*ಅರಣ್ಯ ನಾಶವಾಗುತ್ತಿದೆ.ಸರ್ಕಾರ ಹಾಗೂ ಅರಣ್ಯ ಅಧಿಕಾರಿಗಳು.ಗಮಕ್ಕೆ ತೊಗೊಂಡು ಕ್ರಮ ಕೈಗೊಳ್ಳಬೇಕು#avintvcom
1 min read
ಅರಣ್ಯ ನಾಶವಾಗುತ್ತಿದೆ..
ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಸಿಲಾರಕೊಟ್ ಗ್ರಾಮದಲ್ಲಿ ನಡೆದ ವಿಷಯವಿದು..
.
ಊರಿಂದ 2km ದೂರದಲ್ಲಿ ದಟ್ಟ ಅಡವಿ ಇದೆ.
ಆ ಅಡವಿ ಸುತ್ತಮುತ್ತ ಕೆಲವು ರೈತರಿಗೆ ಸಂಬಂಧಪಟ್ಟ ಹೊಲಗಳು ಇದಾವೆ..
.
ಆದರೆ ಕಳೆದ ಎರಡು ವರ್ಷ ಹಿಂದೆ ಜೆಡಿಎಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಊರಿನ SC ಮತ್ತು St category ಗೆ ಸಂಬಂದಿಸಿದ ಜನರಿಗೆ ಯಾರಿಗೆ ಹೊಲ ಮತ್ತು ಆಸ್ತಿ ಇಲ್ಲವೋ ಅಂಥವರು ಈ ಸರ್ಕಾರಕ್ಕೆ ಸಂಬಂದಿಸಿದ ಅಡವಿ ಭೂಮಿಯಲ್ಲಿ 2ಎಕರೆ ವಿಸ್ತೀರ್ಣದಲ್ಲಿ ಸಾಗು ಭೂಮಿಯನ್ನಾಗಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಕೊಟ್ಟಿತು..
ಇದರಿಂದ ಭೂಮಿ ಇಲ್ಲದ ಜನರಿಗಿಂತ ಆಸ್ತಿ ಇದ್ದವರೇ ಬೇಗನೆ ಕಬ್ಜ ಮಾಡಿಕೊಂಡು ಇಲ್ಲದವರಿಗೆ ಆಚೆ ತಲ್ಲಿಬಿಟ್ಟಿದರೆ ಇಲ್ಲಿನ bc ಮತ್ತು oc category ಗೆ ಸಂಬಂದಿಸಿದ ಜನ..
ಇದು ಯಾವ ನ್ಯಾಯ ಅಂತ ಕೆಲಿದ್ದಲ್ಲಿ.
ಇದು ನಮ್ಮ ಹೊಲದ ಪಕ್ಕದಲ್ಲಿದೆ ಇದು ನಮಗೆ ಸೇರುತ್ತದೆ ಎಂದು ಅವರನ್ನು ಕಾಲಿಡಲಾರದಂತೆ ಮಾಡಿದರೆ..
.
ಈ ಕ್ರಮವಾಗಿ ಆ ಸಮಯದಲ್ಲಿ ತುಂಬಾನೇ ಗಳಟೆಗಾಲಗಿ ಅರ್ಧಕ್ಕೆ ನಿಂತು ಹೋಗಿತ್ತು ಕೆಲವರ ಆಸೆ..
ಆದರೆ ಇಲ್ಲಿನ ಬಕ್ಕಿ ವಂಶಕ್ಕೆ ಸಂಬಂದಿಸಿದ ಮಣಿಕಪ್ಪ ಬಕ್ಕಿ., ಮೋಹಂದಪ್ಪ ಬಕ್ಕಿ, ಚಿನ್ನ ಮೋಗುಲಪ್ಪ ಬಕ್ಕಿ, ಬಗ್ಗಪ್ಪ ಬಕ್ಕೀ ಇಂತಹ ಮುಂತಾದ ಕೆಲವು ಜನ ಈ ಭೂಮಿಯನ್ನು ತಮ್ಮ ಸ್ವತಃ ಮಾಡ್ಕೋಬೇಕೆಂದು..
ಯಾರಿಗೂ ತಿಳಿಯದೇ ಸಮಯದಲ್ಲಿ ಜೆಸಿಬಿ ಯಿಂದ ಇಡೀ ಅಡವಿಯನ್ನೆ ಸರ್ವನಾಶ ಮಾಡಲು ಮುಂದಾಗಿದ್ದಾರೆ..
.
ಅದು ಅಲ್ಲದೆ.
ಇವರ ಒಬ್ಬೊಬ್ಬರ ಹೆಸರಲ್ಲಿ 5ಎಕರೆ ಸಾಗು ಭೂಮಿ ಈಗಾಗಲೇ ಇದೆ.
ಆದರೂ ಈ ಅಡವಿ ಮೇಲೆ ದೌರ್ಜನ್ಯ ಮಾಡ್ತಿದ್ದಾರೆ..
.
ಇವರಿಗೆ ಇರೋ ಆಸ್ತಿ ಇರೋವಾಗ ಇದರ ಮೇಲೆ ಯಾಕೆ ಅವರಿಗೆ ಅಷ್ಟೊಂದು ಆಸೆ..
ಸಾಮಾನ್ಯ ಜನರಿಗೆ ಸಾಗು ಭೂಮಿಯಾಗಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ ಸರ್ಕಾರ ಇವರು ಇತರ ಮಾಡಿದ್ರೆ ಸಾಮಾನ್ಯ ಜನರು ಎಲ್ಲಿ ಬದುಕೋದು.
.
ಅಷ್ಟೇ ಅಲ್ಲದೆ ಈ ಅಡವಿ ಯಾರ ಹೆಸರಲ್ಲೂ ಇಲ್ಲ.
ಆದರೆ ಅವರು ಇದೆಲ್ಲ ನಮ್ಮದೇ ಎಂದು ಹೆಲ್ಕೊಳ್ತಿದ್ದರೆ..
ಈ ಸುಳ್ಳು ಮಾತುಗಳನ್ನು ಇಲ್ಲಿನ ರಾಜಕಾರಣಿಗಳು ಕೂಡ ಅವರಿಗೆ ಸಹಕಾರ ಮಾಡುತ್ತಿದ್ದಾರೆ..
.
ಮನೆ ಇಲ್ಲದೆ ಭೂಮಿ ಇಲ್ಲದೆ..
ಏಷ್ಟೋ ಜನ ಈ ಪ್ರಾಂತದಲ್ಲಿ ಬಳಲುತ್ತಿದ್ದಾರೆ..
ಅವರ ಕಷ್ಟದ ನೋವು ಈ ರಾಜಕಾರಣಿಗಳಿಗೆ ಕನಿಸಲ್ಲವೆ.. ಚುನಾವಣೆ ಸಮಯದಲ್ಲಿ ಮಾತ್ರ ನಾವು ಅವರ ಕಣ್ಣಿಗೆ ಕಾಣಿಸುವುದೇ ಎಂದು ಇಲ್ಲಿನ ಜನ ತುಂಬಾನೇ ವ್ಯಕ್ತ ಪಡಿಸಿದ್ದಾರೆ..
.
ಆಸ್ತಿ ಇದ್ದವರಿಗೆ ಪುನಃ ಆಸ್ತಿ ಕಲ್ಪಿಸಿ ಕೊಡುವುದೇ ಇಲ್ಲಿನ ರಾಜಕಾರಣಿಗಳ ನಿಯತ್ತ….
.
ಪೊಲಸರಿಗೂ ದೂರು ನೀಡಲು ಹೋಗಬೇಕಾದರೆ ಜನರಿಗೆ ಅಷ್ಟೊಂದು ದೈರ್ಯ ಸಲುತಿಲ್ಲ..
.
ದಯವಿಟ್ಟು ಈ ವಿಷಯವನ್ನು ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು.
ಮತ್ತು ಸರ್ಕಾರವು ಹಾಗೆ ಶಾಸಕರಾದ ರಾಜಕುಮಾರ್ ಪಾಟೀಲ್ ತೆಳ್ಕೂರ್ ಅವರು ಗಮಕ್ಕೆ ತೊಗೊಂಡು ಕ್ರಮ ಕೈಗೊಳ್ಳುತ್ತಾರೆ ಎಂದು ನಂಬಿಕೆಯಿಂದ ಇದೀವಿ ಎಂದು ಜನ ವ್ಯಕ್ತ ಪಡಿಸಿದ್ದಾರೆ..
.
ಈ ವಿಷಯವನ್ನು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ವಿನಂತಿ..
.
ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ..