*ಉರುಳಿಗೆ ಸಿಲುಕಿ ಜಿಂಕೆ ಸಾವು* ಮರ್ಕಲ್ ತೋಟದಲ್ಲಿ ಹಾಕಿದ ಉರುಳಿಗೆ ಜಿಂಕೆಯೊಂದು ಮೃತಪಟ್ಟ ಘಟನೆ #avintvcom
1 min read
ಉರುಳಿಗೆ ಸಿಲುಕಿ ಜಿಂಕೆ ಸಾವು
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೊಕಿನ ಮರ್ಕಲ್ ತೋಟದಲ್ಲಿ ಹಾಕಿದ ಉರುಳಿಗೆ ಜಿಂಕೆಯೊಂದು ಗಾಯಗೊಂಡು ಮೃತಪಟ್ಟ ಘಟನೆ ಮರ್ಕಲ್ ಸಮೀಪದ ಎಸ್ಟೇಟ್ವೊಂದರಲ್ಲಿ ನಡೆದಿದೆ.
ಬುಧವಾರ ಬೆಳಿಗ್ಗೆ ಮರ್ಕಲ್ ಸಮೀಪದ ತೋಟವೊಂದರಲ್ಲಿ ಅಪರಿಚಿತರು ಕಾಡುಪ್ರಾಣಿಗಳ ಬೇಟೆಗೆಂದು ಹಾಕಿದ ಉರುಳಿಗೆ ಜಿಂಕೆಯೊಂದು ಸಿಲುಕಿಕೊಂಡು ಸಾವು ಬದುಕಿನ ನಡುವಿನ ಹೋರಾಡುತ್ತಿದ್ದು ಸ್ಥಳಿಯರು ಕೂಡಲೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಉಪ ವಲಯ ಅರಣ್ಯಾಧಿಕಾರಿ ರಂಜಿತ್ ಉರುಳಿನಲ್ಲಿ ಸಿಲುಕಿಕೊಂಡಿದ ಜಿಂಕೆಯನ್ನು ಬಿಡಿಸಿದ್ದು ವೈದ್ಯಾಧಿಕಾರಿಗಳು ಜಿಂಕೆಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಜಿಂಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದೆ.
ಜಿಂಕೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನಡೆಸಲಾಯಿತು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಉಪ ವಲಯ ಅರಣ್ಯಾಧಿಕಾರಿ ರಂಜಿತ್ ಉರುಳಿಗೆ ಸಿಲುಕಿ ಜಿಂಕೆ ಸಾವಿಗೀಡಾಗಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.