ಲಾಕ್ಡೌನ್ ಮಾರ್ಗಸೂಚಿ ಜಾರಿ ನೆಪದಲ್ಲಿ ಜನಸಾಮಾನ್ಯರ ಮೇಲೆ ಪೊಲೀಸರು ದೌರ್ಜನ್ಯ #avintvcom
1 min read
ಪೊಲೀಸ್ ದಬ್ಬಾಳಿಕೆ- ಖಂಡನೆ
ಲಾಕ್ಡೌನ್ ಮಾರ್ಗಸೂಚಿ ಜಾರಿ ನೆಪದಲ್ಲಿ ಜನಸಾಮಾನ್ಯರ ಮೇಲೆ ಪೊಲೀಸರು ದೌರ್ಜನ್ಯವೆಸಗಿ ಅಮಾನುಷವಾಗಿ ವರ್ತಿಸಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಖಂಡಿಸುತ್ತದೆ.
ಮುಗ್ಧ ರೈತರು, ವೃದ್ಧರು, ಮಹಿಳೆಯರು, ಕೂಲಿ ಕಾರ್ಮಿಕರು, ಆಸ್ಪತ್ರೆಗೆ ಹೋಗುವವರು, ಅಗತ್ಯ ವಸ್ತುಗಳು ಖರೀದಿಸಲು ಬಂದವರ ಮೇಲೆ ಮನಬಂದಂತೆ ಥಳಿಸಿ ದಬ್ಬಾಳಿಕೆ ನಡೆಸಲಾಗಿದೆ. ಕೋಲಾರದಲ್ಲಿ ಮಂಗಳಮುಖಿಯ ಮೇಲೆ ಹಲ್ಲೆ ನಡೆಸಿ ತಲೆಗೂದಲು ಹಿಡಿದು ಎಳೆದೊಯ್ದು ಥಳಿಸಿದ್ದಾರೆ . ಆಡಳಿತರೂಢ ಸರ್ಕಾರ ಹಾಗೂ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವ ಹೊಣೆ ಹೊತ್ತ ಪೊಲೀಸರು ನೀತಿ ನಿಯಮಗಳನ್ನು ಜಾರಿ ಮಾಡುವಾಗ ಸಾಮಾನ್ಯ ಜ್ಞಾನ ವು ಇಲ್ಲದಂತೆ ಮನುಷ್ಯತ್ವ ಮರೆತು ಅನಾಗರಿಕರಂತೆ ವರ್ತಿಸಿರುವುದು ಬ್ರಿಟಿಷ್ ಆಡಳಿತ ವ್ಯವಸ್ಥೆಯನ್ನು ನೆನಪಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಪೊಲೀಸ್ ಇಲಾಖೆಯಲ್ಲಿ ಬಹಳಷ್ಟು ಒಳ್ಳೆಯ ಅಧಿಕಾರಿಗಳು ಇದ್ದಾರೆ ಕೆಲವರು ಮಾಡುವ ತಪ್ಪುಗಳಿಂದ ಇಡೀ ಪೊಲೀಸ್ ಇಲಾಖೆ ತಲೆತಗ್ಗಿಸುವಂತಾಗಿದೆ. ಆಡಳಿತರೂಡ ಸರ್ಕಾರಗಳು ಇನ್ನು ಮುಂದೆ ಈ ರೀತಿ ಘಟನೆಗಳು ನಡೆಯದಂತೆ ತಡೆಯಬೇಕು.
ಲಾಕ್ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುತ್ತಿದ್ದರೆ ಕಾನೂನಿನಂತೆ ದಂಡ, ತಪ್ಪಿತಸ್ಥರ ಮೇಲೆ ಪ್ರಕರಣ ದಾಖಲು ಮಾಡುವ ಮೂಲಕ ಎಚ್ಚರಿಕೆ ನೀಡುವ ಕ್ರಮಗಳನ್ನು ಕೈಗೊಳ್ಳಬೇಕೆ ವಿನಹ ಈ ರೀತಿ ಅಮಾನುಷ್ಯವಾಗಿ ನಡೆದುಕೊಳ್ಳುವುದು ನಾಗರಿಕ ಸಮಾಜಕ್ಕೆ ಒಳ್ಳೆಯದಲ್ಲ.
ಡಿ ಆರ್ ದುಗ್ಗಪ್ಪ ಗೌಡ
ಜಿಲ್ಲಾಧ್ಯಕ್ಷರು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ.
ಚಿಕ್ಕಮಗಳೂರು.
ವರದಿ.
ಮಗ್ಗಲಮಕ್ಕಿಗಣೇಶ್.