿಗೆ ಪಡಿತರ ಸಾಗಿಸಲು ಪರದಾಟ #avintvcom
1 min read
ಮನೆ ಬಾಗಿಲಿಗೆ ಪಡಿತರ
ಲಾಕ್ಡೌನ್ನಿಂದ ವಾಹನವಿಲ್ಲದೇ ಹಳ್ಳಿಗಳಿಗೆ ಪಡಿತರ ಸಾಗಿಸಲು ಪರದಾಟ
ಮನೆ ಬಾಗಿಲಿಗೆ ಪಡಿತರ ವಿತರಿಸಿದ ಬಾಳೂರು ಗ್ರಾಮ ಪಂಚಾಯಿತಿ
ವಿಕ.ಸುದ್ದಿಲೋಕ ಕೊಟ್ಟಿಗೆಹಾರ: ಲಾಕ್ಡೌನ್ನಿಂದ ವಾಹನ ವಿಲ್ಲದೇ ಗ್ರಾಮೀಣ ಭಾಗದ ಹಳ್ಳಿಗಳಿಗೆ ಪಡಿತರ ಸಾಗಿಸಲು ಜನರು ಪರದಾಟ ಪಡುತ್ತಿದ್ದಾರೆ.ಇದನ್ನರಿತ ಬಾಳೂರು ಗ್ರಾಮ ಪಂಚಾಯಿತಿ ಮನೆ ಬಾಗಿಲಿಗೆ ಪಡಿತರ ವಿತರಿಸಿದೆ.
ಬಾಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಬಿ.ಮಂಜುನಾಥ್ ಮಾತನಾಡಿ,ಲಾಕ್ ಡೌನ್ನಿಂದ ಆಟೋ ಹಾಗೂ ಇತರೆ ವಾಹನಗಳು ಅಲಭ್ಯವಾಗಿದ್ದು ಗ್ರಾಮೀಣ ಭಾಗದ ಹಳ್ಳಿಯ ಜನರಿಗೆ ತುಂಬಾ ತೊಂದರೆಯಾಗಿದೆ.ಇದರಿಂದ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೂರು ಹೊರಟ್ಟಿ, ಕಲ್ಲಕ್ಕಿ, ಬಾಳೂರು ತೋಟ ಹಾಗೂ ಹಳ್ಳಿಕೆರೆ ಭಾಗಗಳಿಗೆ ನಮ್ಮ ಸ್ವಂತ ವಾಹನ ಮತ್ತು ಗ್ರಾಮ ಪಂಚಾಯಿತಿ ವತಿಯಿಂದಲೂ ವಾಹನ ತರಿಸಿ ಗ್ರಾಮಸ್ಥರಿಗೆ ಪಡಿತರ ಮನೆ ಬಾಗಿಲಿಗೆ ತಲುಪಿಸಿದ್ದೇವೆ. ನಗರಕ್ಕೂ ಹಾಗೂ ಹಳ್ಳಿಗಳಿಗೂ ಒಂದೇ ತರಹದ ಲಾಕ್ಡೌನ್ನಿಂದ ತುಂಬಾ ಸಮಸ್ಯೆಯಾಗಿದೆ. ಇದರಿಂದ ಜನರ ಸಮಸ್ಯೆಗೆ ಸ್ಪಂಧಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವಿಶ್ವನಾಥ್, ಅಧ್ಯಕ್ಷೆ ಗೀತಾ, ಸದಸ್ಯರಾದ ಮನೋಜ್, ಪ್ರಕಾಶ್ ಮತ್ತಿತರರು ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.