*ಮೂಡಿಗೆರೆ ಕ್ಷೇತ್ರದ ಮಾನ್ಯ ಶಾಸಕರೇ* ಆಸ್ಪತ್ರೆಯಲ್ಲಿ ಸೋಂಕಿತರ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ #avintvcom
1 min read
ಮೂಡಿಗೆರೆ ಕ್ಷೇತ್ರದ ಮಾನ್ಯ ಶಾಸಕರೇ
ಕೊರೋನ ಎನ್ನುವ ಮಹಾಮಾರಿ ವಿಶ್ವವ್ಯಾಪ್ತಿ ಆಕ್ರಮಿಸಿ ಒಂದು ವರ್ಷ ಕಳೆದಿದೆ.
ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ಸೋಂಕಿತರ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಇನ್ನೂ ಅರೋಗ್ಯ ಮಂತ್ರಿಗಳೊಂದಿಗೆ ಚರ್ಚೆ ಮಾಡುವುದರಲ್ಲಿಯೇ ಕಾಲಹರಣ ಮಾಡುತಿದ್ದೀರಿ.
ಒಂದು ತಾಲ್ಲೂಕ್ ಆಸ್ಪತ್ರೆಯಲ್ಲಿ ಇರಬೇಕಾದ ಫ಼ಿವರ್ ಕ್ಲಿನಿಕ್ ಇಲ್ಲ.(ಆಸ್ಪತ್ರೆ ಮುಂಬಾಗಲಿನಲ್ಲಿ ಟೆಂಪ್ ರೆಚರು ನೊಡಲು ಒಬ್ಬರು ವೈದ್ಯರು ಹಾಗು ನರ್ಸ್)
ಸ್ಯಾಂಪಲ್ ಕಲೆಕ್ಷನ್ ಮಾಡುವ ಜಾಗದಲ್ಲಿ ನೆರಳಿಲ್ಲ.
ಕುಡಿಯುವ ನೀರಿನ ವ್ಯವಸ್ತೆ ಇಲ್ಲ.
ಪರಿಕ್ಷೆ ಮಾಡಲು ಆಂಟಿಜೆನ್ ಕಾರ್ಡ್ ಇಲ್ಲ.
ಹಾಗಾಗಿ ರಿಪೊರ್ಟ್ ಬರಲು 5.ದಿನ ಬೇಕಾಗುತ್ತೆ.
ಇದೆಲ್ಲ
ವ್ಯವಸ್ಥೆ ಮಾಡುವಷ್ಟರಲ್ಲಿ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುವುದರಲ್ಲಿ ಎರಡು ಮಾತಿಲ್ಲ.
ಕೊರೋನ ಸೋಂಕಿನ ಫಲಾನುಭವಿಗಳಲ್ಲಿ ತಾವೂ ಕೂಡ ಒಬ್ಬರು ಎಂಬುದನ್ನು ನೆನಪಿಡಿ.
ಜನರ ಆರೋಗ್ಯಕ್ಕೆ ಸಂಬಂಧಪಟ್ಟಂತೆ ತಮ್ಮ ಹಾಗೂ ತಮ್ಮ ಪಕ್ಷದ ಕೊಡುಗೆ ಏನು ಎಂಬುದನ್ನು ಜನರಿಗೆ ತಿಳಿಸಿ ಎಂದು ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯ ಎಂ.ಎಸ್.ಅನಂತ್ ತಿಳಿಸಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.