ಕೊರೊನಾ ವಾರಿಯರ್ಸ್ಗೆ ಉಪಹಾರ ಕುಡಿಯುವ ನೀರು ವಿತರಣೆ#avintvcom
1 min read
ಅಹಾರ ವಿತರಣೆ
ಕೊರೊನಾ ವಾರಿಯರ್ಸ್ಗೆ ಉಪಹಾರ ಕುಡಿಯುವ ನೀರು ವಿತರಣೆ
ಚಿಕ್ಕಮಗಳೂರಿನಿಂದ ಕೊಟ್ಟಿಗೆಹಾರದ ಮಾರ್ಗದುದ್ದಕ್ಕೂ ಚೆಕ್ಪೋಸ್ಟ್ ಗಳಲ್ಲಿ ಸಿಗುವ ಪೋಲಿಸರು, ಆರೋಗ್ಯ ಸಹಾಯಕರು ಸೇರಿದಂತೆ ಕೊರೊನಾ ವಾರಿಯರ್ಸ್ಗೆ ಕನ್ನಡ ಸೇನೆಯ ಜಿಲ್ಲಾ ನಗರ ಉಪಾಧ್ಯಕ್ಷ ರಾಜು ಸಿ,ಎಸ್.
ಉಪಹಾರ ಹಾಗೂ ಕುಡಿಯುವ ನೀರು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪುತ್ರ ನಿಖಿಲ್ನೊಂದಿಗೆ ಚಿಕ್ಕಮಗಳೂರಿನಿಂದ ಕೊಟ್ಟಿಗೆಹಾರದವರೆಗೆ ಮುಖ್ಯ ರಸ್ತೆಯ ಕಾರ್ಯನಿರ್ವಹಿಸುತ್ತಿದ್ದ ಪೋಲಿಸರು, ಆರೋಗ್ಯ ಸಹಾಯಕರಿಗೆ ಪಲಾವ್, ಕಾಫಿ,ಟಿ ಕುಡಿಯುವ ನೀರನ್ನು ನೀಡಿದ್ದೇವೆ. ಅಂಗಡಿ ಮುಂಗಟ್ಟುಗಳು, ಹೋಟೆಲ್ ಬಾಗಿಲು ಹಾಕಿರುವುದರಿಂದ ಊಟ ಸಿಗದೇ ತೊಂದರೆ ಅನುಭವಿಸುತ್ತಿದ್ದ ಕೆಲ ನಿರ್ಗತಿಕರು, ಬಿಕ್ಷುಕರು, ದಾರಿಹೊಕ್ಕರಿಗೂ ಕೂಡ ಉಪಹಾರ ಹಾಗೂ ಕುಡಿಯುವ ನೀರನ್ನು ನೀಡಲಾಗಿದೆ ಎಂದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.