*ಸಕತ್ ಸದ್ದು ಮಾಡುತ್ತಿದೆ ಕೊರೋನ ಜಾಗೃತಿ ಗೀತೆ * ಕೊರೊನಾ ಸೋಂಕಿನ ವಿರುದ್ಧ ಜಾಗೃತಿ #avintvcom
1 min read
ಸಕತ್ ಸದ್ದು ಮಾಡುತ್ತಿದೆ ಕೊರೋನ ಜಾಗೃತಿ ಗೀತೆ
ವಿಶ್ವದಾದ್ಯಂತ ಭೀತಿಗೆ ತಳ್ಳಿರುವ ಕೊರೊನಾ ಸೋಂಕಿನ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಶಿಕ್ಷಕರೊಬ್ಬರು ತಾವೇ ಸಾಹಿತ್ಯ ರಚಿಸಿ, ಹಾಡಿದ್ದಾರೆ. ಇದೀಗ ಕೋವಿಡ್ ಗೀತೆ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ.
ಕೊಪ್ಪಳ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸಾರ್ವಜನಿಕರಿಗೆ ವೈರಸ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಶಿಕ್ಷಕರೊಬ್ಬರು ಗೀತೆಯನ್ನು ರಚಿಸಿ ಹಾಡುವ ಮೂಲಕ ಮನವಿ ಮಾಡಿದ್ದಾರೆ.
ಕೊರೊನಾ 2ನೇ ಅಲೆಯ ಕುರಿತು ಶಿಕ್ಷಕನಿಂದ ಜಾಗೃತಿ ಗೀತೆಈವರೆಗೆ ಹಲವಾರು ಜಾಗೃತಿ ಗೀತೆಗಳನ್ನು ರಚಿಸಿ ಹಾಡಿರುವ ತಾಲೂಕಿನ ಬೋಚನಹಳ್ಳಿ ಗ್ರಾಮದ ಶಿಕ್ಷಕ ಹನುಮಂತಪ್ಪ ಕುರಿ ಅವರು, ಇದೀಗ ಕೊರೊನಾದಿಂದ ಭಯಪಡಬೇಡಿ, ಜಾಗರೂಕರಾಗಿರಿ ಎಂಬ ಗೀತೆಯನ್ನು ರಚಿಸಿ ಹಾಡಿದ್ದಾರೆ.ಜನರು ಅನಾವಶ್ಯಕವಾಗಿ ಓಡಾಡಬಾರದು, ವೈರಸ್ನಿಂದ ಮುಕ್ತಿ ಪಡೆಯಲು ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಹಾಗೂ ಕೊರೊನಾ ಸೋಂಕಿನ ಬಗ್ಗೆ ಜನರು ಜಾಗರೂಕರಾಗಿರುವಂತೆ ಸಂದೇಶವುಳ್ಳ ಅಂಶಗಳನ್ನು ಶಿಕ್ಷಕ ಹನುಮಂತಪ್ಪ ಕುರಿ ತಮ್ಮ ಜಾಗೃತಿ ಗೀತೆಯಲ್ಲಿ ಹಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಗಳಿಸಿದ್ದಾರೆ.
ಈಗಾಗಲೇ ಕಳೆದ ಬಾರಿ ಕೊರೋನ ಜಾಗೃತಿ ಕುರಿತಾದ ಹಲವಾರು ಗೀತೆಗಳು ರಾಜ್ಯಾದ್ದಂತ ಎಲ್ಲ ಜಿಲ್ಲೆಗಳ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ, ನಗರ ಪಾಲಿಕೆ, ಪಟ್ಟಣ ಪಂಚಾಯತ್, ಸ್ಥಳೀಯ ಪಂಚಾಯತ್ ಹಾಗೂ ಅರೋಗ್ಯ ಇಲಾಖೆಯವರು ಇವರು ರಚಿಸಿದ ಗೀತೆಯನ್ನು ಕೊರೋನ ಜಾಗೃತಿಗೆ ಬಳಸಿಕೊಂಡು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ವಿಷಯವಾಗಿದೆ ಕೊರೋನ ಜಾಗೃತಿ ಗೀತೆಗೆ ಸಂಬಂಧಿಸಿದಂತೆ ಇದು ಐದನೆಯ ಗೀತೆಯಾಗಿದೆ
.
ಎರಡನೇ ಅಲೆಯು ಗ್ರಾಮೀಣ ಮಟ್ಟದಲ್ಲಿಯೂ ತನ್ನ ರುದ್ರ ನರ್ತನ ತೋರುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಶೈಲಿಯಲ್ಲಿ ಹಳ್ಳಿ ಜನರಿಗೆ ಅರ್ಥ ಆಗುವ ಜಾನಪದ ಶೈಲಿಯಲ್ಲಿ ಗೀತೆ ಮೂಡಿಬಂದಿರುವುದು ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ.
ಈ ಜಾಗೃತಿ ಗೀತೆಗೆ ಕಲ್ಬುರ್ಗಿ ವಿಭಾಗೀಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ನಳಿನ್ ಅತುಲ್ ಇವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ