ತಾಲ್ಲೂಕಿನಾದ್ಯಂತ ಬಿಗಿ ಬಂದುಬಸ್ತು.ಚೆಕ್ಪೋಸ್ಟಗಳಿಗೆ ತಹಶೀಲ್ದಾರ್,ವೃತ್ತ ನೀರಿಕ್ಷಕರ ಬೇಟಿ.#avintvcom
1 min read
ಕರೋನಾ ಲಾಕ್ಡೌನ್ ಹಿನ್ನಲೆ
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ
ತಾಲ್ಲೂಕಿನಾದ್ಯಂತ ಬಿಗಿ ಬಂದುಬಸ್ತು.
ಚೆಕ್ಪೋಸ್ಟಗಳಿಗೆ ತಹಶೀಲ್ದಾರ್,
ವೃತ್ತ ನೀರಿಕ್ಷಕರ ಬೇಟಿ.
ಪರಿಶೀಲನೆ
ಬಣಕಲ್:ಕೊಟ್ಟಿಗೆಹಾರ ಸೇರಿದಂತೆ ಮೂಡಿಗೆರೆ ತಾಲ್ಲೂಕಿನ ಚೆಕ್ಪೋಸ್ಟ್ಗಳಿಗೆ ಮೂಡಿಗೆರೆ ತಹಶೀಲ್ದಾರ್ ಎಚ್.ಎಂ ರಮೇಶ್ ಹಾಗೂ ವೃತ್ತ ನಿರೀಕ್ಷಕ ಜಗನ್ನಾಥ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಮೂಡಿಗೆರೆ ತಹಶೀಲ್ದಾರ್ ಎಚ್.ಎಂ ರಮೇಶ್ ಮಾತನಾಡಿ ಮೂಡಿಗೆರೆ, ಗೋಣಿಬೀಡು, ಕುದುರೆಮುಖ, ಬಾಳೂರು, ಕಳಸ, ಕಸ್ಕೆಬೈಲ್, ಕನ್ನಾಪುರ, ಕಿರುಗುಂದ, ಕೊಟ್ಟಿಗೆಹಾರ ಮುಂತಾದ ಕಡೆಗಳಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಚೆಕ್ಪೋಸ್ಟ್ಗಳಲ್ಲಿ ಪೊಲೀಸ್ ಸಿಬ್ಬಂದಿಗಳು, ವೈದ್ಯರನ್ನು ನೇಮಿಸಲಾಗಿದೆ.
ಆಯಾ ಮಾರ್ಗಗಳಲ್ಲಿ ಸಂಚರಿಸುವ ವಾಹನಗಳ ಹಾಗೂ ಪ್ರಯಾಣಿಕರ ಮಾಹಿತಿಯನ್ನು ದಾಖಲಿಸಿ ಪ್ರಯಾಣಿಕರ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತದೆ ಎಂದರು.
ಹೊರ ಜಿಲ್ಲೆಗಳಿಂದ ಬರುವರಿಂದಲೆ
ಕೊರೊನಾ ಸೋಂಕು ಹರಡುವ ಸಾದ್ಯತೆಗಳು ಹೆಚ್ಚಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿವೆ.
ಆದ್ದರಿಂದ ಕೊರೊನಾ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಆದ್ಯತೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಜಗನ್ನಾಥ್,
ಹೆಡ್ ಕಾನ್ಸ್ಟೇಬಲ್ ನಂದೀಶ್,
ಕಾನ್ಸ್ ಟೇಬಲ್ ಚಂದ್ರಶೇಖರ್,
ಕಿರಣ್ ಕುಮಾರ್ ಮುಂತಾದವರು ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.