*ಬಣಕಲ್ನಲ್ಲಿ ಜನರ ಬೇಕಾಬಿಟ್ಟಿ ಓಡಾಟ ವಾಹನಗಳ ವಶ ಪೊಲೀಸರಿಂದ ಲಾಠಿ ರುಚಿ*#avintvcom
1 min read
*ಬಣಕಲ್ನಲ್ಲಿ ಜನರ ಬೇಕಾಬಿಟ್ಟಿ ಓಡಾಟ ವಾಹನಗಳ ವಶ
ಕೋವಿಡ್ ನಿಯಮ ಉಲ್ಲಂಘಿಸದವರಿಗೆ ಪೊಲೀಸರಿಂದ ಲಾಠಿ ರುಚಿ*
ಬಣಕಲ್:
ಕೋವಿಡ್ ಎರಡನೇ ಅಲೆಯು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬಣಕಲ್ನಲ್ಲಿ ಅನಗತ್ಯವಾಗಿ ಓಡಾಟ ನಡೆಸುತ್ತಿದ್ದ ಹಾಗೂ ಅಂಗಡಿ ಮುಂಗಟ್ಟುಗಳ ಮುಂದೆ ಅಂತರ ಕಾಪಾಡದೆ ಗುಂಪುಗೂಡಿ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.
ಬಣಕಲ್ನಲ್ಲಿ ಸೋಮವಾರ ಸಂತೆಯ ದಿನವಾಗಿದ್ದು ಬೆಳಿಗ್ಗೆ 10 ಗಂಟೆಯವರೆಗೆ ಸಂತೆ ಇಲ್ಲದಿದ್ದರೂ ಕೂಡ ಸಂತೆಯ ಕೆಲ ವರ್ತಕರು ರಸ್ತೆ ಬದಿಯಲ್ಲಿ ಅಂಗಡಿ ತೆರೆದಿದ್ದರು. ಅಂಗಡಿಗಳ ಮುಂದೆ ಜನ ಅಂತರ ಕಾಯ್ದುಕೊಳ್ಳದೇ ಗುಂಪುಗೂಡಿದ್ದರು. ಅಂಗಡಿ ಮಾಲಿಕರು ಕೂಡ ನಿಯಮ ಉಲ್ಲಂಘಿಸಿದ್ದರಿಂದ ಪೊಲೀಸರು ಕೆಲವು ಅಂಗಡಿಗಳಿಗೆ ದಂಡ ವಿಧಿಸಿದರು. ಅನವಶ್ಯಕವಾಗಿ ವಾಹನಗಳಲ್ಲಿ ತಿರುಗುತ್ತಿದ್ದವರಿಗೆ ಪೋಲಿಸರು ಅನವಶ್ಯಕವಾಗಿ ತಿರುಗಾಡದಂತೆ ಎಚ್ಚರಿಕೆ ನೀಡಿ ಕಳಿಸಿದರು.
ಈ ಬಗ್ಗೆ ಮಾತನಾಡಿದ ಬಣಕಲ್ ಪಿಎಸ್ಐ ಶ್ರೀನಾಥ್ ರೆಡ್ಡಿ, ಅನಗತ್ಯವಾಗಿ ಓಡಾಡುತ್ತಿದ್ದ ಕೆಲವರ ಬೈಕ್, ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಬಣಕಲ್ನಲ್ಲಿ ನಿಯಮ ಉಲ್ಲಂಘಿಸಿದ ಮೂರು ಅಂಗಡಿಗಳು ಹಾಗೂ ಕೊಟ್ಟಿಗೆಹಾರ ದೇವನಗೂಲ್ ಬಳಿಯ ಒಂದು ಅಂಗಡಿ ಮಾಲೀಕರಿಗೆ ದಂಡ ಹಾಕಲಾಗಿದೆ. ಅಂಗಡಿ ಮಾಲಿಕರು ಅಂಗಡಿ ಮುಂದೆ ಅಂತರ ಕಾಪಾಡುವ ವೃತ್ತಗಳನ್ನು ಹಾಕಿ ದಿನಸಿ ನೀಡಬೇಕು. ಸೋಂಕು ತಡೆಯಲು ಸರ್ವರ ಸಹಕಾರ ಅಗತ್ಯವಿದೆ. ತರಕಾರಿಗಳನ್ನು ಹಳ್ಳಿಗಳಿಗೆ ಪಿಕಾಪ್ ಅಥವಾ ತಳ್ಳುವ ಗಾಡಿ ಮೂಲಕ ವ್ಯಾಪಾರ ನಡೆಸಿದರೆ ಜನ ಸಂದಣಿಯನ್ನು ತಡೆಯಬಹುದು. ವರ್ತಕರಿಗೆ ಈ ಬಗ್ಗೆ ಸೂಚಿಸಲಾಗಿದೆ ಎಂದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.