ಹಲಸಿನ ಮರ ಮೊನ್ನೆ ಬಿದ್ದ ಬಾರಿ ಮಳೆಗೆ ಕಚೇರಿ ಕೆಲಸಕ್ಕೆ ಸಾರ್ವಜನಿಕರು ಓಡಾಡುತ್ತಿರುತ್ತಾರೆ.ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಗಮನ ಹರಿಸಿ
1 min readಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆಯ ತಾಲ್ಲೂಕು ಕಚೇರಿ ಎದುರು ಇದ್ದ ಹಲಸಿನ ಮರ ಮೊನ್ನೆ ಬುದುವಾರ ಬಿದ್ದ ಬಾರಿ ಮಳೆಗೆ ಹಲಸಿನ ಮರದ ಬಾರಿ ಕೊಂಬೆಗಳು ಅಡಿಗಡೆ ನಿಲ್ಲಿಸಿದ್ದ ಕಾರು, ಮತ್ತು ಬೈಕಿನ ಮೇಲೆ ಬಿದ್ದು ವಾಹನಗಳು ಜಕಂಗೊಂಡಿದ್ದವು.
ಅ ದಿನವೆ ಮರದ ಕೊಂಬೆಗಳನ್ನು ತೆರವು ಮಾಡಿದ್ದರು.
ತೆರವು ಮಾಡಿದ ಕೊಂಬೆಗಳನ್ನು ಇದುವರೆಗು ಅಲ್ಲಿಂದ ಬೇರೆಡೆಗೆ ಸಾಗಿಸಿರುವುದಿಲ್ಲ.
ಪ್ರತಿ ದಿನ ನೂರಾರು ಸಾರ್ವಜನಿಕರು ಇಲ್ಲಿ ಕಚೇರಿ ಕೆಲಸಕ್ಕೆ ಓಡಾಡುತ್ತಿರುತ್ತಾರೆ.
ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ.
ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕಾದ ಕಚೇರಿ ಯ ಮುಂಬಾಗದಲ್ಲೆ ಹೀಗಾದರೆ ಉಳಿದವರ ಪಾಡೆನು ಎಂಬುದು ಸಾರ್ವಜನಿಕರ ಅಳಲು.
ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಗಮನ ಹರಿಸಿ ಸಮಸ್ಸೆಯನ್ನು ಬಗೆಹರಿಸಬೇಕಾಗಿದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.